ಬೆಂಗಳೂರು : ಶಬರಿಮಲೆಗೆ ರಾಜಹಂಸ ಬಸ್ ಸೇವೆ
ಬೆಂಗಳೂರು, ಡಿ. 6 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಶಬರಿಮಲೆಗೆ ತೆರಳುವ ಭಕ್ತರ ಅನುಕೂಲಕ್ಕಾಗಿ ಬೆಂಗಳೂರಿನಿಂದ ಪಂಪಾಗೆ ರಾಜಹಂಸ ಬಸ್ ಸೇವೆಯನ್ನು ಆರಂಭಿಸುತ್ತಿದೆ. ಡಿ. 12 ರಿಂದ ಜ. 12ರವರೆಗೆ ಈ ಬಸ್ ಸಂಚರಿಸಲಿದೆ.
ಎರಡು
ತಿಂಗಳ
ಪವಿತ್ರ
ಶಬರಿಮಲೆ
ಯಾತ್ರೆ
ಈಗಾಗಲೇ
ಆರಂಭಗೊಂಡಿದ್ದು,
ಲಕ್ಷಾಂತರ
ಭಕ್ತರು
ಅಯ್ಯಪ್ಪ
ಸ್ವಾಮಿ
ದೇವರ
ದರ್ಶನಕ್ಕೆ
ತೆರಳುತ್ತಿದ್ದಾರೆ.
ಆದ್ದರಿಂದ
ಕೆಎಸ್ಆರ್ಟಿಸಿ
ಭಕ್ತರ
ಅನುಕೂಲಕ್ಕಾಗಿ
ರಾಜಹಂಸ
ಬಸ್
ಸೇವೆಯನ್ನು
ಆರಂಭಿಸಲಿದೆ.
[ಸ್ವಾಮಿಯೇ
ಅಯ್ಯಪ್ಪ,
ಭಕ್ತಿ
ಪರವಶತೆಯ
ಮಹಾಪೂರ]
ಬಸ್ ಮಾರ್ಗ : ಡಿ. 12 ರಿಂದ ಜ. 12ರವರೆಗೆ ಈ ಬಸ್ ಸಂಚರಿಸಲಿದ್ದು, ಮೈಸೂರು, ಗುಂಡ್ಲುಪೇಟೆ, ಕ್ಯಾಲಿಕಟ್, ಗುರುವಾಯೂರು, ಕೊಟ್ಟಾಯಂ ಮಾರ್ಗವಾಗಿ ಪಂಪಾಗೆ ತೆರಳಲಿದೆ. [ಚಿತ್ರಗಳಲ್ಲಿː ಶಬರಿಮಲೆಗೆ ಭಕ್ತರ ತಂಡ]
ಸಮಯ : ರಾಜಹಂಸ ಬಸ್ ಮಧ್ಯಾಹ್ನ 1 ಗಂಟೆಗೆ ಬೆಂಗಳೂರಿನಿಂದ ಹೊರಡಲಿದ್ದು, ಮರುದಿನ ಬೆಳಗ್ಗೆ 8.30ಕ್ಕೆ ಪಂಪಾ ತಲುಪಲಿದೆ. ಅಲ್ಲಿಂದ ಮಧ್ಯಾಹ್ನ 3ಕ್ಕೆ ಹೊರಡುವ ಬಸ್ ಮರುದಿನ ಬೆಳಗ್ಗೆ 10ಕ್ಕೆ ಬೆಂಗಳೂರಿಗೆ ಮರಳಲಿದೆ ಅಂದಹಾಗೆ ಬಸ್ ಪ್ರಯಾಣ ದರ 825. ರೂ ಗಳಾಗಿದೆ. [ಟಿಕೆಟ್ ಬುಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ]
20 ತಾಸು ಸಂಚಾರ ಬಂದ್ : ಕಾಸರಗೋಡು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಸಮೀಪದ ಗುರುವಾರ ಮಧ್ಯರಾತ್ರಿ ಗ್ಯಾಸ್ ಟ್ಯಾಂಕರ್ವೊಂದು ಅಪಘಾತಕ್ಕೀಡಾದ ಪರಿಣಾಮ ಸಣ್ಣ ಪ್ರಮಾಣದಲ್ಲಿ ಅನಿಲ ಸೋರಿಕೆ ಉಂಟಾಗಿತ್ತು. ಇದರಿಂದಾಗ ಗುರುವಾರ ಮಧ್ಯರಾತ್ರಿಯಿಂದ ಶುಕ್ರವಾರ ರಾತ್ರಿ 7 ಗಂಟೆ ವರೆಗೆ ಸುಮಾರು 20 ತಾಸುಗಳ ಕಾಲ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು. ಟ್ಯಾಂಕರ್ ಬಿದ್ದ ಸ್ಥಳದ ಪಕ್ಕದಲ್ಲೇ ರೈಲು ಹಳಿ ಇರುವುದರಿಂದ ಈ ಮಾರ್ಗವಾಗಿ ಸಾಗುವ ಎಲ್ಲ ರೈಲು ಸಂಚಾರವನ್ನೂ ಸ್ಥಗಿತಗೊಳಿಸಲಾಗಿತ್ತು.