ಐಐಎಸ್ಸಿ ಸಂಶೋಧನಾ ನಿರತ ವಿಜ್ಞಾನಿ ದಾರುಣ ಸಾವು
ಬೆಂಗಳೂರು, ಡಿಸೆಂಬರ್ 5: ಪ್ರಯೋಗ ನಡೆಸುವ ವೇಳೆ ಸಿಲಿಂಡರ್ ಸ್ಫೋಟಗೊಂಡು ಏರೋಸ್ಪೇಸ್ ವಿಭಾಗದ ವಿಜ್ಞಾನಿ ಮೃತಪಟ್ಟಿರುವ ಘಟನೆ ಬೆಂಗಳೂರಿನ ಐಐಎಸ್ಸಿ ಯಲ್ಲಿ ನಡೆದಿದೆ.
ಏರೋಸ್ಪೇಸ್ ವಿಭಾಗದ ವಿಜ್ಞಾನಿ ಮನೋಜ್ ಕುಮಾರ್ (32) ಮೃತರು. ಅವರು ಹೈದರಾಬಾದ್ ಮೂಲದವರಾಗಿದ್ದರು. ಪ್ರಯೋಗಾಲಯದಲ್ಲಿ ಪ್ರಯೋಗದಲ್ಲಿ ತೊಡಗಿದ್ದಾಗ ಸುಮಾರು ಎರಡು ಗಂಟೆ ವೇಳೆಗೆ ಸ್ಫೋಟ ಸಂಭವಿಸಿದೆ. ಅಲ್ಲಿ ಅಡುಗೆ ಅನಿಲವಿದ್ದ ಕಾರಣ ಅದರಿಂದಲೇ ಸ್ಫೋಟ ಸಂಭವವಿಸರಬಹುದು ಎಂದು ಅಂದಾಜಿಸಲಾಗಿದೆ.

ಅವರ ಜೊತೆಗಿದ್ದ ನಾಲ್ವರು ಕೂಡ ಗಂಭೀರವಾಗಿ ಗಾಯಗೊಂಡಿದ್ದು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ನರೇಶ್ , ಅತುಲ್ಯ, ಕಾರ್ತಿಕ್ಗೆ ಗಂಭೀರ ಗಾಯಗಳಾಗಿವೆ.












Click it and Unblock the Notifications