ಜನಾರ್ದನ ರೆಡ್ಡಿ ಸಿಸಿಬಿ ಕಚೇರಿಗೆ ಹಾಜರ್: ವಕೀಲರು ಹೇಳಿದ್ದೇನು?
ಬೆಂಗಳೂರು, ನವೆಂಬರ್ 10: ಜನಾರ್ದನ ರೆಡ್ಡಿ ವಿರುದ್ಧ ಇರುವ ಆರೋಪಗಳೆಲ್ಲವೂ ಸತ್ಯಕ್ಕೆ ದೂರವಾಗಿದ್ದು, ಎಫ್ಐಆರ್ನಲ್ಲಿ ಜನಾರ್ದನ ರೆಡ್ಡಿಯ ಹೆಸರೇ ಇಲ್ಲದ ಮೇಲೆ ಭಯ ಪಡುವ ಅಗತ್ಯವೇನು ಇಲ್ಲ, ಆಂಬಿಡೆಂಟ್ ಕಂಪನಿ ಡೀಲ್ಗೆ ಸಂಬಂಧಿಸಿದಂತೆ ಎಲ್ಲಾ ತನಿಖೆಗೂ ಸಂಪೂರ್ಣ ಸಹಕಾರವಿದೆ ಎಂದು ಜನಾರ್ದನ ರೆಡ್ಡಿ ಪರ ವಕೀಲ ಚಂದ್ರಶೇಖರ್ ತಿಳಿಸಿದ್ದಾರೆ.
ಜನಾರ್ದನ ರೆಡ್ಡಿ ವಕೀಲ ಚಂದ್ರಶೇಖರ್ ಅವರೊಂದಿಗಿರುವ ವಿಡಿಯೋವನ್ನು ಬಿಡುಗಡೆ ಮಾಡಿದ್ದು, ತನಿಖೆಗೆ ಸಿಸಿಬಿಗೆ ಕಚೇರಿಗೆ ತೆರಳುವುದಾಗಿ ತಿಳಿಸಿದ್ದಾರೆ. ಆಂಬಿಡೆಂಟ್ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತರು ಜನಾರ್ದನರೆಡ್ಡಿಯವರ ಹೆಸರನ್ನು ಪ್ರಸ್ತಾಪಿಸಿದ್ದರು.
ಅಲ್ಲದೇ ಅದೇ ಪೊಲೀಸ್ ಪ್ರಕರಣೆಯಲ್ಲಿ ರೆಡ್ಡಿ ವಿರುದ್ಧ ಕೆಲವೊಂದು ಆರೋಪಗಳನ್ನು ಕೂಡ ಮಾಡಿದ್ದರು. ಆದರೆ ಅದೆಲ್ಲವೂ ಸತ್ಯಕ್ಕೆ ದೂರವಾಗಿದ್ದು, ಅಂತಹ ಅವ್ಯವಹಾರದಲ್ಲಿ ರೆಡಗಡಿ ಭಾಗಿಯಾಗಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ಸಿಸಿಬಿಯವರು ವಿನಾಕಾರಣ ಜನಾರ್ದನ ರೆಡ್ಡಿಯವರ ಮೇಲೆ ಆರೋಪ ಮಾಡುತ್ತಿದ್ದಾರೆ, ಆದರೆ ಸಿಸಿಬಿ ನೋಟಿಸ್ ಜಾರಿ ಮಾಡಿಲ್ಲ, ನೋಡಿಸ್ ಜಾರಿ ಮಾಡುವಂತೆ ಕೇಳಿಕೊಂಡಿದ್ದೆವು, ನೋಟಿಸ್ ಜಾರಿ ಮಾಡದೆ ನಾವು ವಿಚಾರಣೆ ಹಾಜರಾಗುವುದು ಬೇಡ ಎಂದು ಸುಮ್ಮನಿದ್ದೆವು. ಶೀಘ್ರ ಸಿಸಿಬಿಗೆ ಹಾಜರಾಗುತ್ತೇವೆ, ಎಲ್ಲಾ ಹಂತದಲ್ಲೂ ತನಿಖೆಯನ್ನು ಎದುರಿಸಲು ಸಿದ್ಧವಿದ್ದೇವೆ ಎಂದು ಚಂದ್ರಶೇಖರ್ ತಿಳಿಸಿದ್ದಾರೆ.












Click it and Unblock the Notifications