Suburban rail: ಹೀಲಲಿ-ರಾಜಾನುಕುಂಟೆ 'ಕನಕ' ಕಾರಿಡಾರ್ ಬಗ್ಗೆ ಸಿಹಿ ಸುದ್ದಿ, ಜನವರಿಗೆ ಕಾಮಗಾರಿ ಆರಂಭ
ಬೆಂಗಳೂರು, ಡಿಸೆಂಬರ್ 26: ಬೆಂಗಳೂರಿನ ಪಾಲಿಗೆ ವರದಾನವಾಗಿರುವ ಉಪ ನಗರ ರೈಲು ಯೋಜನೆಯ (BSRP) ಕೊನೆಯ ಕಾರಿಡಾರ್ ಹೀಲಲಿಗೆ - ರಾಜಾನುಕುಂಟೆ ವರೆಗಿನ 'ಕನಕ' ನಿರ್ಮಾಣ ಸಂಬಂಧಿಸಿದಂತೆ ಇದ್ದ ವಿಘ್ನಗಳು ನಿವಾರಣೆ ಆಗಿವೆ. ಕೆ-ರೈಡ್ ಮತ್ತ ರೈಲ್ವೆ ಇಲಾಖೆ ಮಧ್ಯದ ಭೂಮಿ ಹಸ್ತಾಂತರದ ಜಗಳ ಅಂತ್ಯಗೊಂಡಿದೆ.
'ಹೀಲಲಿಗೆ - ರಾಜಾನುಕುಂಟೆ' 4ನೇ ಕಾರಿಡಾರ್ ಮಾರ್ಗದಲ್ಲಿ ಕಾಮಗಾರಿ ಆರಂಭವಾಗಿರಲಿಲ್ಲ. ಕಾರಣ ಇಲ್ಲಿ ರೈಲ್ವೆ ಇಲಾಖೆಯು ಕರ್ನಾಟಕ ರೈಲ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಕಂಪನಿಗೆ (K-RIDE) ಅಗತ್ಯ ಭೂಮಿ ನೀಡಿರದ ಕಾರಣ ಈ ಮಾರ್ಗ ನಿರ್ಮಾಣವು ವಿಳಂಬವಾಗಬಹುದು ಎಂದು ಅಂದಾಜಿಸಲಾಗಿತ್ತು.

ಇದೀಗ ರೈಲ್ವೆ ಇಲಾಖೆಗೆ 115.472 ಎಕರೆ ಭೂಮಿ ಹಸ್ತಾಂತರ ಮಾಡಲು ಒಪ್ಪಿಕೊಂಡಿದೆ. ಭೂಮಿ ಕೊಡದ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆಗೆ ಒಟ್ಟು 194.07 ಎಕರೆ ಭೂಮಿಗೆ ಬೇಡಿಕೆ ಇಟ್ಟಿತ್ತು, ಅದರಲ್ಲಿ ಇಲಾಖೆ 115.472 ಭೂಮಿ ನೀಡುವುದಾಗಿ ಒಪ್ಪಿದೆ. ಭೂಮಿ ಸರ್ವೆ ಆರಂಭಿಸಲಾಗಿದ್ದು, ಮುಂದಿನ ದಿನಗಳಲ್ಲಿ ಹೀಲಲಿಗೆ- ರಾಜಾನುಕುಂಟೆ ಮಾರ್ಗದ ಕಾಮಗಾರಿ ಆರಂಭ ನಿರೀಕ್ಷಿಸಹುದು.
ಭೂಮಿ ಹಸ್ತಾಂತರ ಪ್ರಕ್ರಿಯೆ ನಡೆಯುತ್ತಿವೆ
ಸದ್ಯ ಕೊಟ್ಟಿರುವ ಭೂಮಿಯ ಪೈಕಿ ಕಾಮಗಾರಿಗೆ ಇನ್ನೂ ಶೇಕಡಾ ಐದರಷ್ಟು ಖಾಸಗಿ ಭೂಮಿ ನೀಡಬೇಕಿದೆ. ಸದ್ಯ ಭೂಮಿ ದೊರೆತಿದ್ದು, ಟ್ರ್ಯಾಕ್ ಅಲೈನ್ಮೆಂಟ್ ಅನುಮೋದನೆ ದೊರೆಯುವುದು ಬಾಕಿ ಇದೆ. ಸದ್ಯ ಭೂಮಿ ಹಸ್ತಾಂತರ ಪ್ರಕ್ರಿಯೆಗಳು ನಡೆಯುತ್ತಿವೆ.
ಬೆಂಗಳೂರು ಉಪನಗರ ರೈಲು ಯೋಜನೆಯಲ್ಲಿಯೇ ಈ ನಾಲ್ಕನೇ ಕಾರಿಡಾರ್ 'ಕನಕ' ಹೆಚ್ಚು ಉದ್ದದ ಮಾರ್ಗವಾಗಿದೆ. ಇದರ ಕಾಮಗಾರಿ ಆರಂಭಿಸುವ ಆರಂಭದಿಂದಲೂ ವಿಘ್ನಗಳು ಎದುರಾಗಿದ್ದವು. ಈ ನಾಲ್ಕನೇ ಕಾರಿಡಾರ್ ಮಾರ್ಗ ಸಂಪೂರ್ಣವಾಗಿ ಪೂರ್ಣಗೊಂಡರೆ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶ, ಎಲೆಕ್ಟ್ರಾನಿಕ್ಸ್ ಸಿಟಿ ಸೇರಿದಂತೆ ಇನ್ನಿತರ ಪ್ರದೇಶಗಳ ಸಾಕಷ್ಟು ಜನರಿಗೆ ಅನುಕೂಲವಾಗುತ್ತದೆ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.

ಕಾಮಗಾರಿ ಶೇ.80 ರಷ್ಟು ಭೂಮಿ ಲಭ್ಯವಿರಬೇಕು
ಕೆ-ರೈಡ್ ಅಧಿಕಾರಿಗಳ ಪ್ರಕಾರ, ಈ ರೈಲು ಯೋಜನೆಗೆನೀಡಲು ಗುರುತಿಸಲಾಗಿರುವ ಭೂಮಿ ಪೈಕಿ ಶೇಕಡಾ 80 ಪ್ರತಿಶತದಷ್ಟು ಭೂಮಿ ನಮ್ಮಗೆ ದೊರೆತಿರಬೇಕು. ಅದಾಗ ಕಾಮಗಾರಿಗೆ ಚಾಲನೆ ನೀಡಬಹುದಾಗಿದೆ. ಈ ಕುರಿತು ಒಪ್ಪಿಗೆ ನೀಡಿದ್ದ ರೈಲ್ವೆ ಇಲಾಖೆಯು ಕೆರೈಡ್ಗೆ ಭೂಮಿ ನೀಡುವಿಲ್ಲ ವಿಳಂಬವಾಗಿತ್ತು. ಹೀಗಾಗಿ ಉಪನಗರ ರೈಲು ಯೋಜನೆಯ ಈ ನಾಲ್ಕನೇ ಕಾರಿಡಾರ್ ಆರಂಭ ತಡವಾಯಿತು.
ಜನವರಿಗೆ ಸಿಲಿಲ್ ಕೆಲಸ ಆರಂಭ?
ಬಿಎಸ್ಆರ್ಪಿ ಯೋಜನೆಯ ಕಾರಿಡಾರ್ಗೆ 'ಕನಕ' ಮಾರ್ಗದ ಸಿವಿಲ್ ಕೆಲಸಗಳನ್ನು ಮುಂದಿನ ವರ್ಷ ಜನರಿಯಲ್ಲಿ ಕೆ - ರೈಡ್ ಆರಂಭಿಸಲು ಚಿಂತನೆ ನಡೆಸಿದೆ. ಕಳೆದ ಸೆಪ್ಟೆಂಬರ್ನಲ್ಲಿ ಟೆಂಡರ್ ಕರೆಯಲಾಗಿತ್ತು. ಎಲ್ ಆ್ಯಂಡ್ ಟಿ ಕಂಪನಿ 1,021 ಕೋಟಿ ರೂ. ವೆಚ್ಚ ನಮೂದಿಸಿ ಗುತ್ತಿಗೆ ಪಡೆದುಕೊಂಡಿವೆ. ಭೂಮಿ ಹಸ್ತಾಂತರ ಪ್ರಕ್ರಿಯೆ ಪ್ರಗತಿಯಲ್ಲಿದೆ. 2024ರ ಆರಂಭದಲ್ಲಿ ಪೂರ್ಣಗೊಳಿಸುವಂತೆ ಗುಡುವು ನೀಡಲಾಗಿದೆ.
-
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ವಂದೇ ಭಾರತ್ ರೈಲಿನ ಊಟದಲ್ಲಿ ಹುಳು: 'ಅದು ಕೇಸರಿ' ಎಂದ ಸಿಬ್ಬಂದಿ, IRCTCಗೆ 10 ಲಕ್ಷ ದಂಡ -
ಹಿರಿಯ ನಾಗರಿಕರಿಗೆ ರೈಲ್ವೇ ನಿಯಮಗಳು 2026: ರಿಯಾಯಿತಿ ಇಲ್ಲದಿದ್ದರೂ ಸೌಲಭ್ಯಗಳು ಮುಂದುವರಿಕೆ











Click it and Unblock the Notifications