Get Updates
Get notified of breaking news, exclusive insights, and must-see stories!

Tunnel Road: ಟನಲ್‌ ರಸ್ತೆ ಯಾಕೆ ಬೇಡ ಅಂತ ಡಿಸಿಎಂಗೆ ಮನವರಿಕೆ ಮಾಡ್ತೀನಿ: ತೇಜಸ್ವಿ ಸೂರ್ಯ

ಭವಿಷ್ಯದ ಬೆಂಗಳೂರಿಗಾಗಿ ರಾಜ್ಯ ಕಾಂಗ್ರೆಸ್‌ ಸರ್ಕಾರವು ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಟನಲ್‌ ರಸ್ತೆ ಮಾಡಲು ಹೊರಟಿದೆ. ಇದಕ್ಕೆ ಡಿಸಿಎಂ ಡಿಕೆ.ಶಿವಕುಮಾರ್‌ ಅವರು ವಿಶೇಷ ಕಾಳಜಿ ವಹಿಸಿದ್ದಾರೆ. ಮತ್ತೊಂದೆಡೆ ಬೆಂಗಳೂರಿಗೆ ಟನಲ್‌ ರಸ್ತೆ ಬೇಡ ಎಂದು ವಿರೋಧವೂ ಕೇಳಿಬರುತ್ತಿದೆ. ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಈ ಯೋಜನೆಯನ್ನು ಮೊದಲಿನಿಂದಲೂ ವಿರೋಧ ಮಾಡುತ್ತಲೇ ಬಂದಿದ್ದಾರೆ. ಇದೀಗ ಡಿಸಿಎಂ ಅವರನ್ನು ಭೇಟಿಯಾಗಲು ನಿರ್ಧರಿಸಿದ್ದು, ಟನರ್‌ ರಸ್ತೆ ಯಾಕೆ ಬೇಡ ಅಂತ ಡಿಸಿಎಂಗೆ ಮನವರಿಕೆ ಮಾಡ್ತೀನಿ ಎಂದಿದ್ದಾರೆ.

ನಿನ್ನೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಬೆಂಗಳೂರಿನ ಕಾರ್ಯಯೋಜನೆಯನ್ನು ಕೇಳಿದರು. ಅವರು ಪರ್ಯಾಯ ಪರಿಹಾರಗಳನ್ನು ಕೇಳಿದ್ದಾರೆ. ಈ ನಿಟ್ಟಿನಲ್ಲಿ ಬೆಂಗಳೂರು ತನ್ನ ಸಂಚಾರ ದಟ್ಟಣೆಯನ್ನು ಹೇಗೆ ಪರಿಹರಿಸಬೇಕು ಎಂಬುದರ ಕುರಿತು ಆಲೋಚನೆಗಳನ್ನು ಮಂಡಿಸಲು ನಾನು ಅವರ ಕಚೇರಿಯಿಂದ ಸಮಯ ಕೇಳಿದ್ದೇನೆ ಮತ್ತು ಸಹ ಕೇಳಿದ್ದೇನೆ ಎಂದಿದ್ದಾರೆ.

Tejasvi Surya To Meet DK Shivakumar Opposes Bengaluru Tunnel Road Project

ಬೆಂಗಳೂರಿನ ಸಮಸ್ಯೆಗಳನ್ನು ಪರಿಹರಿಸಲು ಸುಸ್ಥಿರ ಪರಿಹಾರಗಳಿಗಾಗಿ ನಾನು ದೀರ್ಘಕಾಲದಿಂದ ಪ್ರತಿಪಾದಿಸುತ್ತಿದ್ದೇನೆ. ಈ ನಗರದ ನಿವಾಸಿಯಾಗಿ, ಒಳ್ಳೆಯ ವಿಚಾರಗಳನ್ನು ಬೆಂಬಲಿಸುವುದು ನನ್ನ ಜವಾಬ್ದಾರಿ. ಬೆಂಗಳೂರಿನ ಮುಖ್ಯ ಸಮಸ್ಯೆಯನ್ನು ಪರಿಹರಿಸದ ವಿಚಾರಗಳನ್ನು ವಿರೋಧಿಸುವುದು ನನ್ನ ಕರ್ತವ್ಯವಾಗಿದೆ. ಬೆಂಗಳೂರಿಗೆ ತನ್ನ ದೀರ್ಘಕಾಲದಿಂದ ಬಾಕಿ ಇರುವ ಸಮಸ್ಯೆಗಳನ್ನು ಪರಿಹರಿಸಲು ದ್ವಿಪಕ್ಷೀಯ ವಿಧಾನದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಿನ ಬಗ್ಗೆ ಅವರಿಗೆ ಕಾಳಜಿ ಇದೆ

ಡಿ.ಕೆ.ಶಿವಕುಮಾರ್‌ ಅವರು ಹಿರಿಯ ರಾಜಕಾರಣಿ ಮತ್ತು ಆಡಳಿತಾಧಿಕಾರಿ, ಅವರು ನಗರಕ್ಕಾಗಿ ತಮ್ಮ ಕೈಲಾದಷ್ಟು ಮಾಡಲು ಉದ್ದೇಶಿಸಿದ್ದಾರೆ ಎಂದು ಭಾವಿಸಿದ್ದೇನೆ. ನಮ್ಮ ಈ ಚರ್ಚೆಯು ಸುಸ್ಥಿರ ಪರಿಹಾರಗಳನ್ನು ಕಂಡುಕೊಳ್ಳಲು ಮತ್ತು ಬೆಂಗಳೂರನ್ನು ಹೆಚ್ಚು ವಾಸಯೋಗ್ಯ ನಗರವನ್ನಾಗಿ ಮಾಡಲು ಒಟ್ಟಾಗಿ ಕೆಲಸ ಮಾಡಲು ನಮಗೆ ಸಹಾಯ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ. ಇದು ನಗರದ ಪ್ರಮುಖ ಸವಾಲುಗಳನ್ನು ಪರಿಹರಿಸುತ್ತದೆ. ಈ ಸಭೆ ಹೇಗೆ ನಡೆಯುತ್ತದೆ ಎಂಬುದನ್ನು ನಾನು ನಿಮ್ಮೆಲ್ಲರಿಗೂ ತಿಳಿಸುತ್ತೇನೆ ಎಂದಿದ್ದಾರೆ.

ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿ ಮಾಡಲು ಸಮಯ ಕೇಳಿದ್ದೇನೆ. ಅರ್ಧ ಗಂಟೆ ಸಮಯ ಕೊಟ್ಟರೆ ಟನಲ್ ಯೋಜನೆ ಯಾಕೆ ಬೇಡ? ಹಾಗೂ ಅದರಿಂದ ಏನೆಲ್ಲ ಸಮಸ್ಯೆ ಆಗುತ್ತದೆ ಎಂಬುದನ್ನು ಡಿ.ಕೆ.ಶಿವಕುಮಾರ್ ಅವರಿಗೆ ಮನವರಿಕೆ ಮಾಡುತ್ತೇನೆ. ಈ‌ ಟನಲ್‌ ಯೋಜನೆಯ ಬಗ್ಗೆ ಡಿಸಿಎಂಗೆ ಅಧಿಕಾರಿಗಳು ಸರಿಯಾದ ಮಾಹಿತಿ ಕೊಟ್ಟಿಲ್ಲ ಅನಿಸುತ್ತೆ. ಇದರಿಂದ ಸ್ಯಾಂಕಿ ಕೆರೆ, ಲಾಲ್‌ಬಾಗ್‌ ಪ್ರದೇಶಕ್ಕೆ ಹಾನಿಯಾಗುತ್ತೆ. ಹೀಗಾಗಿ ಈ ಯೋಜನೆಯನ್ನು ಮಾಡೇ ತೀರುತ್ತೇನೆ ಅನ್ನೋದು ಜಿದ್ದಿಗೆ ಬೀಳುವುದು ತಪ್ಪು. ಟನಲ್ ಯೋಜನೆ ಬೇಡ ಎಂದು ಹೈಕೋರ್ಟ್‌ನಲ್ಲಿ ಪಿಐಎಲ್‌ ಸಲ್ಲಿಸಿದ್ದಾರೆ. ಇದರ ವಿಚಾರಣೆ ಮಂಗಳವಾರ ನಡೆಯಲಿದ್ದು, ನಾನೇ ವಾದ ಮಂಡಿಸುತ್ತೇನೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+