ಗುಡ್ನ್ಯೂಸ್: ಬನ್ನೇರುಘಟ್ಟದಲ್ಲಿ 25 ಮೀಟರ್ ಎತ್ತರದ ವೀಕ್ಷಣಾ ಟವರ್ ನಿರ್ಮಾಣಕ್ಕೆ ಒಪ್ಪಂದ
ಬೆಂಗಳೂರು: ರೋಹಿಣಿ ನೀಲೇಕಣಿ ಅವರು ಕರ್ನಾಟಕ ಸರ್ಕಾರದ ಝೂ ಅಥಾರಿಟಿ ಯ ಭಾಗವಾದ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಜೊತೆ ಝೂ ವ್ಯಾಪ್ತಿಯಲ್ಲಿ 25 ಮೀಟರ್ ಎತ್ತರದ ಸಾರ್ವಜನಿಕ ವೀಕ್ಷಣಾ ಟವರ್ ನಿರ್ಮಿಸಲು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
5 ಕೋಟಿ ಅನುದಾನದಲ್ಲಿ ಪಾಲುದಾರಿಕೆಯ ಈ ಯೋಜನೆಯು ಪರಿಸರ ಆಧಾರಿತ ಕಲಿಕೆ. ಪರಿಸರ ರಕ್ಷಣೆ ಜಾಗೃತಿ ಹೆಚ್ಚಿಸುವ ಹಾಗೂ ಭಾರತದ ಪ್ರಮುಖ ವನ್ಯಜೀವಿ ಮತ್ತು ಇಕೋ ಟೂರಿಸಮ್ನಲ್ಲಿ ಸಂದರ್ಶಕರ ಅನುಭವ ಹೆಚ್ಚಿಸುವ ಗುರಿಯನ್ನು ಹೊಂದಿದೆ. ಬನ್ನೇರುಘಟ್ಟ ಜೈವಿಕ ಉದ್ಯಾನವನವು ವಾರ್ಷಿಕವಾಗಿ 2.2 ಮಿಲಿಯನ್ ಸಂದರ್ಶಕರನ್ನು ಸೆಳೆಯುತ್ತಿದ್ದು ವನ್ಯಜೀವಿ ರಕ್ಷಣೆ, ಅಧ್ಯಯನ ಮತ್ತು ಸಾರ್ವಜನಿಕ ಶಿಕ್ಷಣದಲ್ಲಿ ಮಹತ್ವದ ಪಾತ್ರ ವಹಿಸಿದೆ.

ಪ್ರಸ್ತಾಪಿಸಲಾದ ಸಾರ್ವಜನಿಕ ವೀಕ್ಷಣಾ ಟವರ್ ಉದ್ಯಾನವನಕ್ಕೆ ಹೊಸ ಸೇರ್ಪಡೆಯಾಗಿ ಸುರಕ್ಷಿತವಾಗಿ ವನ್ಯಜೀವಿ ವೀಕ್ಷಣೆ ಹಾಗೂ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಹಾಗೂ ಬೆಂಗಳೂರು ಸ್ಕೈಲೈನ್ನ ವಿಹಂಗಮ ನೋಟವನ್ನು ಪ್ರವಾಸಿಗರಿಗೆ ನೀಡುತ್ತದೆ. ಒಂದು ಬಾರಿಗೆ 50-70 ಜನರಿಗೆ ವೀಕ್ಷಣೆಯ ಸೌಲಭ್ಯವನ್ನು ನೀಡಲು ವಿನ್ಯಾಸಗೊಳಿಸಲಾಗಿದ್ದು , ಸುಸ್ಥಿರ ಸೌಲಭ್ಯಗಳಾದ ಸೌರ ಶಕ್ತಿ , ಮಳೆ ನೀರು ಕೊಯ್ಲಿ ಹಾಗೂ ಪರಿಸರ ಸ್ನೇಹಿ ಮೂಲಸೌಕರ್ಯವನ್ನು ಕಲ್ಪಿಸಲಾಗಿದೆ.
ಈ ಬಗ್ಗೆ ಮಾತನಾಡಿದ ರೋಹಿಣಿ ನೀಲೇಕಣಿ ಫಿಲಾನ್ಥ್ರೋಫಿಸ್ನ ಚೇರ್ಪರ್ಸನ್ ರೋಹಿಣಿ ನೀಲೇಕಣಿ ಅವರು, ಸಾರ್ವಜನಿಕ ಸಂಸ್ಥೆಗಳಾದ ಬನ್ನೇರುಘಟ್ಟ ಜೈವಿಕ ಉದ್ಯಾನವನ ಜನರಿಗೆ ವಿದ್ಯಾರ್ಥಿಯಂತೆ, ಟ್ರಸ್ಟಿಯಂತೆ ಹಾಗೂ ವೀಕ್ಷಕರಂತೆ ಪರಿಸರದ ಜೊತೆ ಸಂಪರ್ಕ ಸಾಧಿಸಲು ಇರುವ ಪ್ರಮುಖ ಪ್ರದೇಶವಾಗಿದೆ. ಪ್ರಕೃತಿಯ ಜೊತೆ ನಮ್ಮ ನಿತ್ಯದ ಸಂಪರ್ಕ ಕುಸಿಯುತ್ತಿದ್ದಂತೆ ಅನುಭವಗಳನ್ನು ಹಂಚಿಕೊಳ್ಳುವುದರ ಮೂಲಕ, ಕತೆಗಳನ್ನು ಹಂಚಿಕೊಳ್ಳುವುದರ ಮೂಲಕ, ಪರಿಸರದ ಜೊತೆ ಸಂಪರ್ಕ ಹೊಂದುವುದರ ಮೂಲಕ ಪುನಃ ನಿರ್ಮಿಸಬೇಕಾಗುತ್ತದೆ. ಈ ಟವರ್ ಕುತೂಹಲವನ್ನು ಹೆಚ್ಚಿಸಿ ಪರಿಸರದೆಡೆಗಿನ ಕಾಳಜಿಯನ್ನು ಹೆಚ್ಚಿಸುತ್ತದೆ ಎಂದು ನಂಬಿದ್ದೇನೆ ಎಂದರು.
ಈ ಯೋಜನೆಯು ಪರಿಸರ ರಕ್ಷಣೆ ಕೇಂದ್ರಿತ ವಿಷಯಗಳು ಸೇರಿ ಶೈಕ್ಷಣಿಕ ವೈಶಿಷ್ಟ್ಯಗಳು ಮತ್ತು ಚಿಂತನಶೀಲವಾಗಿ ವಿನ್ಯಾಸಗೊಳಿಸಲಾದ ವೀಕ್ಷಕರ ಅನುಭವಗಳನ್ನು ಹೊಂದಿದೆ . ಜೊತೆಗೆ ಈ ಯೋಜನೆಯು ಸುಸ್ಥಿರ ಪ್ರವಾಸೋದ್ಯಮ ಹಾಗೂ ಸ್ಥಳೀಯ ಜೀವನೋಪಾಯ ಸೃಷ್ಟಿಸುವ ಗುರಿಯನ್ನೂ ಹೊಂದಿದೆ.
ಯೋಜನೆ ಕುರಿತು ಮಾತನಾಡಿದ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರಾದ ಎ.ವಿ.ಸೂರ್ಯ ಸೇನ್, ಐಎಫ್ಎಸ್ ಈ ಪಾಲುದಾರಿಕೆಯು ಸಂರಕ್ಷಣೆ, ಶಿಕ್ಷಣ ಮತ್ತು ಸುಸ್ಥಿರ ಪ್ರವಾಸೋದ್ಯಮದೆಡೆಗಿನ ನಮ್ಮ ಬದ್ದತೆಯನ್ನು ಬಲಗೊಳಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ.
ಪ್ರಸ್ತಾಪಿತ ಟವರ್ ಪರಿಸರ ಆಧಾರಿತ ಕಲಿಕೆಯ ಮೂಲಕ ಸಂದರ್ಶಕರ ಅನುಭವವನ್ನು ಹೆಚ್ಚಿಸುವುದು ಮಾತ್ರವಲ್ಲದೇ ಪರಿಸರ ಸ್ನೇಹಿ ಮೂಲಸೌಕರ್ಯದೆಡೆಗೆ ಬದ್ದತೆಯ ಪ್ರತೀಕವಾಗಿ ನಿಲ್ಲಲಿದೆ. ರೋಹಿಣಿ ನೀಲೇಕಣಿ ಫಿಲಾನ್ಥ್ರೋಫಿಸ್ ನ ಬೆಂಬಲದೊಂದಿಗೆ ನಮ್ಮ ನೈಸರ್ಗಿಕ ಪರಂಪರೆಯನ್ನು ಕಾಪಾಡುವುದರ ಜೊತೆಗೆ ಲಕ್ಷಾಂತರ ಸಂದರ್ಶಕರನ್ನು ವನ್ಯಜೀವಿ ಸಂರಕ್ಷಣೆಯತ್ತ ಪ್ರೇರೇಪಿಸಲು ನಾವು ಮತ್ತಷ್ಟು ಸಬಲರಾಗಿದ್ದೇವೆ ಎಂದರು.
-
April 9 Horoscope: 12 ರಾಶಿಗಳಿಗೆ ಇಂದು ಸಂತೋಷ, ಸವಾಲು ಮತ್ತು ಅವಕಾಶಗಳ ಮಿಶ್ರ ಫಲ -
Viral: ಬೆಂಗಳೂರಿಗೆ ಕಾಲಿಟ್ಟಿತೇ ಡೇಂಜರಸ್ 'ಜಾಂಬಿ ಡ್ರಗ್'?: ಯುವಕನ ವಿಡಿಯೋ ನೋಡಿ ಬೆಚ್ಚಿಬಿದ್ದ ಸಿಲಿಕಾನ್ ಸಿಟಿ ಜನ -
PUC Results: 2026ರ ದ್ವಿತೀಯ PUC ಪರೀಕ್ಷೆ ಫಲಿತಾಂಶ ಪ್ರಕಟ, ಇವರೇ ನೋಡಿ ಟಾಪರ್ -
Dhurandhar-2 OTT: ನೆಟ್ಫ್ಲಿಕ್ಸ್ ಅಲ್ಲ, ಈ ಒಟಿಟಿಯಲ್ಲಿ 'ಧರಂಧರ-2' ಅಬ್ಬರ, ಯಾವಾಗ? -
Ragi Price Today: ಕರ್ನಾಟಕದ ಮಾರುಕಟ್ಟೆಗಳಲ್ಲಿ ಇಂದಿನ "ರಾಗಿ' ಬೆಲೆ ಎಷ್ಟಿದೆ? ಲೇಟೆಸ್ಟ್ ಅಪ್ಡೇಟ್ -
Rain in Karnataka: ಕರ್ನಾಟಕದ ಕರಾವಳಿಯಲ್ಲಿ ಭಾರೀ ಬಿಸಿಲು; ಬೆಂಗಳೂರು ಸೇರಿ ಈ ಭಾಗಗಳಲ್ಲಿ ಮಳೆ: ಐಎಂಡಿ -
Election Commission: ಚುನಾವಣೆ ಸಮಯದಲ್ಲೇ ಭಾರತೀಯ ಚುನಾವಣಾ ಆಯೋಗದ ಟ್ವೀಟ್ ಎಡವಟ್ಟು, ಬಿಜೆಪಿ ಪರ ಎಂದ ವಿರೋಧ ಪಕ್ಷಗಳು -
Dhurandhar 2: ದುರಂಧರ್ 2 ಸಿನಿಮಾ: ಬಾಕ್ಸ್ ಆಫೀಸ್ನಲ್ಲಿ 1,000 ಕೋಟಿ ದಾಖಲೆಯ ನಡುವೆ ಹೊಸ ಸಂಕಷ್ಟ -
Zombis Drug: ಬೆಂಗಳೂರಲ್ಲಿ ಜಾಂಬಿ ಡ್ರಗ್ಸ್ ಸೇವಿಸಿ ಯುವಕನ ವಿಚಿತ್ರ ವರ್ತನೆ: ನಟ ದುನಿಯಾ ವಿಜಯ್ ವಿಡಿಯೋ ವೈರಲ್ -
Assembly Elections 2026: ಕೇರಳಂ, ಅಸ್ಸಾಂ, ಪುದುಚೇರಿ ವಿಧಾನಸಭೆ ಚುನಾವಣೆ ಮತದಾನ ಪ್ರಾರಂಭ -
Karnataka 2nd Puc Results 2026: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; ರಾಜ್ಯದಲ್ಲಿ ಯಾವ ಜಿಲ್ಲೆ ಎಷ್ಟನೇ ಸ್ಥಾನ? -
Chandrika Dixit: ಒಂದು ರಾತ್ರಿ ನನ್ನ ಜೊತೆ ಮಲಗಿದ್ರೆ 50 ಲಕ್ಷ ಕೊಡ್ತೇನೆ; ಚಂದ್ರಿಕಾಗೆ ಖ್ಯಾತ ಉದ್ಯಮಿ ಆಫರ್












Click it and Unblock the Notifications