ವಿಡಿಯೋ : 10 ರು ನಾಣ್ಯ ರಿಜೆಕ್ಟ್ ಮಾಡೋಕೆ ನೀವೇನು ರಿಸರ್ವ್ ಬ್ಯಾಂಕಾ?
10 ರುಪಾಯಿ ನಾಣ್ಯ ತಿರಸ್ಕರಿಸಲಿಕ್ಕೆ ನೀನೇನು ರಿಸರ್ವ್ ಬ್ಯಾಂಕಾ ಅಂತ ಕೇಳಿದರೆ, ಹೌದು ನಾನು ರಿಸರ್ವ್ ಬ್ಯಾಂಕೇ, ವಿಡಿಯೋ ಮಾಡ್ಕೋತಿಯಾ, ಮಾಡ್ಕೊಹೋಗು ಅಂತ ದಬಾಯಿಸ್ತಾನೆ ಟೋಲ್ ಸಂಗ್ರಹಕಾರ.
ಬೆಂಗಳೂರು, ಫೆಬ್ರವರಿ 18 : ಅಪನಗದೀಕರಣದ ಹಂತ ಮುಗಿದು, ಇನ್ನು ಎಲ್ಲ ಗೊಂದಲಗಳು ನಿವಾರಣೆಯಾಗಿ, ನಗದಿಗೆ ಸಂಬಂಧಿಸಿದಂತೆ ಎಲ್ಲ ವಹಿವಾಟುಗಳು ಸುಗಮವಾಗುತ್ತವೆ ಎಂದು ಅಂದುಕೊಂಡ ಹೊತ್ತಿನಲ್ಲಿ ತಣ್ಣಗೆ ಕುಳಿತಿದ್ದ 10 ರುಪಾಯಿ ನಾಣ್ಯ ತನ್ನ ಸದ್ದು ಆರಂಭಿಸಿದೆ.
ಹೋಟೆಲಿಗೋ, ಕಿರಾಣಿ ಅಂಗಡಿಗೋ, ಬೇಕರಿಗೋ ಹೋಗಿ 10 ರುಪಾಯಿ ನಾಣ್ಯ ಕೊಡಿ... ತಗೊಳಲ್ಲ ಹೊಗ್ರಿ ಅಂತ ಮುಖದ ಮೇಲೆ ಕ್ಯಾಶಿಯರ್ ಬಿಸಾಕುತ್ತಾನೆ. ಅದು ಆತನ ದುರಂಕಾರವಲ್ಲ. ಬದಲಿಗೆ ಈ ನಾಣ್ಯದ ಕುರಿತಂತೆ ಹುಟ್ಟಿಕೊಂಡಿರುವ ಊಹಾಪೋಹವೇ ಕಾರಣ. [ಪ್ರೇಮಿಗಳಿಗಾಗಿ ಮಾತ್ರ : ಆ ಐನೂರು ರೂಪಾಯ್ ನಿನ್ನನ್ನೇ ನೋಡ್ತಾ ಇದೆ!]

ಬೆಂಗಳೂರು ಏರ್ಪೋರ್ಟ್ ಟೋಲ್ ನಲ್ಲಿ ಶುಕ್ರವಾರ ರಾತ್ರಿ ಇಂತಹದೇ ಗಲಾಟೆ ನಡೆದಿದೆ. ಟೋಲ್ ಸಂಗ್ರಹಕಾರ ಬ್ಯಾಂಕಲ್ಲಿ 10 ರುಪಾಯಿ ನಾಣ್ಯ ತಗೊಳಲ್ಲ ಅಂತ ಕಾರಿನ ಚಾಲಕನಿಗೆ ದಬಾಯಿಸಿದ್ದಾನೆ. ನಾಣ್ಯ ತಿರಸ್ಕರಿಸಲಿಕ್ಕೆ ನೀನೇನು ರಿಸರ್ವ್ ಬ್ಯಾಂಕಾ ಅಂತ ಕೇಳಿದರೆ, ಹೌದು ನಾನು ರಿಸರ್ವ್ ಬ್ಯಾಂಕೇ, ವಿಡಿಯೋ ಮಾಡ್ಕೋತಿಯಾ, ಮಾಡ್ಕೊಹೋಗು ಅಂತ ವಾಚಾಮಗೋಚರವಾಗಿ ಬೈದಿದ್ದಾನೆ.
ಇತ್ತೀಚೆಗೆ ಹೋಟೆಲಿಗೆ ಹೋದಾಗ ಇದೇ ರೀತಿ ಅನುಭವವಾಗಿದೆ. ಹತ್ತು ರುಪಾಯಿ ನಾಣ್ಯ ಕೊಟ್ಟಾಗ, ಈ ನಾಣ್ಯ ಬ್ಯಾನ್ ಮಾಡಿದ್ದಾರೆ, ನಕಲಿ ಕಾಯ್ನುಗಳು ಚಲಾವಣೆಯಲ್ಲಿವೆ ಅಂತ ಇಸಿದುಕೊಳ್ಳಲಿಲ್ಲ. ಅಲ್ರೀ, ನೀವೇ ಕೊಟ್ಟಿದ್ದು ಅಂದಾಗ, ಹಿಂದೆ ಕೊಟ್ಟಿದ್ದಿರಬಹುದು, ಈಗ ಇಸಿದುಕೊಳ್ಳಲ್ಲ ಅಂತ ಮುಖಕ್ಕೆ ರಪ್ ಅಂತ ಹೊಡೆದವರ ಹಾಗೆ ಪ್ರತಿಕ್ರಿಯಿಸಿದ್ದ. [ಶೀಘ್ರದಲ್ಲೇ ದೇಶದಲ್ಲಿ ಹೊಸ ರು.1000 ನೋಟು ಸಾಧ್ಯತೆ]

ಅಸಲಿ ನಾಣ್ಯಗಳ ಜೊತೆ 10 ರುಪಾಯಿಯ ನಕಲಿ ನಾಣ್ಯಗಳು ಚಲಾವಣೆಯಲ್ಲಿವೆ ಎಂದು ಹಬ್ಬಿರುವ ಗಾಳಿಸುದ್ದಿಯಿಂದಾಗಿಯೇ ಇಷ್ಟೆಲ್ಲ ರಾದ್ಧಾಂತಗಳು ನಡೆಯುತ್ತಿವೆ. ಬ್ಯಾಂಕುಗಳು ಕೂಡ ಈ ಕುರಿತಂತೆ ಸ್ಪಷ್ಟನೆ ನೀಡಿದ್ದರೂ ಗ್ರಾಹಕರಲ್ಲಿ ಏನೋ ಹಿಂಜರಿಕೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ಕುರಿತಂತೆ ಸಾಕಷ್ಟು ಸ್ಪಷ್ಟೀಕರಣ ನೀಡಿದೆ. ನಾಣ್ಯಗಳ ಡಿಸೈನನ್ನು ಆಗಾಗ ಬದಲಾಯಿಸುತ್ತಿರುತ್ತೇವೆ. ಯಾವ ನಕಲಿ ನಾಣ್ಯಗಳೂ ಚಲಾವಣೆಯಲ್ಲಿ ಇಲ್ಲ ಎಂದು ಸ್ಪಷ್ಟನೆ ಕೊಟ್ಟರೂ 10 ರುಪಾಯಿ ನಾಣ್ಯಗಳು ತಿರಸ್ಕಾರಕ್ಕೀಡಾಗುತ್ತಿವೆ.
.@BLRAirport @OneindiaKannada @bgmahesh rude employee arguing about Rs 10 coin & refusing to collect at parking #bangalore #10rupees pic.twitter.com/ViEzyGAs4Y
— Jobo Kuruvilla (@jobokuruvilla) February 17, 2017
-
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
Railway Food: ರೈಲು ಪ್ರಯಾಣಿಕರ ಬಳಿ ಬರುತ್ತೆ ಆಹಾರ: ರೈಲ್ವೆ ಇಲಾಖೆಗೆ ಕಂಪನಿಗಳ ಸಾಥ್ -
ಭಾರತೀಯ ರೈಲ್ವೆಯ ಹೊಸ ಹೆಜ್ಜೆ: 12 ಸ್ಲೀಪರ್ ವಂದೇ ಭಾರತ್ ರೈಲುಗಳ ಪರಿಚಯ, ಎಲ್ಲೆಲ್ಲಿ-ಯಾವಾಗ? -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ












Click it and Unblock the Notifications