ಕನ್ನಡದಲ್ಲೇ ಸೇವೆ ನೀಡುವ 'ಶೆಲ್' ಉಳಿದವಕ್ಕೂ ಮಾದರಿಯಾಗಲಿ
ಬೆಂಗಳೂರು, ಜುಲೈ 6: ಜಗತ್ತಿನ ಅತ್ಯಂತ ಪ್ರಸಿದ್ಧ ಇಂಧನ ಕಂಪನಿಗಳಲ್ಲೊಂದಾದ ಶೆಲ್, ಕರ್ನಾಟಕದಲ್ಲಿ ಕನ್ನಡದಲ್ಲೇ ಸೇವೆ ನೀಡುತ್ತಿರುವುದು ಕನ್ನಡಿಗರ ಮನಸ್ಸನ್ನು ತಟ್ಟಿದೆ. ಬಹುಪಾಲು ಕನ್ನಡಿಗರು ಶೆಲ್ ಕಂಪನಿಯ ಕಾಯಂ ಗ್ರಾಹಕರಾಗುವುದಕ್ಕೂ ಇದೇ ಕಾರಣವಾಗಿದೆ.
ಶೆಲ್ ಕಂಪನಿ ಕರ್ನಾಟಕದಲ್ಲಿರುವ ತನ್ನ ಪೆಟ್ರೋಲ್ ಬಂಕ್ ಗಳಲ್ಲಿ ಇಂಗ್ಲಿಷ್ ಬದಲಾಗಿ ಕನ್ನಡದಲ್ಲೇ ಜಾಹಿರಾತು ನೀಡುತ್ತಿರುವುದು, ಮತ್ತು ತನ್ನ ಭಿತ್ತಿಪತ್ರದಲ್ಲಿಯೂ ಕನ್ನಡವನ್ನೇ ಉಪಯೋಗಿಸಿರುವುದು ಕನ್ನಡ ಪ್ರೇಮಿಗಳ ಮೆಚ್ಚುಗೆಗೆ ಕಾರಣವಾಗಿದೆ. ಇದೀಗ ಶೆಲ್ ನಂತೆಯೇ ಬೇರೆ ಕಂಪನಿಗಳೂ ಕನ್ನಡದಲ್ಲೇ ಸೇವೆ ನೀಡಬೇಕೆಂಬ ಮನವಿಯೂ ಕೇಳಿಬರುತ್ತಿದೆ.

ಆರು ಕೋಟಿ ಕನ್ನಡ ಗ್ರಾಹಕರನ್ನು ತಲುಪಲು ತಮ್ಮ ಗ್ರಾಹಕ ಸೇವೆಗಳನ್ನು ಕನ್ನಡದಲ್ಲೇ ನೀಡುತ್ತಿರುವ ಶೆಲ್ ಪೆಟ್ರೊಲಿಯಂ ಸಂಸ್ಥೆಯ ಹೆಜ್ಜೆ ಶ್ಲಾಘನೀಯ ಎಂದು 'ಕನ್ನಡ ಗ್ರಾಹಕ' ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದ್ದು, ಈ ಟ್ವೀಟ್ ಗೆ ಹಲವರು ತಮ್ಮ ಬೆಂಬಲ ಸೂಚಿಸಿದ್ದಾರೆ.
6ಕೋಟಿ #ಕನ್ನಡ ಗ್ರಾಹಕರನ್ನ ತಲುಪಲು ತಮ್ಮ ಗ್ರಾಹಕ ಸೇವೆಗಳನ್ನು ಕನ್ನಡದಲ್ಲಿ ನೀಡುತ್ತಿರುವುದು ಶೆಲ್ ಪೆಟ್ರೋಲಿಯಂ ಸಂಸ್ಥೆಯಿಂದ ಸರಿಯಾದ ಹೆಜ್ಜೆ.#ServeInMyLanguage pic.twitter.com/7gARjNysYP
— KGK (@KannadaGrahaka) July 4, 2017
ಶೆಲ್ ಪೆಟ್ರೋಲ್ ಕಂಪನಿಯಂತೆ ಇಂಡಿಯನ್ ಆಯಿಲ್, ಹಿಂದುಸ್ತಾನ್ ಪೆಟ್ರೋಲಿಯಂ, ಭಾರತ್ ಪೆಟ್ರೋಲಿಯಂ ಸಂಸ್ಥೆಗಳೂ ಕರ್ನಾಟಕದಲ್ಲಿ ಗ್ರಾಹಕರಿಗೆ ಕನ್ನಡದಲ್ಲೇ ಸೇವೆ ಒದಗಿಸಲಿ ಎಂದು ಮಂಜುನಾಥ್ ಬಿಲ್ಲವ ಎನ್ನುವವರೂ ಇದಕ್ಕೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿದ್ದಾರೆ.
ಶೆಲ್ ಪೆಟ್ರೋಲಿಯಂ ಸಂಸ್ಥೆಯಂತೆ ಕರ್ನಾಟಕದಲ್ಲಿ ಎಲ್ಲಾ ಪೆಟ್ರೋಲಿಯಂ ಸಂಸ್ಥೆಗಳು @karnataka_ioc @HPCL @BPCLimited ಗ್ರಾಹಕ ಸೇವೆಗಳನ್ನು ಕನ್ನಡದಲ್ಲಿಒದಗಿಸಲಿ.
— Manjunath Billava (@Manju27486832) July 5, 2017
ಕರ್ನಾಟಕದ ಜನರಿಂದ ಆದಾಯ ಪಡೆಯುತ್ತಿರುವ ಕಂಪನಿಗಳು ಕನ್ನಡವನ್ನು ವ್ಯವಹಾರದ ಭಾಷೆಯನ್ನಾಗಿ ಮತ್ತು ಗ್ರಾಹಕ ಸೇವೆಗಾಗಿ ಬಳಸಬೇಕೆಂಬ ಕೂಗಿನ ಹಿಂದೆ, ಕನ್ನಡ ಭಾಷೆಯನ್ನು ಉಳಿಸುವ, ಬೆಳೆಸುವ ಉದ್ದೇಶವಿರುವುದು ಗಮನಾರ್ಹ.ಕರ್ನಾಟಕದಲ್ಲಿರುವ ಹ್ಯುಂಡೈ ಕಾರ್ ಸರ್ವಿಸ್ ಕೇಂದ್ರಗಳೂ ತಮ್ಮ ಅನಿಸಿಕೆ ಪತ್ರ (feedback form) ವನ್ನು ಕನ್ನಡದಲ್ಲೇ ಮುದ್ರಿಸಿ, ಕನ್ನಡ ಗ್ರಾಹಕರನ್ನು ಸೆಳೆದಿದೆ.
ಹಾಗೆಯೇ ಜರ್ಮನಿ ಮೂಲದ ಲುಫ್ತಾನ್ಸಾ ಏರ್ ಲೈನ್ಸ್ ಕಂಪನಿಯೂ ಕರ್ನಾಟಕದಲ್ಲಿ ಕನ್ನಡಿಗರಿಗಾಗಿ, ಕನ್ನಡದಲ್ಲೇ ಸೇವೆ ಆರಂಭಿಸಿರುವುದನ್ನೂ ಇಲ್ಲಿ ಉಲ್ಲೇಖಿಸಬಹುದು.
-
Gold Rate: ಬಂಗಾರ ಮತ್ತಷ್ಟು ದುಬಾರಿ: 16,000 ರೂ. ದಾಟಿದ ಚಿನ್ನ, ಬೆಳ್ಳಿ ಬೆಲೆ ಕೂಡ ಏರಿಕೆ, ಇಲ್ಲಿದೆ ಇಂದಿನ ದರ ವಿವರ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ












Click it and Unblock the Notifications