ಆಧ್ಯಾತ್ಮಿಕ ಗುರು ಶ್ರೀ ಎಮ್ ಅವರ ಶೂನ್ಯ- ಎ ನಾವೆಲ್ ಲೋಕಾರ್ಪಣೆ
ಬೆಂಗಳೂರು, ಮೇ 31: ಪ್ರಖ್ಯಾತ ಆಧ್ಯಾತ್ಮಿಕ ನಾಯಕ, ಸಮಾಜ ಸುಧಾರಕ, ಶಿಕ್ಷಣ ತಜ್ಞ ಹಾಗೂ ಸತ್ಸಂಗದ ಸ್ಥಾಪಕ ಶ್ರೀ ಎಮ್ ಅವರು ಬೆಂಗಳೂರಿನ ಲ್ಯಾಂಡ್ ಮಾರ್ಕ್ ಬುಕ್ ಸ್ಟೋರಿನಲ್ಲಿ ತಮ್ಮ ನೂತನ ಪುಸ್ತಕ 'ಶೂನ್ಯ ಎ ನಾವೆಲ್' ಅನ್ನು ಬಿಡುಗಡೆ ಮಾಡಿದರು.
ಬಿಡುಗಡೆಯ ಬಳಿಕ ತತ್ವಜ್ಞಾನದ ಕುರಿತಾದಂತೆ ಶ್ರೀ ಎಮ್. ಮಾತನಾಡಿದರು. ಈ ವೇಳೆ ಪ್ಯಾನಲ್ ನಲ್ಲಿ ಮಣಿಪಾಲ್ ಗ್ಲೋಬಲ್ ಎಜ್ಯುಕೇಶನ್ ಚೇರ್ ಮ್ಯಾನ್ ಮೋಹನದಾಸ್ ಪೈ, ಐಬಿಎಮ್ ಇಂಡಿಯಾದ ಮಾಜಿ ಕಾರ್ಯನಿರ್ವಾಹಕ ಶಂಕರ್ ಅಣ್ಣಸ್ವಾಮಿ, ಹಾಲಿಡೇ ಐಕ್ಯೂ ಸ್ಥಾಪಕ ಹರಿ ನಾಯರ್ ಉಪಸ್ಥಿತರಿದ್ದರು.
ಮನುಷ್ಯನ ಮನಸ್ಸಿನ ಸೌಂದರ್ಯ ಮತ್ತು ಶಕ್ತಿಯನ್ನು ಅನುಭವಿಸುವ ಕುರಿತು ಮಾತನಾಡಿದ ಶ್ರೀ ಎಮ್., ನಾವು ಯಾವುದೇ ವ್ಯಕ್ತಿಗಳನ್ನು ಅವರ ಹೊರನೋಟದಿಂದ ಅಳೆಯಬಾರದು. ನಾನು ರಚಿಸಿದ ಶೂನ್ಯ ಪುಸ್ತಕವು, ಕಲ್ಪನೆಯ ನಿಯಮಗಳನ್ನು ಉಲ್ಲಂಘಿಸುವ ಮತ್ತು ಉತ್ತಮ ವ್ಯಕ್ತಿತ್ವನ್ನು ಬೆಳೆಸುವ ಬೀಜ ಬಿತ್ತನೆಯ ಕ್ರಮಗಳನ್ನು ಬೋಧಿಸುತ್ತದೆ ಎಂದರು.

ನೂತನ ಪುಸ್ತಕ 'ಶೂನ್ಯ ಎ ನಾವೆಲ್'
ಪ್ರಖ್ಯಾತ ಆಧ್ಯಾತ್ಮಿಕ ನಾಯಕ, ಸಮಾಜ ಸುಧಾರಕ, ಶಿಕ್ಷಣ ತಜ್ಞ ಹಾಗೂ ಸತ್ಸಂಗದ ಸ್ಥಾಪಕ ಶ್ರೀ ಎಮ್ ಅವರು ಬೆಂಗಳೂರಿನ ಲ್ಯಾಂಡ್ ಮಾರ್ಕ್ ಬುಕ್ ಸ್ಟೋರಿನಲ್ಲಿ ತಮ್ಮ ನೂತನ ಪುಸ್ತಕ 'ಶೂನ್ಯ ಎ ನಾವೆಲ್' ಅನ್ನು ಬಿಡುಗಡೆ ಮಾಡಿದರು.

ಶೂನ್ಯ ಕಾದಂಬರಿಯ ಆವೃತ್ತಿಗಳನ್ನು ನಿರೀಕ್ಷಿಸಬೇಕಾಗಿದೆ
ಬಳಿಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಮಣಿಪಾಲ್ ಗ್ಲೋಬಲ್ ಎಜ್ಯುಕೇಶನ್ ಚೇರ್ ಮ್ಯಾನ್ ಮೋಹನದಾಸ್ ಪೈ, ಶೂನ್ಯ ಸಾಮಿಯ ಜೀವನದ ಕುರಿತಾದಂತೆ ಅರ್ಥೈಸಿಕೊಳ್ಳಲು ನಾವು ಶೂನ್ಯ ಕಾದಂಬರಿಯ ಹಲವು ಆವೃತ್ತಿಗಳನ್ನು ನಿರೀಕ್ಷಿಸಬೇಕಾಗಿದೆ ಎಂದರು.
ಶೂನ್ಯವು ಶ್ರೀ ಎಂ.ರವರು ಬರೆದ ಪ್ರಥಮ ಕಾದಂಬರಿಯಾಗಿದೆ. ಈಗಾಗಲೇ ಶ್ರೀ ಎಮ್ ರವರು ತತ್ವಶಾಸ್ತ್ರ, ಯೋಗ ಹಾಗೂ ಭಾರತೀಯ ಪುರಾಣಗಳ ಕುರಿತು ಹಲವಾರು ಪುಸ್ತಕಗಳನ್ನು ರಚಿಸಿದ್ದಾರೆ. ಈ ಪುಸ್ತಕವು ಶೂನ್ಯ ಸಾಮಿ ಎಂಬ ವ್ಯಕ್ತಿಯ ಸಾಹಸಮಯ ಜೀವನದ ಕುರಿತು ಬೆಳಕು ಚೆಲ್ಲುತ್ತದೆ.
ಶೂನ್ಯ ಅಂದರೆ ತನ್ನನ್ನು ತಾನೇ ಸೊನ್ನೆ (ಶೂನ್ಯ) ಎಂದು ಕರೆಸಿಕೊಳ್ಳುವ ಶೂನ್ಯ ಸಾಮಿ ಶರಬು ಅಂಗಡಿಯ ಪಕ್ಕದಲ್ಲೇ ಇರುವ ಸಣ್ಣ ಗುಡಿಸಲಿನಲ್ಲಿ ವಾಸಿಸುವ ವ್ಯಕ್ತಿ. ಈತ ಅಲ್ಲೇ ಚಹಾ ಹೀರುತ್ತಾ, ತಬ್ಬಿಕೊಳ್ಳುತ್ತಾ, ಮುತ್ತಿಡುತ್ತಾ, ಶಾಪಗಳನ್ನು ಹಾಕಿಸಿಕೊಂಡು, ಒದೆ ತಿನ್ನುತ್ತಾ ಒಂದರ್ಥದಲ್ಲಿ ಸಂಪೂರ್ಣ ಸ್ವತಂತ್ರವಾಗಿ ಬದುಕುವ ವ್ಯಕ್ತಿ.

ಪುಸ್ತಕ ಮಳಿಗೆಗಳಲ್ಲಿ ಲಭ್ಯವಿದೆ
ಈ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಐಬಿಎಮ್ ಇಂಡಿಯಾದ ಮಾಜಿ ಕಾರ್ಯನಿರ್ವಾಹಕ ಶಂಕರ್ ಅಣ್ಣಸ್ವಾಮಿ, ನನಗೆ ಈ ಪುಸ್ತಕದೊಂದಿಗೆ ಸಂಬಂಧ ಸಾಧಿಸಲು ಸಾಧ್ಯವಾಯಿತು. ಏಕೆಂದರೆ ಆ ಪುಸ್ತಕದಲ್ಲಿ ಉಲ್ಲೇಖಿಸಲ್ಪಟ್ಟಿರುವ ಪ್ರದೇಶಗಳಲ್ಲೇ ನಾನು ಬೆಳೆದಿದ್ದು ಎಂದು ಹೇಳಿದರು.
ಬಳಿಕ ಈ ಕುರಿತು ಮಾತನಾಡಿದ ಹಾಲಿಡೇ ಐಕ್ಯೂ ಸ್ಥಾಪಕ ಹರಿ ನಾಯರ್, ಶ್ರೀ ಎಮ್. ಓರ್ವ ಪ್ರಭಾವಿ ಬರಹಗಾರನೆನ್ನುವುದು ಅವರ ಪುಸ್ತಕಗಳನ್ನು ಓದಿದಾಗಲೇ ತಿಳಿಯಲು ಸಾಧ್ಯ ಎಂದು ಹೇಳಿದರು.ಶೂನ್ಯ ಕಾದಂಬರಿಯು ಈಗಾಗಲೇ ಆನ್ ಲಯನ್ ಹಾಗೂ ಪುಸ್ತಕ ಮಳಿಗೆಗಳಲ್ಲಿ ಲಭ್ಯವಿದೆ.

ಲೇಖಕ ಶ್ರೀ ಎಮ್ ಕುರಿತು
ಮುಮ್ತಾಝ್ ಅಲಿ ಹೆಸರಿನಲ್ಲಿ ಕೇರಳದ ತಿರುವನಂತಪುರಂನಲ್ಲಿ ಹುಟ್ಟಿದ ಶ್ರೀ ಎಮ್, ಓರ್ವ ಆಧ್ಯಾತ್ಮಿಕ ನಾಯಕ, ಸಮಾಜ ಸುಧಾರಕ ಹಾಗೂ ಶಿಕ್ಷಣ ತಜ್ಞರಾಗಿದ್ದಾರೆ. ಇವರು ಸತ್ಸಂಗ ಎಂಬ ಸಂಸ್ಥೆಯೊಂದನ್ನು ಸ್ಥಾಪಿಸಿದ್ದಾರೆ. ಈಗಾಗಲೇ ಶ್ರೀ ಎಮ್ ರವರು ತತ್ವಶಾಸ್ತ್ರ, ಯೋಗ ಹಾಗೂ ಭಾರತೀಯ ಪುರಾಣಗಳ ಕುರಿತು ಹಲವಾರು ಪುಸ್ತಕಗಳನ್ನು ರಚಿಸಿದ್ದಾರೆ. ಆಹ್ವಾನದ ಮೇರೆಗೆ ನವದೆಹಲಿಯಲ್ಲಿ ಇವರು ಭಾರತೀಯ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ್ದರು. ಮಾತ್ರವಲ್ಲದೇ, ಲಂಡನ್ ಹೌಸ್ ನಲ್ಲೂ ಪ್ರವಚನ ನೀಡಿದ್ದರು. 2011ರಲ್ಲಿ ಇವರು ಬರೆದ ಎ ಆಟೋಬಯೋಗ್ರಫಿ ಆಫ್ ಯೋಗಿ ಪುಸ್ತಕವು ವಿಶ್ವದಾದ್ಯಂತ ಲಕ್ಷಾಂತರ ಸಂಖ್ಯೆಯಲ್ಲಿ ಮಾರಾಟಗೊಂಡಿದ್ದವು.
-
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ












Click it and Unblock the Notifications