ಹುತಾತ್ಮ ಯೋಧರ ಸ್ಮರಣೆ ಬದಲು ಕಾಂಗ್ರೆಸ್ ತುತ್ತೂರಿ, ಏನ್ರೀ ಸಿಎಂ ಇದೆಲ್ಲ?
ಹುತಾತ್ಮ ಯೋಧರ ಕಾರ್ಯಕ್ರಮವೊಂದಕ್ಕೆ ತಡವಾಗಿ ಬಂದು ಸಿಎಂ ಸಿದ್ದರಾಮಯ್ಯ ನಿವೃತ್ತ ಯೋಧರ ಅಸಮಾಧಾನಕ್ಕೆ ಕಾರಣರಾಗಿದ್ದಾರೆ. ಅಷ್ಟೇ ಅಲ್ಲ, ಅದೊಂದು ರಾಜಕೀಯ ಸಮಾರಂಭದಂತೆ ಆಗಿ, ನಿವೃತ್ತ ಯೋಧರು ಬೇಸರ ಮಾಡಿಕೊಂಡಿದ್ದಾರೆ
ಬೆಂಗಳೂರು, ಮೇ 17: ಯುದ್ಧದ ಸ್ಮರಣೆಯಲ್ಲಿ ನಡೆದ ಕಾರ್ಯಕ್ರಮವು ರಾಜಕೀಯ ಸಮಾರಂಭದಂತೆ ಆಗಿದ್ದಕ್ಕೆ ಬೆಂಗಳೂರಿನಲ್ಲಿ ಭಾರತೀಯ ಸೇನೆ ಹಾಗೂ ವಾಯು ದಳದ ನಿವೃತ್ತರು ಬೇಸರ ವ್ಯಕ್ತಪಡಿಸಿದ್ದಾರೆ. ಬ್ರಿಗೇಡ್ ರಸ್ತೆಯಲ್ಲಿರುವ ಹಳೆ ಸ್ಮಾರಕವನ್ನು ಮಂಗಳವಾರ ಮತ್ತೆ ಉದ್ಘಾಟನೆ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ನಿವೃತ್ತ ಸೇನಾ ಯೋಧರನ್ನು ಆಹ್ವಾನಿಸಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖ್ಯ ಆಹ್ವಾನಿತರಾಗಿದ್ದರು.
ಕಾರ್ಯಕ್ರಮವು ಒಂದು ಗಂಟೆ ತಡವಾಗಿದ್ದರಿಂದ ನಿವೃತ್ತ ಸೇನಾ ಯೋಧರು ಮುಜುಗರಕ್ಕೀಡಾದರು. ನಿವೃತ್ತ ಕರ್ನಲ್ ಕೆಡಿ ಶೆಲ್ಲಿ ಎಎನ್ ಐ ಸುದ್ದಿ ಮಾಧ್ಯಮದ ಜತೆ ಮಾತನಾಡಿ, ಹಲವರು ದೂರದ ಊರುಗಳಿಂದ ಕಾರ್ಯಕ್ರಮಕ್ಕೆ ಮುಂಚಿತವಾಗಿಯೇ ಬಂದಿದ್ದರು. ಯುದ್ಧ ಸ್ಮರಣೆ ಅಥವಾ ಹುತಾತ್ಮರ ಅಂತ್ಯಕ್ರಿಯೆ ನಮ್ಮ ಪಾಲಿಗೆ ತುಂಬ ಪವಿತ್ರವಾದದ್ದು ಎಂದಿದ್ದಾರೆ.[ಬಡೇರಿಯಾ ಬಂಧನಕ್ಕೂ, ರಾಜ್ಯಸರ್ಕಾರಕ್ಕೂ ಸಂಬಂಧವಿಲ್ಲ-ಸಿದ್ದರಾಮಯ್ಯ]

ಬೆಳಗ್ಗೆ ಹತ್ತು ಮೂವತ್ತಕ್ಕೆ ಕಾರ್ಯಕ್ರಮ ಇತ್ತು ನಮಗೆ ಮಾಹಿತಿ ಇತ್ತು. ಅದರ ಪ್ರಕಾರ ಇಲ್ಲಿದ್ದೆವು. ವೇದಿಕೆ ಮೇಲೆ ಮಾತನಾಡಲು ಆರಂಭಿಸಿದ ಸ್ಥಳೀಯ ಮುಖಂಡರು ಸರಕಾರದ ಯೋಜನೆಗಳು, ಚಟುವಟಿಕೆ ಬಗ್ಗೆ ಮಾತನಾಡಲು ಆರಂಭಿಸಿದಾಗ ಮದ್ರಾಸ್ ರೆಜಿಮೆಂಟ್ ನ ಹವಾಲ್ದಾರರಾಗಿದ್ದ ಗುಮ್ಕಾರ್ ಅವರಿಗೆ ತೀರಾ ಸಿಟ್ಟು ಬಂತು. ಅಂಥ ವಿಚಾರ ಹೇಳೋಕೆ ಇಂಥ ವೇದಿಕೆ ಬೇಕೆ ಎಂದು ಪ್ರಶ್ನಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅದೇನು ಸಮಯ ತಿಳಿಸಿದ್ದರೋ ಅವರು ಮಧಾಹ್ನ ಹನ್ನೆರಡರ ಹೊತ್ತಿಗೆ ಬಂದರು. ಅವರ ಜತೆ ಬಾಡಿಗಾರ್ಡ್ ಗಳು, ಸ್ಥಳೀಯ ಮುಖಂಡರು ಬಂದರು. ಯುದ್ಧ ಸ್ಮರಣೆ ಬಗ್ಗೆಗಾಗಲೀ ಅಥವಾ ಹುತಾತ್ಮ ಯೋಧರ ಬಗ್ಗೆಯಾಗಲೀ ಏನೂ ಮಾತನಾಡಲಿಲ್ಲ. ಸಿದ್ದರಾಮಯ್ಯ ಅವರಿಗೆ ಈ ಬಗ್ಗೆ ಏನೇನೂ ಗೊತ್ತಿರಲಿಲ್ಲ ಅನ್ನಿಸುವಂತಿತ್ತು ಸ್ಥಿತಿ ಎಂದು ಶೆಲ್ಲಿ ಹೇಳಿದ್ದಾರೆ.[ಓದುಗರು ಕೇಳಿರುವ ಪ್ರಶ್ನೆಗಳಿಗೆ ರಮ್ಯಾ ಉತ್ತರಿಸುವರೆ?]
ಯುದ್ಧ ಸ್ಮಾರಕಕ್ಕೆ ನಾನು ಗೌರವ ನೀಡಲಿಲ್ಲವೇ? ಎಂದು ಸಿಎಂ ಪ್ರತಿಕ್ರಿಯಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಬೇಸರ ವ್ಯಕ್ತಪಡಿಸಿದ ನಿವೃತ್ತ ಯೋಧರು, ಕಾರ್ಯಕ್ರಮದ ಉದ್ದೇಶವೇ ಮೂಲೆಗುಂಪಾಗಿದ್ದಕ್ಕೆ ಅಸಮಾಧಾನ ತೋಡಿಕೊಂಡಿದ್ದಾರೆ.
-
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
AI ಎಫೆಕ್ಟ್: 2026ರಲ್ಲೂ ಮುಂದುವರಿದ ಉದ್ಯೋಗ ಕಡಿತ; ಯಾವ್ಯಾವ ಕಂಪನಿಗಳಿಂದ ಎಷ್ಟು ವಜಾ? ಪಟ್ಟಿ ಇಲ್ಲಿದೆ -
Jobs: ಹೈಕೋರ್ಟ್ನಲ್ಲಿ ಕೆಲಸ ಬೇಕೆ? 70 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ -
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು












Click it and Unblock the Notifications