Suburban Rail: ನಮ್ಮ ಮೆಟ್ರೋ ಹೋಲುವ ಪರಿಹಾರದ ಪ್ಯಾಕೇಜ್ ಅನಷ್ಠಾನಕ್ಕೆ ಸರ್ಕಾರ ಒಪ್ಪಿಗೆ
ಬೆಂಗಳೂರು, ನವೆಂಬರ್ 22: ಬೆಂಗಳೂರು ಉಪನಗರ ರೈಲು ಯೋಜನೆ (BSRP) ನಿರ್ಮಾಣದ ವೇಳೆ ಸ್ವಾಧೀನಪಡಿಸಿಕೊಳ್ಳುವ ಭೂಮಿ, ಆಸ್ತಿಗಳ ಮಾಲೀಕರಿಗೆ ಪರಿಹಾರ ನೀಡುವ ಪರಿಹಾರ ಮತ್ತು ಪುನರ್ವಸತಿ ಪ್ಯಾಕೇಜ್ (CRP) ಗೆ ರಾಜ್ಯ ಸರ್ಕಾರ ಸಹಮತ ವ್ಯಕ್ತಪಡಿಸಿದೆ. ಈ ಪ್ಯಾಕೇಜ್ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ನಂತೆಯೇ ಉತ್ತಮವಾಗಿದೆ ಎಂದು ಕೆ-ರೈಡ್ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನೂ 12-ಪುಟದ ಪರಿಹಾರ ಮತ್ತು ಪುನರ್ವಸತಿ ಪ್ಯಾಕೇಜ್ (CRP)ಯಲ್ಲಿ ಒಟ್ಟು 15,767-ಕೋಟಿ ಉಲ್ಲೇಖಿಸಲಾಗಿದೆ. ಇಷ್ಟು ಹಣ ಉಪನಗರ ರೈಲು ಯೋಜನೆಗೆ ಆಸ್ತಿ, ಮನೆ, ಭೂಮಿ ಬಿಟ್ಟುಕೊಟ್ಟ ಮಾಲೀಕರಿಗೆ ಸದ್ಯದ ಆಸ್ತಿ ಬೆಲೆ- ಮಾರುಕಟ್ಟೆ ಬೆಲೆ ಎರಡು ಗಮನವಿಟ್ಟುಕೊಂಡು ವರದಿಯಲ್ಲಿ ಉಲ್ಲೇಕಿಸಲಾಗಿದೆ. ಇದರ ಅನುಷ್ಠಾನಕ್ಕೆ ಸರ್ಕಾರ ಒಪ್ಪಿದೆ ಎಂದು ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಕಂಪನಿ (K-RIDE) ಮೂಲಗಳು ತಿಳಿಸಿವೆ.

ಸಿಆರ್ಪಿಯಲ್ಲಿ ತಿಳಿಸಿರುವಂತೆ ಸ್ವಾಧೀನಪಡಿಸಿಕೊಳ್ಳಬೇಕಾದ ಭೂಮಿಗೆ ಮಾರ್ಗದರ್ಶನ ಮೌಲ್ಯ ಅಥವಾ ಭೂಮಿಯ ಮಾರುಕಟ್ಟೆ ಮೌಲ್ಯದಷ್ಟು ಹಣ ಪಾವತಿಸಲಾಗುವುದು. ಸ್ವಾಧೀನಪಡಿಸಿಕೊಂಡ ಭೂಮಿಗಳ ಪರಿಹಾರವನ್ನು ಶೇಕಡಾ 100ರಷ್ಟು ಸೊಲಾಟಿಯಂ ಮತ್ತು ವಾರ್ಷಿಕವಾಗಿ ಹೆಚ್ಚಾಗುವ ಮಾರುಕಟ್ಟೆಯ ಶೇ.12 ಮೌಲ್ಯವನ್ನು ಪರಿಗಣಿಸಿ ಫಲಾನುಭವಿಗಳಿಗೆ ನೀಡಲು ನಿರ್ಧರಿಸಲಾಗಿದೆ.
ಸಿಆರ್ಪಿಯಲ್ಲಿ ವಿವಿಧ ಅಂಶಗಳು
ಯೋಜನೆ ವ್ಯಾಪ್ತಿಗೆ ಒಳಪಟ್ಟ ಸ್ಲಂ ನಿವಾಸಿಗಳಿಗೆ ವಸತಿ ಬೆಂಬಲ ಅನುದಾನವಾಗಿ ರೂ 5 ಲಕ್ಷ ನೀಡಲಾಗುವುದು. ಇದರೊಂದಿಗೆ ಮಾಲೀಕರ ವರ್ಗಗಳ (ಮನೆ-ವಾಣಿಜ್ಯ-ಸ್ಲಂ) ವಿವರಗಳು ಮತ್ತು ಪರಿಹಾರದ ಜೊತೆಗೆ ಪಾವತಿಸಬೇಕಾದ ಶಿಫ್ಟಿಂಗ್ ಭತ್ಯೆ, ಮತ್ತು ನಿವಾಸ ಬದಲಾಯಿಸುವ ಭತ್ಯೆಯ ಅಂಶಗಳನ್ನು ಸಿಆರ್ಪಿಯಲ್ಲಿ ತಿಳಿಸಲಾಗಿದೆ.
ಉದಾಹರಣೆಗೆ ವ್ಯಕ್ತಿಯೊಬ್ಬರು ಆಸ್ತಿ ಮತ್ತು ಮನೆಯನ್ನು ಕಳೆದುಕೊಂಡಿದ್ದರೆ ಅವರಿಗೆ ಈ ಕೆಳಗಿನವುಗಳನ್ನು ಭತ್ಯೆಯಾಗಿ ಪಾವತಿಸಲಾಗುತ್ತದೆ. 1,000 ಚದರ ಅಡಿವರೆಗಿನ ಸ್ವಾಧೀನಕ್ಕೆ 25,000 ರೂಪಾಯಿ, 1,001 ಚದರ ಅಡಿಗೆ ಪ್ರತಿ ಚ.ಅಡಿಗೆ 1,500 ರೂನಂತರ ಒಟ್ಟು 30,000ರೂ. 1,500 ಚದರ ಅಡಿಗಿಂತ ಹೆಚ್ಚು ಸ್ವಾಧೀನವಾಗಿದ್ದರೆ 35,000 ರೂ. ಒಂದು ಬಾರಿ ಅನನುಕೂಲತೆ ಭತ್ಯೆ ಪಾವತಿ 70,000 ರೂಪಾಯಿ ಪಾವತಿಸಲಾಗುವುದು ಎಂದು ಪ್ಯಾಕೇಜ್ ನಲ್ಲಿ ವಿವರಿಸಲಾಗಿದೆ.

ಮೆಟ್ರೋ ಮಾದರಿಯ ಉತ್ತಮ ಪ್ಯಾಕೇಜ್
ಬೆಂಗಳೂರು ಮೆಟ್ರೋ ಮಾದರಿಯಲ್ಲಿರುವ ಇದೊಂದು ಅತ್ಯುತ್ತಮ ಪರಿಹಾರ ಪ್ಯಾಕೇಜ್ ಎಂದು ಕೆ-ರೈಡ್ನ ಹಿರಿಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಉಪನಗರ ರೈಲು ಯೋಜನೆಗಾಗಿ ಬಳಕೆ ಆಗುವ ಸುಮಾರು ಶೇಕಡಾ 90 ಭೂಮಿ ಭಾರತೀಯ ರೈಲ್ವೇ ಒದಗಿಸಲಿದೆ. ಈ ವೇಳೆ ಖಾಸಗಿ ಭೂಮಾಲೀಕರಿಗೆ ಅವರ ಮನೆ ಸ್ಥಳಾಂತರ ಅಥವಾ ಮನೆ-ಆಸ್ತಿ ಭಾಗ ಯೋಜನೆ ನೀಡುವಾಗ ಅದನ್ನು ಪರಿಹಾರಕ್ಕೆ ಹೋಲಿಕೆ ಮಾಡಿದರೆ ಗಣನೀಯವಾಗಿ ಕಡಿಮೆ ಇರುತ್ತದೆ ಎಂದರು.
ಉಪನಗರ ರೈಲು ಯೋಜನೆಗೆ ವ್ಯಾಪ್ತಿಗೆ ಒಳಪಟ್ಟ ನಿಖರ ಆಸ್ತಿಗಳ ಸಂಖ್ಯೆ ಮತ್ತು ಯೋಜನೆ ಪರಿಣಾಮ ಬೀರುವ ವ್ಯಕ್ತಿಗಳ ಕುರಿತು ಸಮೀಕ್ಷೆ ನಡೆಸಲಾಗುತ್ತಿದೆ. ಸಮೀಕ್ಷೆ ಬಳಿಕ ಸಿದ್ಧವಾಗಿರುವ ಪ್ಯಾಕೇಜ್ ಅಡಿಯಲ್ಲಿ ಮಾಲೀಕರಿಗೆ ಪರಿಹಾರ ನೀಡಲು ಸಾಧ್ಯವಾಗಲಿದೆ ಎಂದು TNIEಗೆ ಕೆರೈಡ್ ಅಧಿಕಾರಿಗಳು ತಿಳಿಸಿದ್ದಾರೆ.
ಕಾರಿಡಾರ್-2ಕ್ಕೆ ಈ 40 ಆಸ್ತಿಗಳು ಅಗತ್ಯ
ನಗರದ ಮತ್ತಿಕೆರೆಯಲ್ಲಿ ಕೊಳಚೆ ಪ್ರದೇಶದಲ್ಲಿರುವ ಜಯರಾಮ್ ಕಾಲೋನಿಯ 40 ಮನೆಗಳು ಹಾನಿಗೊಳಗಾಗುವ ಸಾಧ್ಯತೆ ಇದೆ. ನಮ್ಮ ಕಾರಿಡಾರ್-2 ಯೋಜನೆಗೆ (ಬೆಣ್ಣಿಗೇನಹಳ್ಳಿ-ಚಿಕ್ಕಬಾಣಾವರ) ಇಷ್ಟು ಮನೆಗಳ ಅಗತ್ಯತೆ ಇದೆ. ಈ ಕುರಿತು ಮಾತುಕತೆ ನಡೆದಿದ್ದು, ಯೋಜನೆ ಆರಂಭಕ್ಕೆ ನಿರ್ಧರಿಸಲಾಗಿದೆ.
ಹೀಲಲಿಗೆ-ರಾಜನಗುಂಟೆ ವರೆಗಿನ ಕಾರಿಡಾರ್-4 ವಿಸ್ತರಣೆಗೆ ಸಂಬಂಧಿಸಿದಂತೆ ಕೆಆರ್ ಪುರದ ಸಮೀಪ 138 ಆಸ್ತಿಗಳು ಅಗತ್ಯವಿದೆ. ಇಲ್ಲಿನ ಭೂ ಮಾಲೀಕರಿಗೆ ನಿರ್ದಿಷ್ಟ ಪರಿಹಾರದ ಕುರಿತು ತಿಳಿಸಲು ಸಾಧ್ಯವಾಗಿಲ್ಲ. ಇಲ್ಲಿನದ್ದು ಕಂದಾಯ ಭೂಮಿಯೇ, ಬಿಡಿಎ ಭೂಮಿಯೇ ಇಲ್ಲ ಸ್ವಾಧೀನಕ್ಕೆ ಒಳಪಡುವ ಆಸ್ತಿ ವ್ಯಕ್ತಿ ಹೆಸರಿನಲ್ಲಿದೆಯೆ ಎಂಬ ಆಧಾರದ ಮೇಲೆ ಪರಿಹಾರ ಕ್ರಮಗಳು ಬದಲಾಗುತ್ತವೆ ಎಂದು ಕೆರೈಡ್ ತಿಳಿಸಿದೆ.
-
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ?












Click it and Unblock the Notifications