ಗಣೇಶ ಚತುರ್ಥಿ ಆಚರಣೆಗೆ ಈ ನಿಯಮಗಳು ಪಾಲಿಸುವುದು ಕಡ್ಡಾಯ
ಬೆಂಗಳೂರು, ಆಗಸ್ಟ್ 24 : ನಾಳೆ ಗಣೇಶ ಚತುರ್ಥಿ ಹಿನ್ನಲೆಯಲ್ಲಿ ಜನ ಹಬ್ಬಕ್ಕೆ ಭರದ ತಯಾರಿ ನಡೆಸಿದ್ದಾರೆ. ಇತ್ತ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೂಡ ಹಬ್ಬಕ್ಕೆ ಒಂದಿಷ್ಟು ನಿಯಮಗಳನ್ನ ರೂಪಿಸಿದೆ.
ಪರಿಸರ ಸ್ನೇಹಿ ಗಣೇಶ ಪ್ರತಿಷ್ಠಾಪನೆ ಮಾಡಿ ಎಂದು ಜನ ಜಾಗೃತಿ ಮೂಡಿಸಿದರೂ. ಪಿಒಪಿ ಗಣೇಶ ಬಳಕೆಗೆ ಕಡಿವಾಣ ಬಿದ್ದಿಲ್ಲ. ಹೀಗಾಗಿ ಈ ಬಾರಿ ಪಾಲಿಕೆ ಕಟ್ಟು ನಿಟ್ಟಿನ ನಿಯಮಗಳನ್ನು ರೂಪಿಸಿ ಆದೇಶ ಹೊರಡಿಸಿದ್ದು, ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಣೆಗೆ ಕರೆ ನೀಡಿದೆ.

*ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪನೆ.
*ಪ್ಲಾಸ್ಟಿಕ್, ಬ್ಯಾನರ್ಗಳನ್ನು ಬಳಸುವಂತಿಲ್ಲ.
*ರಾತ್ರಿ 10.30ರ ನಂತರ ಧ್ವನಿವರ್ಧಕ, ಪಟಾಕಿಗೆ ನಿಷೇಧ.
*ನಿಗದಿಪಡಿಸಿದ ಸ್ಥಳಗಳಲ್ಲೇ ಗಣೇಶ ವಿಸರ್ಜನೆ.
*ವಿಸರ್ಜನೆ ವೇಳೆ ಹಸಿಕಸ, ಒಣ ಕಸ ವಿಂಗಡಿಸಬೇಕು.
ಗಣೇಶ ವಿಸರ್ಜನಗೆ ಎಲ್ಲೆಲ್ಲಿ ಅವಕಾಶ?
*ಹಲಸೂರು, ಸ್ಯಾಂಕಿ, ಯಡಿಯೂರು, ಹೆಬ್ಬಾಳ.
*ಸಾರಕ್ಕಿ ಕೆರೆ ಸೇರಿದಂತೆ 36 ಕೆರೆಗಳಲ್ಲಿ ಅವಕಾಶ.
*ಮಾಲಿನ್ಯ ಮಂಡಳಿಯಿಂದ 40 ಮೊಬೈಲ್ ಟ್ಯಾಂಕರ್ ವ್ಯವಸ್ಥೆ.
*ಬಿಬಿಎಂಪಿ ಕಡೆಯಿಂದ 250 ಮೊಬೈಲ್ ಟ್ಯಾಂಕರ್.












Click it and Unblock the Notifications