ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಇನ್ನು ರಾಜ್ಯ ಸರ್ಕಾರ ಹಣ ಹೂಡುವುದಿಲ್ಲ
ಬೆಂಗಳೂರು, ಜು.15: ರಾಜ್ಯ ಬಜೆಟ್ ನ ಮುಕ್ಕಾಲು ಭಾಗ ಹಣವನ್ನು ಬೆಂಗಳೂರು ಅಭಿವೃದ್ಧಿಗೆ ಮೀಸಲಿಡಲಾಗಿದೆ. ಜತೆಗೆ ರೈತರ ಸಾಲ ಮನ್ನಾ ನಂತರದಲ್ಲಿ ರಾಜ್ಯ ಸರ್ಕಾರ ಆರ್ಥಿಕ ಇಕ್ಕಟ್ಟಿನಲ್ಲಿ ಸಿಲುಕಿದೆ ಅದರ ಪರಿಣಾಮ ಹಲವು ಯೋಜನೆಗಳ ಮೇಲೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಕೆದಾರರ ಶುಲ್ಕ ಹೆಚ್ಚಳ ವಿಚಾರಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾ ಲಿಮಿಟೆಡ್ ಎಇಆರ್ಎ ಇತ್ತೀಚೆಗೆ ಪ್ರಸ್ತಾವನೆ ಸಲಲ್ಇಸಿತ್ತು. ಪ್ರಸ್ತಾವನೆ ಮೂಲಕ ಪ್ರತಿಕ್ರಿಯೆ ನೀಡಿರುವ ರಾಜ್ಯ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ, ಕರ್ನಾಟಕ ಸರ್ಕಾರ ಬಡ್ಡಿರಹಿತ ಸಾಲ ಹಾಗೂ ರಿಯಾಯಿತಿ ದರದಲ್ಲಿ ಭೂಮಿಯನ್ನು ಬಿಐಎಎಲ್ಗೆ ನೀಡಿ ಸಹಕರಿಸಿದೆ.
ಖಾಕಿ ಭದ್ರತೆಯಲ್ಲಿ ನವಯುಗ ಟೋಲ್ ನಲ್ಲಿ ಶುಲ್ಕ ಸಂಗ್ರಹ
ಮುಂದೆ ಮತ್ತಷ್ಟು ಈಕ್ವಿಟಿ ಇನ್ಫ್ಯೂಷನ್ ಕಷ್ಟಸಾಧ್ಯ. ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣ ವಿಸ್ತರಣೆ ಯೋಜನೆಗಳನ್ನು ಆದಾಯ ಸಂಗ್ರಹದ ಮೂಲಕ ಅಥವಾ ಸಾಲ ಪಡೆದುಕೊಳ್ಳುವುದುರ ಮೂಲಕ ಪೂರ್ಣಗೊಳಿಸಲಿ ಎಂದು ಉಲ್ಲೇಖಿಸಿದೆ.
ವಿಮಾನ ನಿಲ್ದಾಣ ವಿಸ್ತರಣೆ ಕಾಮಗಾರಿ ಹಾಗೂ ನಿರ್ವಹಣೆಗೆ ಬಿಐಎಎಲ್ಗೆ 413 ಕೋಟಿ ರೂ. ಈಕ್ವಿಟಿ ಇನ್ಫ್ಯೂಷನ್ ಅಗತ್ಯೆಯಿದೆ. ಪೂಔF ಭಾಗದಿಂದ ಟನಲ್ ರಸ್ತೆ ನಿರ್ಮಾಣ ಸೇರಿ ವಿಸ್ತರಣೆ ಕಾಮಗಾರಿಗೆ ಒಟ್ಟು 10,558 ಕೋಟಿ ರೂ. ವೆಚ್ಚವಾಗುವ ನಿರೀಕ್ಷೆಯಿದೆ ಬಿಐಎಎಲ್ ಎಂದು ಪ್ರಸ್ತಾವನೆ ಸಲ್ಲಿಸಿತ್ತು.
ಇದರಲ್ಲಿ ಜಿಎಸ್ಟಿ ವೆಚ್ಚ, 220 ಕೆವಿ ಸಬ್ಸ್ಟೇಷನ್, ಟರ್ಮಿನಲ್ ಅಭಿವೃದ್ಧಿ, ಆಧಾರ್ ಡಿಜಿ ಯಾತ್ರಾ ಯೋಜನೆಯನ್ನು ಎಇಆರ್ಎ ಪುರಸ್ಕರಿಸಿಲ್ಲ.