Get Updates
Get notified of breaking news, exclusive insights, and must-see stories!

ಗೇಮ್ ಆಡ್ತಿರೋದು ನಾವಲ್ಲ, ಎಂಟಿಬಿ ಮತ್ತವರ ಮಗ: ಶರತ್ ಬಚ್ಚೇಗೌಡ

ಬೆಂಗಳೂರು, ನವೆಂಬರ್ 20: ಗೇಮ್ ಆಡ್ತಿರೋದು ನಾವಲ್ಲ ಎಂಟಿಬಿ ನಾಗರಾಜ್ ಮತ್ತವರ ಮಗ ಎಂದು ಹೊಸಕೋಟೆ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಆರೋಪಿಸಿದ್ದಾರೆ.

ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡ್ರು ಅನ್ನೋತರ ಅವರು ಗೇಮ್ ಆಡ್ತಿದ್ದಾರೆ. ಗರುಡಾಚಾರ್ ಪಾಳ್ಯದಲ್ಲಿ ಕಾಂಗ್ರೆಸ್‌ನಿಂದ ಮಗ ಕಾರ್ಪೊರೇಟರ್ ಆಗಿದ್ದಾರೆ.

ಆದರೆ ಇಲ್ಲಿ ಬಂದು ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಪರ ಮತ ಯಾಚನೆ ಮಾಡುತ್ತಿದ್ದಾರೆ. ಇದು ಯಾವ ರೀತಿಯ ನೈತಿಕತೆ ಎಂದು ಗೊತ್ತಾಗುತ್ತಿಲ್ಲ. ಆವರು ಆಟವಾಡುತ್ತಿರುವ ಕಾರಣ ನಾವೂ ಆಡುತ್ತೇವೆ ಎನ್ನುತ್ತಿದ್ದಾರೆ , ಬಚ್ಚೇಗೌಡರು ನನಗೆ ಬೆಂಬಲ ನೀಡುತ್ತಿಲ್ಲ, ಎಲ್ಲೂ ಬಂದು ನನ್ನ ಜೊತೆ ನಿಂತಿಲ್ಲ.

Sharath Alleges Serious Allegations Against MTB Nagaraj

ಬಚ್ಚೇಗೌಡರು ಎಲ್ಲಿದ್ದಾರೆ ಎನ್ನುವ ಮಾಹಿತಿ ಕೂಡ ನನಗಿಲ್ಲ, ಬಹುಶಃ ಪಾರ್ಲಿಮೆಂಟ್ ಸೆಷನ್‌ನಲ್ಲಿ ಭಾಗವಹಿಸಿರಬಹುದು ಎಂದರು. ಕುಮಾರಸ್ವಾಮಿಯವರು ಪ್ರಚಾರಕ್ಕೆ ಬರುವ ವಿಚಾರ ಕುರಿತು ಮಾತನಾಡಿರುವ ಅವರು, ನಮ್ಮ ಮುಖಂಡರೊಂದಿಗೆ ಚರ್ಚಿಸಿ ಅವರನ್ನು ಕರೆಸುವ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.

ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಗಳ ಹೆಚ್ಚಳ ವಿಚಾರದ ಕುರಿತು ಮಾತನಾಡಿರುವ ಅವರು, ಕ್ಷೇತ್ರದಲ್ಲಿ ಈ ಬಾರಿ 21 ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ವೋಟ್ ಮಿಷನ್‌ನಲ್ಲಿ ನನ್ನ ಹೆಸರು ಹಿಂದೆ ತಳ್ಳಬೇಕು, ಎನ್ನುವ ನಿಟ್ಟನಲ್ಲಿ ಈ ರೀತಿಯ ಷಡ್ಯಂತ್ರ ಮಾಡುತ್ತಿರಬಹುದು.

ಆದರೆ ಜನರು ಈಗ ತುಂಬಾ ಹುಷಾರಾಗಿದ್ದಾರೆ. ಹೀಗಾಗಿ ಅವರು ಹುಡುಕಿಕೊಂಡು ಬಂದು ನನಗೆ ಮತ ಹಾಕುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಶರತ್ ಭರವಸೆ ವ್ಯಕ್ತಪಡಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+