ಬೆಂಗಳೂರು ಏರ್ಪೋರ್ಟ್ ಪ್ರಯಾಣಿಕರಿಗೆ ಸಿಹಿಸುದ್ದಿ Taxiing Time ಕಡಿತ
ಬೆಂಗಳೂರು, ಫೆಬ್ರವರಿ 18: ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಯಾಣಿಕರಿಗೆ ಸಿಹಿಸುದ್ದಿಯೊಂದಿದೆ. ವಿಮಾನ ನಿಲ್ದಾಣದಲ್ಲಿ ಕಳೆಯುವ ಸಮಯ ಕಡಿತವಾಗಲಿದೆ. ಇದರಿಂದಾಗಿ ಪ್ರಯಾಣಿಕರ ಸಮಯ ಉಳಿತಾಯವಾಗಲಿದೆ. ಸಮಯ ಕಡಿತಗೊಳಿಸಲು ಬಿಐಎಎಲ್ ಕೈಗೊಂಡಿರುವ ಕಾಮಗಾರಿಯು ಅಂತಿಮ ಹಂತಕ್ಕೆ ಬಂದಿದ್ದು, ಶೀಘ್ರವೇ ಲೋಕಾರ್ಪಣೆಯಾಗಲಿದೆ.
ನಿಗದಿತ ಯೋಜನೆಯಂತೆ ನಡೆದರೆ ಮುಂದಿನ ವರ್ಷದ ಅಂತ್ಯದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿಂಗ್ ಟೈಂ ಕಡಿತವಾಗಲಿದೆ. ಟರ್ಮಿನಲ್ನಿಂದ ರನ್ ವೇ ತನಕ ಹೋಗುವ ಸಮಯ ಬೆಂಗಳೂರಿನಲ್ಲಿ ಅತಿ ಹೆಚ್ಚಾಗಿದೆ ಎಂದು ಪ್ರಯಾಣಿಕರು ಸದಾ ದೂರುತ್ತಿದ್ದರು.

ಹೆಚ್ಚಿನ ಟ್ಯಾಕ್ಸಿಂಗ್ ಟೈಂ ಕಾರಣದಿಂದಾಗಿ ವಿಮಾನಗಳು ಸಹ ಹೆಚ್ಚು ಹೊತ್ತು ಟೇಕಾಫ್ ಆಗಲು ಕಾಯಬೇಕಾಗಿದೆ. ಅಲ್ಲದೇ ವಿಮಾನಯಾನ ಕಂಪನಿಗಳು ಟರ್ಮಿನಲ್ನಿಂದ ವಿಮಾನದ ತನಕ ಪ್ರಯಾಣಿಕರನ್ನು ಕರೆದುಕೊಂಡು ಬರಲು ಟ್ಯಾಕ್ಸಿಗೆ ಹೆಚ್ಚಿನ ಇಂಧನವನ್ನು ಹಾಕಿಸಬೇಕಿದ್ದು ನಷ್ಟ ಉಂಟಾಗುತ್ತಿದೆ.
ಬಿಐಎಎಲ್ ಕಾಮಗಾರಿ: ಬಿಐಎಎಲ್ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆ ನೋಡಿಕೊಳ್ಳುತ್ತದೆ. ವಿಮಾನ ನಿಲ್ದಾಣದ ಟ್ಯಾಕ್ಸಿಂಗ್ ಟೈಂ ಕಡಿಮೆ ಮಾಡಲು ಟ್ಯಾಕ್ಸಿ ವೇ ನಿರ್ಮಾಣ ಮಾಡುತ್ತಿದೆ. ಎರಡು ರನ್ ವೇಗಳನ್ನು ಇದು ಸಂಪರ್ಕಿಸುತ್ತದೆ. ಈ ಕಾಮಗಾರಿ 2026ರ ಡಿಸೆಂಬರ್ನಲ್ಲಿ ಪೂರ್ಣಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ.
ಟರ್ಮಿನಲ್ 1 ಮತ್ತು ಟರ್ಮಿನಲ್ 2 ರಿಂದ ಟ್ಯಾಕ್ಸಿಂಗ್ ಟೈಂ ಪಾರ್ಕಿಂಗ್ ಜಾಗ, ರನ್ ವೇ ಬಳಕೆ ಮೇಲೆ ಆಧಾರಿತವಾಗಿದೆ. ಸದ್ಯ ವಿಮಾನ ನಿಲ್ದಾಣದಲ್ಲಿ ಎರಡು ರನ್ ವೇಗಳಿದ್ದು, ಒಂದನ್ನು ಆಗಮನ ಮತ್ತೊಂದನ್ನು ನಿರ್ಗಮನಕ್ಕಾಗಿ ಬಳಕೆ ಮಾಡಲಾಗುತ್ತಿದೆ.
ಟರ್ಮಿನಲ್-1 ಸದ್ಯ ಪ್ರತಿನಿತ್ಯ 480 ಏರ್ ಟ್ರಾಫಿಕ್ ಮೂಮೆಂಟ್ ಮತ್ತು ಟರ್ಮಿನಲ್-2 280 ಏರ್ ಟ್ರಾಫಿಕ್ ಮೂಮೆಂಟ್ ನಿರ್ವಹಣೆ ಮಾಡುತ್ತದೆ. ಅಂದಾಜು ಟ್ಯಾಕ್ಸಿಂಗ್ ಟೈಂ ಸದ್ಯ 10-12 ನಿಮಿಷವಿದೆ. ದಕ್ಷಿಣ ರನ್ ವೇ ಬಳಕೆ ಮಾಡುವ ಟರ್ಮಿನಲ್-1ನಲ್ಲಿ ಇದು 20 ನಿಮಿಷ ತೆಗೆದುಕೊಳ್ಳುತ್ತಿದೆ.
ರನ್ ವೇಯನ್ನು ಒಟ್ಟಾಗಿ ನಿರ್ವಹಣೆ ಮಾಡುವ ಮಾದರಿಯಲ್ಲಿ ಈ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ವಿಮಾನಕ್ಕೆ ಯಾವ ರನ್ ವೇ ಹತ್ತಿರವಾಗಿದೆಯೋ ಅದನ್ನು ನಿಗದಿಗೊಳಿಸಲಾಗುತ್ತದೆ. ಆಗ ಟರ್ಮಿನಲ್ ಮತ್ತು ರನ್ ವೇ ನಡುವಿನ ಪ್ರಯಾಣದ ಅವಧಿ ಕಡಿಮೆಯಾಗಲಿದೆ.
ಉತ್ತರ ರನ್ ವೇನಲ್ಲಿ ಐಎಲ್ಎಸ್ ಕಾಮಗಾರಿ ಪೂರ್ಣಗೊಂಡಿದೆ. ದಕ್ಷಿಣ ರನ್ ವೇಯಲ್ಲಿ ಈ ಕಾಮಗಾರಿ 2025ರ ಏಪ್ರಿಲ್ನಲ್ಲಿ ಪೂರ್ಣವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಕಾಮಗಾರಿಯಿಂದಾಗಿ ರನ್ ವೇಯಲ್ಲಿ ಹವಾಮಾನ ವೈಫರಿತ್ಯದ ಸಮಯದಲ್ಲಿಯೂ ಸುಲಭವಾಗಿ ವಿಮಾನ ಲ್ಯಾಂಡ್ ಮಾಡಲು ಸಹಕಾರಿಯಾಗಲಿದೆ.
ಎರಡು ರನ್ ವೇನಲ್ಲಿ ಆಗಮನ/ ನಿರ್ಗಮನಕ್ಕೆ ಅವಕಾಶ ನೀಡಲು ಎಎಐ ಜೊತೆ ಮಾತುಕತೆ ನಡೆಸಬೇಕು. ಅಲ್ಲದೇ ಯಲಹಂಕ ವಾಯುನೆಲೆ/ ಹೆಚ್ಎಎಲ್ ಜೊತೆ ಹೊಂದಾಣಿಕೆ ಮಾಡಿಕೊಳ್ಳಬೇಕು. ಇದಕ್ಕಾಗಿ ವಾಯುಯಾನ ಪ್ರದೇಶದ ಮರು ಹಂಚಿಕೆಯಾಗಿ ಎಎಐ ಹೊಸ ಮಾರ್ಗಸೂಚಿಯನ್ನು ಪಕ್ರಟಬೇಕಿದೆ.
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications