Just in: ಮಳೆಯಿಂದ 225 ಕೋಟಿ ರೂ. ನಷ್ಟ: ಐಟಿ ಕಂಪೆನಿ ಮುಖ್ಯಸ್ಥರೊಂದಿಗೆ ಚರ್ಚೆ- ಸಿಎಂ

ಬೆಂಗಳೂರೂ ಸೆಪ್ಟೆಂಬರ್ 05: ಮಳೆಯಿಂದ ಐಟಿ ಕಂಪನಿಗೆ ₹ 225 ಕೋಟಿ ನಷ್ಟದ ಬಗ್ಗೆ ಚರ್ಚಿಸಲಾಗುವುದು ಎಂದು ಕರ್ನಾಟಕ ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಳೆ ಮತ್ತು ಜಲಾವೃತದಿಂದ ಅಂದಾಜು ₹ 225 ಕೋಟಿ ನಷ್ಟದ ಕುರಿತು ಚರ್ಚೆ ನಡೆಸುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಐಟಿ ಕಂಪನಿಗಳಿಗೆ ಭರವಸೆ ನೀಡಿದ್ದಾರೆ.

ಇಂದು ಸುದ್ದಿಗಾರರಿಗೆ ಮಾತನಾಡಿದ ಅವರು, ''ರಾಜ್ಯ ರಾಜಧಾನಿಯಲ್ಲಿ ಮಳೆ ಮತ್ತು ಜಲಾವೃತದಿಂದ ಆಗಿರುವ ಹಾನಿ ಮತ್ತು ಪರಿಹಾರದ ಬಗ್ಗೆ ನಾನು ಕರೆದು ಚರ್ಚಿಸುತ್ತೇನೆ. ನಾವು ಐಟಿ ಕಂಪನಿಗಳಿಗೆ ಕರೆ ಮಾಡಿ ನೀರಿನ ಸಮಸ್ಯೆಯಿಂದ ಅವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡುತ್ತೇವೆ. ಮಳೆಯಿಂದ ಉಂಟಾದ ಪರಿಹಾರ ಮತ್ತು ಇತರ ಸಂಬಂಧಿತ ಹಾನಿಗಳ ಬಗ್ಗೆಯೂ ಚರ್ಚಿಸುತ್ತೇವೆ" ಎಂದು ಬೊಮ್ಮಾಯಿ ಎಎನ್‌ಐಗೆ ತಿಳಿಸಿದರು.

ಹೊರ ವರ್ತುಲ ರಸ್ತೆ ಸಮಸ್ಯೆಯನ್ನು ಬಗೆಹರಿಸುವಂತೆ ಐಟಿ ಕಂಪನಿಗಳು ಮುಖ್ಯಮಂತ್ರಿಗೆ ಮನವಿ ಮಾಡಿದ ನಂತರ ಅವರು ಈ ಹೇಳಿಕೆಯನ್ನು ನೀಡಿದ್ದಾರೆ. ಇಂದು ಮುಂಜಾನೆ ಬೆಂಗಳೂರು ತೀವ್ರ ಜಲಾವೃತಗೊಂಡಿದ್ದು, ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ನಗರ ತತ್ತರಿಸಿದೆ. ಬೆಂಗಳೂರಿನ ಕೋರಮಂಗಲ ಸೇರಿದಂತೆ ಹಲವು ಭಾಗಗಳಲ್ಲಿ ಜಲಾವೃತಗೊಂಡು ಟ್ರಾಫಿಕ್ ಜಾಮ್ ಮತ್ತು ಜನಜೀವನ ಅಸ್ತವ್ಯಸ್ತಗೊಂಡಿತು.

Bengaluru rains: CM Basavaraj Bommai assured IT companies about a discussion on the estimated loss of Rs 225 crore

ಧಾರಾಕಾರ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡಿದ್ದು, ವಾಹನ ಚಾಲನೆಗೆ ತೊಂದರೆಯಾಗಿದೆ. "ತುಂಬಾ ಮಳೆಯಾಗಿದೆ. ನಾವು ಬೆಳಗ್ಗೆ ಎದ್ದು ನೋಡಿದಾಗ ರಸ್ತೆಗಳು ಜಲಾವೃತವಾಗಿದ್ದವು. ನೀರು ಮೊಣಕಾಲು ಎತ್ತರಕ್ಕೆ ಬಂದಿತ್ತು. ನಂತರ ನಾವು ರಸ್ತೆ ಮತ್ತು ನೆಲಮಾಳಿಗೆಯಿಂದ ನೀರನ್ನು ಪಂಪ್ ಮಾಡಲು ಪ್ರಾರಂಭಿಸಿದ್ದೇವೆ. ನನ್ನ ಇಡೀ ನೆಲಮಾಳಿಗೆಯು ನೀರಿನಲ್ಲಿ ಮುಳುಗಿದೆ" ಎಂದು ಸ್ಥಳೀಯ ನಿವಾಸಿಯೊಬ್ಬರು ತಿಳಿಸಿದರು.

ವರ್ಷಕ್ಕೊಮ್ಮೆ ಇಂತಹ ಪರಿಸ್ಥಿತಿ ಎದುರಾಗುತ್ತಿದ್ದು, ಒಳಚರಂಡಿ ವ್ಯವಸ್ಥೆ ಇಲ್ಲದ ಕಾರಣ ನೀರನ್ನು ಪಂಪ್‌ ಮಾಡಬೇಕಾಗಿದೆ ಎಂದು ಸ್ಥಳೀಯರು ಹೇಳಿಕೊಂಡಿದ್ದಾರೆ.

Bengaluru rains: CM Basavaraj Bommai assured IT companies about a discussion on the estimated loss of Rs 225 crore

''ಪ್ರತಿ ವರ್ಷ ಮಳೆ ಬಂದ ಮೇಲೆ ನೀರು ನಿಲ್ಲುತ್ತಿದ್ದು, ನೀರು ಹೊರ ಹಾಕಬೇಕು. ಇದಕ್ಕೆ ಶಾಶ್ವತ ಪರಿಹಾರ ಇಲ್ಲ, ರಸ್ತೆ ನಿರ್ಮಾಣ ಮಾಡುವಾಗ ಚರಂಡಿ ವ್ಯವಸ್ಥೆ ಮಾಡದೇ ಇರುವುದರಿಂದ ಸಾರ್ವಜನಿಕರು ಪರದಾಡುವಂತಾಗಿದೆ. ಅನೇಕ ಮಹಿಳೆಯರು ಜಾರಿ ನೀರಿಗೆ ಬಿದ್ದಿದ್ದಾರೆ" ಎಂದು ಸ್ಥಳೀಯರು ಹೇಳಿದರು.

ಜುಲೈನಲ್ಲಿ ಕರ್ನಾಟಕವು ಮಳೆಯಿಂದಾಗಿ ಭಾರಿ ಪ್ರವಾಹವನ್ನು ಅನುಭವಿಸಿತು, ನಂತರ ರಕ್ಷಣಾ ಕಾರ್ಯಾಚರಣೆಗಳು ಮತ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕಾಗಿತ್ತು. ಮುಖ್ಯಮಂತ್ರಿ ಬೊಮ್ಮಾಯಿ ಕೂಡ ಕೇಂದ್ರದಿಂದ ಆರ್ಥಿಕ ನೆರವು ಪಡೆಯಬೇಕಿತ್ತು. ಈ ಬಾರಿ ಕರ್ನಾಟಕದ ಸ್ಥಿತಿ ಹೇಳತೀರದ್ದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+