Breaking: ಡಬಲ್ ಎಂಜಿನ್ ಸರ್ಕಾರ ಬೇಕು ಹೊರತು ಡಬಲ್ ಸ್ಟೇರಿಂಗ್ ಸರ್ಕಾರವಲ್ಲ: ಸುಧಾಕರ್
ದೊಡ್ಡಬಳ್ಳಾಪುರ, ಸೆಪ್ಟೆಂಬರ್ 10: ಬಿಜೆಪಿಯ ಜನಸ್ಪಂದನ ಕಾರ್ಯಕ್ರಮದಲ್ಲಿ ಸುಧಾಕರ್ ಸುಧೀರ್ಘವಾಗಿ ಮಾತನಾಡಿದ್ದು ಕಾಂಗ್ರೆಸ್ನ ಡಬಲ್ ಸ್ಟೇರಿಂಗ್ ಸರ್ಕಾರ ಬೇಕೆ ಅಥವಾ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಬೇಕೆ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ಸಾಧನೆಯನ್ನು ಬಣ್ಣಿಸುತ್ತಿದ್ದ ಸುಧಾಕಾರ್, "ಬಿಜೆಪಿ ಸರ್ಕಾರ ಮೂರು ವರ್ಷದ ಸಾಧನೆಯನ್ನು ಹಾಡಿ ಹೊಗಳಿದ್ದಾರೆ. ಇಂದೆಂದೂ ಸಹ ಇಂಥ ಸಮಾವೇಶ ನಡೆದಿರಲಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ನಡುಕ ಉಂಟಾಗಿದೆ. ಮೊದಲು ಜನೋತ್ಸವ ಎಂದು ಹೆಸರನ್ನು ಇಡಲಾಗಿತ್ತು. ಇದೀಗ ಜನ ಸ್ಪಂದನೆ ಮಾಡಲಾಗುತ್ತಿದೆ ಎಂದು ಹೇಳಿದರು.
ಇದು ಯಾವ ವ್ಯಕ್ತಿಯ ಉತ್ಸವ ಇಲ್ಲ. ಸರ್ಕಾರದ ರಿಪೋರ್ಟ್ ಕಾರ್ಡ ಅನ್ನು ಜನರ ಮುಂದೆ ಇಡಬೇಕಾಗಿದೆ. ಇದಕ್ಕಾಗಿ ಬಿಎಸ್ ಯಡಿಯುರಪ್ಪ ಮತ್ತು ಬೊಮ್ಮಾಯಿ ಸರ್ಕಾರದ ಸಾಧನೆಯನ್ನು ಸಬಲೀಕರಣವನ್ನು ಜನತೆಯ ಮುಂದೆ ಇಡಲಾಗುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ಗೆಲ್ಲುವ ಮುನ್ನವೇ ಸಿಎಂ ಯಾರು ಎಂದು ಈಗಲೇ ಕಿತ್ತಾಡುತ್ತಿದ್ದಾರೆ. ಅದಕ್ಕಾಗಿ ಡಬಲ್ ಸ್ಟೇರಿಂಗ್ ಸರ್ಕಾರ ಬೇಕೆ ಅಥವಾ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಬೇಕೆ ಎಂದು ಪ್ರಶ್ನಿಸಿದ್ದಾರೆ.
ಡಾ.ರಾಜ್ಕುಮಾರ್ ಅವರ ಸಿನಿಮಾದ ಒಂದು ಗೀತೆಯಂತೆ, ಕಾಂಗ್ರೆಸ್ ನಾಯಕರು ಆಸೆಯಂಬ ಬಿಸಿಲು ಗುದುರೆ ಹತ್ತಿ ಕನಸು ಕಾಣುತ್ತಿದ್ದಾರೆ. ಅವರು ನಿಧಾನಿಸಬೇಕು. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿಯೇ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದರು.