ಬೆಂ.ದಕ್ಷಿಣ: ಅನಂತ್ ವರ್ಸಸ್ ನಿಲೇಕಣಿ ವರ್ಸಸ್ ನೀನಾ
ಬೆಂಗಳೂರು, ಏಪ್ರಿಲ್ 9- ರಾಜಧಾನಿಯ ಪ್ರತಿಷ್ಠಿತ ಕಣವಾದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರವು ಹಿಂದೆಂದೂ ಕಾಣದಷ್ಟು ತೀವ್ರ ಕುತೂಹಲ ಕೆರಳಿಸಿದೆ. ಇದಕ್ಕೆ ಮುಖ್ಯ ಕಾರಣ ಕಾಂಗ್ರೆಸ್ ಅಭ್ಯರ್ಥಿ ನಂದನ್ ನಿಲೇಕಣಿ ಮತ್ತು ಹಾಲಿ ಸಂಸದ ಬಿಜೆಪಿಯ ಅನಂತಕುಮಾರ್. ಇದಕ್ಕೆ ಸಾಥ್ ನೀಡುತ್ತಿರುವುದು ಆಮ್ ಆದ್ಮಿ ಪಕ್ಷದ ಅಲೆ. ಈ ತ್ರಿವೇಣಿ ಸಂಗಮದಿಂದಾಗಿ ಬೆಂಗಳೂರು ದಕ್ಷಿಣ ಈ ಬಾರಿ ಭಾರಿ ಗಮನಸೆಳೆದಿದೆ.
ಹೌದು ಕಳೆದ 5 ಅವಧಿಗಳಿಂದ ಬಿಜೆಪಿಯ ಪಟ್ಟಭದ್ರ ಕ್ಷೇತ್ರವಾಗಿರುವ ಬೆಂಗಳೂರು ದಕ್ಷಿಣವು ಇನ್ಫೋಸಿಸ್ ಸಹ ಸಂಸ್ಥಾಪಕ, ಐಟಿ ಅಗ್ರಜ ನಿಲೇಕಣಿ ಅವರಿಂದಾಗಿ ವೆರೈಟಿಯಾಗಿ ಕಾಣುತ್ತಿದೆ. ಮಕ್ಕಳ ಹಕ್ಕು ಹೋರಾಟಗಾರ್ತಿ ನೀನಾ ನಾಯಕ್ ಬೆನ್ನಿಗೆ ಆಮ್ ಆದ್ಮಿ ಅಲೆ ಬೀಸುತ್ತಿರುವುದು ಸೈಲೆಂಟ್ ಕ್ಷೇತ್ರದಲ್ಲಿ ಬಿರುಗಾಳಿಯನ್ನೆಬ್ಬಿಸಿದೆ.
(top contests 2014)
ಏಪ್ರಿಲ್ 17ರಂದು ಚುನಾವಣೆಗೆ ಸಜ್ಜಾಗುತ್ತಿರುವ ಬೆಂಗಳೂರು ದಕ್ಷಿಣದಲ್ಲಿ ಕಳೆದ ಚುನಾವಣೆಯಲ್ಲಿ ಅನಂತಕುಮಾರ್ ಅವರು ಕಾಂಗ್ರೆಸ್ಸಿನ ಕೃಷ್ಣ ಬೈರೇಗೌಡ ಅವರನ್ನು 37 ಸಾವಿರಕ್ಕೂ ಹೆಚ್ಚು ಮತಗಳ ಅಂತರಿದಿಂದ ಗೆದ್ದಿದ್ದರು. ಆದರೆ ಈ ಬಾರಿ ಯಾರೇ ಗೆಲ್ಲಲಿ, ಇಷ್ಟೊಂದು ಭಾರಿ ಅಂತರದಿಂದ ಗೆಲ್ಲುವುದು ದೂರದ ಮಾತೇ ಸರಿ.

ಎಚ್. ಎನ್. ಅನಂತಕುಮಾರ್ (55):
ಮೂಲತಃ ದೇವನಹಳ್ಳಿಯ ಹೆಗ್ಗನಹಳ್ಳಿಯವರು: ಹೆಗ್ಗನಹಳ್ಳಿ ನಾರಾಯಣ ಶಾಸ್ತ್ರಿ ಅನಂತಕುಮಾರ್ ರಾಜಕೀಯದಲ್ಲಿ ಪಳಗಿದ ಹುಲಿ. ಬಿಜೆಪಿಯ ರಾಷ್ಟ್ರೀಯ ವರಿಷ್ಠ ಸ್ಥಾನಮಾನ, ಕಳೆದೈದು ಬಾರಿಯಿಂದ ಒಂದೇ ಸಮನೆ ಗೆದ್ದು ಬರುತ್ತಿದ್ದಾರಾದರೂ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಒಟ್ಟಾರೆಯಾಗಿ ಬಿಜೆಪಿ ಹೀನಾಯಸೋಲುಂಡಿರುವುದು ಲೋಕಸಭಾ ಚುನಾವಣೆಯ ಮೇಲೂ ಪ್ರಭಾವ ಬೀರುವ ಸಾಧ್ಯತೆಯಿದೆ. ಆದರೆ ಬಿಎಸ್ ಯಡಿಯೂರಪ್ಪ ಮರಳಿ ಪಕ್ಷಕ್ಕೆ ಬಂದಿರುವುದಷ್ಟೇ ಅಲ್ಲ, ಕ್ಷೇತ್ರದಲ್ಲಿ ಅನಂತ್ ಪರ ಖುದ್ದು ಪ್ರಚಾರ ನಡೆಸಿರುವುದು ಮತ್ತು ನರೇಂದ್ರ ಮೋದಿ ಅಲೆಯಿರುವುದು ಅನಂತಕುಮಾರ್ ಅವರ ಗೆಲುವಿಗೆ ಸೋಪಾನವಾಗಬಹುದು.
ಪತ್ನಿ ತೇಜಸ್ವಿನಿ ಅವರ ಜನಪರ ಅದಮ್ಯ ಚೇತನ ಎಂಬ ಎನ್ ಜಿಒ ಮೂಲಕ ಸಕ್ರಿಯವಾಗಿರುವುದು ಅನಂತ ಅವಕಾಶಗಳನ್ನು ಹೆಚ್ಚಿಸುವ ಅಂದಾಜಿದೆ. ಆದರೆ ಐಟಿ ದಿಗ್ಗಜ ನಂದನ್ ಮತ್ತು ಆಪ್ ಅಲೆ ಏನು ಮಾಡುವುದೋ ಎಂಬ ಆತಂಕ ಅನಂತಕುಮಾರ್ ಅವರಲ್ಲೂ ಒಂದು ಕ್ಷಣ ಖಂಡಿತ ಮನೆ ಮಾಡುವುದು ಸುಳ್ಳಲ್ಲ.
ನಂದನ್ ಮನೋಹರ್ ನಿಲೇಕಣಿ (58):
ಮೂಲತಃ ಉತ್ತರ ಕನ್ನಡದವರು. ರಾಜಕೀಯದಲ್ಲಿ ಮೊದಲ ಅನುಭವ. ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ವಿಶೇಷ ಗುರುತಿನ ಸಂಖ್ಯೆ ವಿತರಣೆ ಯೋಜನೆ ನಂದನ್ ನಿಲೇಕಣಿ ಅವರ ಲೇಟೆಸ್ಟ್ ಸಾಧನೆ. ಅದಕ್ಕೂ ಮುನ್ನ ಬೃಹತ್ ಪ್ರಮಾಣದಲ್ಲಿ ಇನ್ಫೋಸಿಸ್ ಕಂಪನಿಯನ್ನು ಮೇರುಪರ್ವತದಂತೆ ಕಟ್ಟಿ ಬೆಳೆಸಿದ್ದು.
ಆಡಳಿತಾರೂಢ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕೆಂದರೆ ನಂದನ್ ನಿಲೇಕಣಿ ಅವರಂತಹ ಮೇರು ವ್ಯಕ್ತಿಗಳು ಗೆದ್ದು ಬರಲೇಬೇಕು. ಈ ಸಂದರ್ಭದಲ್ಲಿ ಕ್ಷೇತ್ರದ ಯುವಜನತೆ ನಿಲೇಕಣಿ ಅವರ ಕೈಹಿಡಿಯಬೇಕಿದೆ. ಹಿಂದಿನ ದಿನ ಸರಕಾರಿ ಹುದ್ದೆಗೆ ರಾಜೀನಾಮೆ ಮಾರನೆಯ ದಿನವೇ ಪಕ್ಷಕ್ಕೆ ಸೇರ್ಪಡೆ ನಿಲೇಕಣಿ ಅವರ ಹೆಗ್ಗಳಿಕೆ. ನಂದನ್ ಅವರ ಪತ್ನಿ ರೋಹಿಣೀ ನಿಲೇಕಣಿ ಅವರು ಅರ್ಘ್ಯಂ NGO ಮೂಲಕ ಪತಿಗೆ ನೆರವಾಗುತ್ತಿದ್ದಾರೆ.
ನೀನಾ ನಾಯಕ್ (60):
ಮೂಲತಃ ದಕ್ಷಿಣ ಕನ್ನಡದವರು. ರಾಜಕೀಯದಲ್ಲಿ ಮೊದಲ ಅನುಭವ. ಮಕ್ಕಳ ಅಭಿವೃದ್ಧಿ ಮತ್ತು ಸರಕ್ಷಣೆ ಕ್ಷೇತ್ರದಲ್ಲಿ ಅಪಾರ ಅನುಭವ. ಕರ್ನಾಟಕ ರಾಜ್ಯ ಮಕ್ಕಳ ಹಕ್ಕು ಮತ್ತು ಸಂರಕ್ಷಣಾ ಆಯೋಗದ ಅಧ್ಯಕ್ಷೆ ಆಗಿದ್ದವರು. ಯೋಜನಾ ಆಯೋಗದಡಿಯೂ ಮಕ್ಕಳ ಸಂರಕ್ಷಣಾ ಉಪ ಸಮಿತಿಯ ಸದಸ್ಯರಾಗಿದ್ದವರು.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications