ಆರೆಸ್ಸೆಸ್: ಉನ್ನತಮಟ್ಟದ ಮಹತ್ವದ ಸಭೆ ಮಾರ್ಚ್ 7ರಿಂದ
ಬೆಂಗಳೂರು, ಮಾರ್ಚ್4- ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರೆಸ್ಸೆಸ್) ಉನ್ನತಮಟ್ಟದ, ಮಹತ್ವದ ಸಭೆ ಇದೇ ಮಾರ್ಚ್ 7ರಿಂದ ಮೂರು ದಿನಗಳ ಕಾಲ ಬೆಂಗಳೂರು ಹೆಬ್ಬಾಳದಲ್ಲಿರುವ ಥಣಿಸಂದ್ರದಲ್ಲಿ ನಡೆಯಲಿದೆ.
RSSನ ನೀತಿ ನಿರೂಪಣೆ ಜವಾಬ್ದಾರಿಯನ್ನು ನಿರ್ವಹಿಸುವ ಅಖಿಲ ಭಾರತೀಯ ಪ್ರತಿನಿಧಿ ಸಭಾದ (ABPS) ಮೂರನೆಯ ವಾರ್ಷಿಕ ಮಹಾಸಭೆ ಇದಾಗಿದೆ. ಥಣಿಸಂದ್ರದಲ್ಲಿರುವ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಮಾರ್ಚ್ 7,8 ಮತ್ತು 9ರಂದು ಈ ವಿಶೇಷ ಸಭೆ ನಡೆಯಲಿದೆ. ಆರೆಸ್ಸೆಸ್ ಸರಸಂಘಚಾಲಕ ಡಾ. ಮೋಹನ್ ರಾವ್ ಭಾಗವತ್ ಸಭೆಯನ್ನು ಉದ್ಘಾಟಿಸಲಿದ್ದಾರೆ ಎಂದು ಆರೆಸ್ಸೆಸ್ ಮೂಲಗಳು ತಿಳಿಸಿವೆ.

ದೇಶಾದ್ಯಂತ ಇರುವ ಸಂಘದ ಶಾಖೆಗಳ ಮೂಲಕ ಆಯ್ಕೆಯಾಗಿರುವ ಪ್ರತಿನಿಧಿಗಳು, ಸಂಘದ ರಾಜ್ಯ ಮಟ್ಟದ ಹೊಣೆಗಾರಿಕೆಯ ಪದಾಧಿಕಾರಿಗಳು ಜತೆಗೆ ಸಂಘ ಪರಿವಾರದ 40ಕ್ಕೂ ಅಧಿಕ ಸಂಘಟನೆಗಳ ರಾಷ್ಟ್ರೀಯ ಸ್ತರದ ಕಾರ್ಯಕರ್ತರು ಇದರಲ್ಲಿ ಭಾಗವಹಿಸಲಿದ್ದಾರೆ. ಭಾರತೀಯ ಜನತಾ ಪಕ್ಷದ ಪ್ರಮುಖರೂ ಇದರಲ್ಲಿ ಭಾಗವಹಿಸಲಿದ್ದಾರೆ.
ದೇಶದ ಆಗುಹೋಗುಗಳನ್ನು ಪ್ರಭಾವಿಸುವ ಪ್ರಮುಖ ವಿಷಯಗಳ ಕುರಿತು ಚರ್ಚಿಸಿ, ಸಭೆ ನಿರ್ಣಯ ಅಂಗೀಕರಿಸಲಿದೆ. ಸಮಾಜದ ನಾನಾ ಸ್ತರಗಳನ್ನು ಪ್ರತಿನಿಧಿಸಿ, ಸುಮಾರು 1400 ಸಾಮಾಜಿಕ ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.












Click it and Unblock the Notifications