Get Updates
Get notified of breaking news, exclusive insights, and must-see stories!

ಬೆಸ್ಕಾಂ ನಿರ್ಲಕ್ಷ್ಯಕ್ಕೆ ಅಂಧಕಾರಕ್ಕೆ ತಳ್ಳಿದ ಅಪ್ಪ ಮಗನ ಜೀವ!

ಬೆಂಗಳೂರು, ಫೆ. 23: ಬೆಸ್ಕಾಂ ನಿರ್ಲಕ್ಷ್ಯದಿಂದ ಹೈ ವೋಲ್ಟೇಜ್ ವಿದ್ಯುತ್ ತಂತಿ ತಗುಲಿ ನಾಲ್ಕು ವರ್ಷದ ಮಗು ಹಾಗೂ ಬಾಲಕನ ತಂದೆ ಗಂಭೀರ ಗಾಯಗೊಂಡಿರುವ ಘಟನೆ ಬೆಂಗಳೂರಿನ ಪುಟ್ಟೇನಹಳ್ಳಿಯಲ್ಲಿ ನಡೆದಿದೆ.

ಧನಂಜಯ್ ಹಾಗೂ ಇವರ ನಾಲ್ಕು ವರ್ಷದ ಬಾಲಕ ತನ್ಮಯ್ ಗಾಯಗೊಂಡವರು. ಈ ಪ್ರಕರಣ ಸಂಬಂಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಎಫ್ಐರ್ ದಾಖಲಾಗಿದೆ.

ಫೆ. 10 ರಂದು ಬೆಳಗ್ಗೆ ಆರ್‌ಬಿಐ ಲೇಔಟ್ ನ 19 ನೇ ಕ್ರಾಸ್ ನಲ್ಲಿ ತನ್ಮಯ್ ಹೈ ವೋಲ್ಟೇಜ್ ಕಂಬಿ ಬಿದ್ದಿದ್ದ ಕಂಬದ ಸಮೀಪ ಆಟವಾಡುತ್ತಿದ್ದ. ಇಂಡಿಯನ್ ಗ್ಯಾಸ್ ಸರ್ವೀಸ್ ನೀಡಲು ಧನಂಜಯ್ ತೆರಳಿದ್ದರು.

 Bengaluru: Father and Son Seriously Injured after coming in contact with high tension wire in Puttenahalli

ಈ ವೇಳೆ ತಂತಿ ಸರಿ ಪಡಿಸಲೆಂದು ಹೋದ ಧನಂಜಯ್‌ಗೆ ವಿದ್ಯುತ್ ತಂತಿ ತಗುಲಿ ಗಂಭೀರವಾಗಿ ಗಾಯವಾಗಿದೆ. ಇದೇ ವೇಳೆ ನಾಲ್ಕು ವರ್ಷದ ಕಂದಮ್ಮ ತನ್ಮಯ್‌ಗೂ ವಿದ್ಯುತ್ ತಗುಲಿ ಗಾಯಗೊಂಡಿದ್ದಾರೆ. ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚೇತರಿಸಿಕೊಳ್ಳುತ್ತಿದ್ದಾರೆ.

 Bengaluru: Father and Son Seriously Injured after coming in contact with high tension wire in Puttenahalli

ವಿದ್ಯುತ್ ತಂತಿ ಹೊರಗೆ ಬಿದ್ದಿದ್ದರೂ ಅದನ್ನು ಸರಿಪಡಿಸದ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯತೆ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಪುಟ್ಟೇನಹಳ್ಳಿ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Recommended Video

      ಭಾರತದಿಂದ ಅಫ್ಘಾನಿಸ್ತಾನಕ್ಕೆ 50,000 ಟನ್ ಗೋಧಿಯ ನೆರವು | Oneindia Kannada

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+