ಬೆಂಗಳೂರು: ಇಂದಿನಿಂದ ಹೊಸೂರು, ದೇವನಹಳ್ಳಿಗೆ ಮತ್ತೆ ಮೆಮು ರೈಲು ಸೇವೆ
ಬೆಂಗಳೂರು, ಸೆ.22: ಯಶವಂತಪುರ - ಹೊಸೂರು ಡೆಮು ರೈಲುಗಳನ್ನು ರದ್ದುಗೊಳಿಸಿ ಟೀಕೆಗೆ ಒಳಗಾಗಿರುವ ನೈರುತ್ಯ ರೈಲ್ವೆ (ಎಸ್ಡಬ್ಲ್ಯುಆರ್) ಪ್ರಯಾಣಿಕರಿಗೆ ಕೊಂಚ ನೆಮ್ಮದಿ ನೀಡುವ ಕಾರಣದಿಂದ ಗುರುವಾರದಿಂದ ಮೆಮು ರೈಲು ಸೇವೆಗಳನ್ನು ನಡೆಸುವುದಾಗಿ ಮಾಹಿತಿ ನೀಡಿದೆ.
ಯಶವಂತಪುರದಿಂದ ಹೊಸೂರು- ದೇವನಹಳ್ಳಿಗೆ ಮೆಮು ಎಕ್ಸ್ಪ್ರೆಸ್ ವಿಶೇಷ ರೈಲುಗಳು ವಾರದ ಆರು ದಿನಗಳು ಪ್ರಯಾಣಿಕರಿಗೆ ಲಭ್ಯವಾಗಲಿವೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.
06591 ಸಂಖ್ಯೆಯ ಯಶವಂತಪುರ - ಹೊಸೂರು ಕಾಯ್ದಿರಿಸದ ಮೆಮು ಎಕ್ಸ್ಪ್ರೆಸ್ ವಿಶೇಷ ರೈಲು ಬೆಳಿಗ್ಗೆ 6.10 ಕ್ಕೆ ಹೊರಟು 7.50 ಕ್ಕೆ ಹೊಸೂರು ತಲುಪಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇದೇ ರೀತಿ 06592 ಸಂಖ್ಯೆಯ ಹೊಸೂರು - ಯಶವಂತಪುರ ರೈಲು ಹೊಸೂರಿನಿಂದ ಬೆಳಗ್ಗೆ 8.15ಕ್ಕೆ ಹೊರಟು 9.50ಕ್ಕೆ ಯಶವಂತಪುರ ತಲುಪಲಿದೆ.

ಈ ಮೆಮು ರೈಲು ಹೆಬ್ಬಾಳ, ಬಾಣಸವಾಡಿ, ಬೆಳ್ಳಂದೂರು, ಕಾರ್ಮೆಲಾರಂ, ಹೀಲಲಿಗೆ ಮತ್ತು ಆನೇಕಲ್ ರೋಡ್ ನಿಲ್ದಾಣಗಳ ಮೂಲಕಸಾಗಲಿದೆ ಎಂದು ತಿಳಿಸಲಾಗಿದೆ. ಕಚೇರಿಗೆ ಹೋಗುವವರಿಗೆ, ವಿಶೇಷವಾಗಿ ಔಟರ್ ರಿಂಗ್ ರೋಡ್, ಸರ್ಜಾಪುರ ರಸ್ತೆ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಕೆಲಸ ಮಾಡುವ ಟೆಕ್ಕಿಗಳಿಗೆ ಈ ಮೆಮು ರೈಲುಗಳು ಸಹಾಯ ಮಾಡುವ ನಿರೀಕ್ಷೆಯಿದೆ.
ಹೊಸುರಿನ ಜೊತೆಗೆ ಪ್ರತ್ಯೇಕವಾಗಿ ನೈರುತ್ಯ ರೈಲ್ವೆಯು ಗುರುವಾರದಿಂದ ಗಾಡಿ ಸಂಖ್ಯೆ 06593 ಮತ್ತು ಗಾಡಿ ಸಂಖ್ಯೆ 06594 ಯಶವಂತಪುರ-ದೇವನಹಳ್ಳಿ-ಯಶವಂತಪುರ ಕಾಯ್ದಿರಿಸದ ಮೆಮು ಎಕ್ಸ್ಪ್ರೆಸ್ ಅನ್ನು ಪರಿಚಯಿಸಲು ನಿರ್ಧರಿಸಿದೆ.

06593 ಸಂಖ್ಯೆ ಯಶವಂತಪುರ - ದೇವನಹಳ್ಳಿ ರೈಲು ಬೆಳಿಗ್ಗೆ 10 ಗಂಟೆಗೆ ಯಶವಂತಪುರದಿಂದ ಹೊರಟು 10.44 ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು 10.55 ಕ್ಕೆ ದೇವನಹಳ್ಳಿ ತಲುಪುತ್ತದೆ.
ಹಿಂದಿರುಗುವ ಮಾರ್ಗದಲ್ಲಿ, 06594 ಸಂಖ್ಯೆಯ ದೇವನಹಳ್ಳಿ - ಯಶವಂತಪುರ ರೈಲು ದೇವನಹಳ್ಳಿಯಿಂದ ಮಧ್ಯಾಹ್ನ 12.30 ಕ್ಕೆ ಹೊರಟು 12.36 ಕ್ಕೆ ಕೆಐಎ ನಿಲುಗಡೆ ನಿಲ್ದಾಣ ಮತ್ತು ಮಧ್ಯಾಹ್ನ 2.15 ಕ್ಕೆ ಯಶವಂತಪುರವನ್ನು ತಲುಪುತ್ತದೆ.
ಯಶವಂತಪುರ, ದೇವನಹಳ್ಳಿ ಮೆಮು ರೈಲು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಲುಗಡೆ ಹೊಂದಿದ್ದು, ವಿಮಾನ ನಿಲ್ದಾಣ ಮತ್ತು ಯಶವಂತಪುರ ನಡುವೆ ಪ್ರಯಾಣಿಸುವ ಪ್ರಯಾಣಿಕರಿಗೆ ಇದು ನೆರವಾಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
-
Karnataka Weather: ಮಾರ್ಚ್ 12ರ ವರೆಗೆ ಬೆಂಗಳೂರು ಸೇರಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಮುನ್ಸೂಚನೆ -
ಬೆಂಗಳೂರು, ವಿದ್ಯಾಕಾಶಿ ಧಾರವಾಡದಲ್ಲಿ "ವಿದ್ಯಾರ್ಥಿ ಇಂದಿರಾ ಕ್ಯಾಂಟೀನ್" ಆರಂಭ: ಬಜೆಟ್ನಲ್ಲಿ ಘೋಷಣೆ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧ: ಇದು ನಿಜಕ್ಕೂ ಕಾರ್ಯಸಾಧುವೆ? ತಜ್ಞರು ಹೇಳುವುದೇನು? -
Tamarind Cultivation: ಹೊಸಪೇಟೆ ಹುಣಸೆ ಘಟಕಕ್ಕೆ ವಿಶ್ವಬ್ಯಾಂಕ್ ಉನ್ನತ ಮಟ್ಟದ ತಂಡ ಭೇಟಿ, ರೈತರಿಗೆ ಗುಡ್ನ್ಯೂಸ್ ನಿರೀಕ್ಷೆ -
Abhishek Sharma: 'ಅಭಿಷೇಕ್ ಶರ್ಮಾ ಒಬ್ಬ ಬ್ಲೈಂಡ್ ಸ್ಲಾಗರ್': ರೊಚ್ಚಿಗೆದ್ದ ಅಭಿಮಾನಿಗಳು -
Jacob Bethell: ಟೀಂ ಇಂಡಿಯಾ ವಿರುದ್ಧ ಸೋತರೂ ಕನ್ನಡಿಗರ ಮನಗೆದ್ದ 22 ವರ್ಷದ ಜೇಕಬ್ ಬೆಥೆಲ್ -
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಬಜೆಟ್ನಲ್ಲಿ ಹೊಸ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ -
ಕರ್ನಾಟಕ ಬಜೆಟ್ 2026: ನಮ್ಮ ಮೆಟ್ರೋ 41 ಕಿ.ಮೀ ಹೆಚ್ಚುವರಿ ಮಾರ್ಗ ಶೀಘ್ರವಾಗಿ ಪೂರ್ಣ -
Gold Rate Today: ಕರ್ನಾಟಕದ ಬೆಂಗಳೂರಿನಲ್ಲಿ ಬಂಗಾರ ದರ ಇಳಿಕೆ: ಇಲ್ಲಿದೆ ಮಾರ್ಚ್ 6ರ ದರಪಟ್ಟಿ -
Karnataka Budget 2026 PDF: ಕರ್ನಾಟಕ ಬಜೆಟ್ 2026-27 ಪಿಡಿಎಫ್ ಡಾಕ್ಯುಮೆಂಟ್ ಇಲ್ಲಿ ಡೌನ್ಲೋಡ್ ಮಾಡಿ -
ಸಂಜು ನಿಜವಾದ ಮ್ಯಾಚ್ ವಿನ್ನರ್, ವಿಶ್ವದ ನಂ.1 ಟಿ20 ಬ್ಯಾಟರ್ ಅಭಿಷೇಕ್ ಮೇಲೆ ನಂಬಿಕೆಯಿಡಿ: ರವಿಶಾಸ್ತ್ರಿ ಮಹತ್ವದ ಸಲಹೆ












Click it and Unblock the Notifications