ವಾಮನ್ ರನ್ನು ಹುದ್ದೆಯಿಂದ ಕಿತ್ತು ಹಾಕಲು ಆಗ್ರಹಿಸಿ ಮೋದಿಗೆ ಪತ್ರ
ಗೋಹತ್ಯೆ, ಗೋಮಾಂಸ ಸೇವನೆ ಬಗ್ಗೆ ವಿವಾದಿತ ಹೇಳಿಕೆ ನೀಡಿರುವ ಬಿಜೆಪಿ ಮಾಧ್ಯಮ ವಕ್ತಾರ ಡಾ. ವಾಮನ್ ಆಚಾರ್ಯ ಅವರನ್ನು ಕೂಡಲೇ ಹುದ್ದೆಯಿಂದ ಕಿತ್ತು ಹಾಕುವಂತೆ ಆಗ್ರಹಿಸಲಾಗಿದೆ.
ಬೆಂಗಳೂರು, ಜೂನ್ 05: ಗೋಹತ್ಯೆ, ಗೋಮಾಂಸ ಸೇವನೆ ಬಗ್ಗೆ ವಿವಾದಿತ ಹೇಳಿಕೆ ನೀಡಿರುವ ಬಿಜೆಪಿ ಮಾಧ್ಯಮ ವಕ್ತಾರ ಡಾ. ವಾಮನ್ ಆಚಾರ್ಯ ಅವರನ್ನು ಕೂಡಲೇ ಹುದ್ದೆಯಿಂದ ಕಿತ್ತು ಹಾಕುವಂತೆ ಆಗ್ರಹಿಸಲಾಗಿದೆ.
ಪಕ್ಷದ ನಿಲುವು ಮಾತ್ರ ಸಂಪೂರ್ಣ ಗೋಹತ್ಯೆ ನಿಷೇಧ ಜಾರಿಯಾಗಬೇಕು ಎನ್ನುವುದರ ಪರವಾಗಿಯೇ ಇದೆ. ಒಂದು ವೇಳೆ ಅವರು ಗೋ ಹತ್ಯೆ ನಿಷೇಧ ಕಾನೂನು ಜಾರಿ ವಿರುದ್ಧವಾಗಿ ಹೇಳಿಕೆ ನೀಡಿದ್ದರೆ ಅದನ್ನು ಅವರು ಸರಿಪಡಿಸಿಕೊಳ್ಳಬೇಕು ಎಂದು ಸಿಟಿ ರವಿ ಹೇಳಿದ್ದರು.[ವಾಮನಾಚಾರ್ಯ ಹೇಳಿಕೆಗೂ ನಮಗೂ ಸಂಬಂಧವಿಲ್ಲ: ಬಿಜೆಪಿ]

ಡಾ. ವಾಮನ್ ಆಚಾರ್ಯ ಅವರು ತಮ್ಮ ಹೇಳಿಕೆ ಬಗ್ಗೆ ಕ್ಷಮೆಯಾಚಿಸಿದ್ದಾರೆ ಎಂದು ಮಾಜಿ ಸಚಿವ ಸುರೇಶ್ ಕುಮಾರ್ ಅವರು ಹೇಳಿದ್ದಾರೆ. ಇನ್ನೊಂದೆಡೆ ಗೋಹತ್ಯೆ ಪರವಾಗಿ ಹೇಳಿಕೆ ನೀಡಿರುವ ವಾಮನಾಚಾರ್ಯ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು, ಹುದ್ದೆಯಿಂದ ಕೆಳಗಿಳಿಸಬೇಕು ಎಂದು ಒತ್ತಾಯಿಸಿ ಹಿರಿಯ ವಕೀಲ ಬಿ.ಎಸ್. ವೆಂಕಟನಾರಾಯಣ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.[ವಾಮನ್ ಆಚಾರ್ಯ- ಮಂಡಳಿ ಬಿಟ್ಟ ಕಟ್ಟಕಡೆಯ ಬಿಜೆಪಿಯವ]
ನಿಲುಮೆ.ಕಾಂನ ರಾಕೇಶ್ ಶೆಟ್ಟಿ ಅವರು ತಮ್ಮ ಫೇಸ್ ಬುಕ್ ಪುಟದಲ್ಲಿ ಈ ಬಗ್ಗೆ ಪ್ರಶ್ನಿಸಿದ್ದಾರೆ.
* ಬಿಜೆಪಿಯ 'ನಾಯಕ'ರಾದವರೊಬ್ಬರು ಇಂತಹ ಹೇಳಿಕೆ ಕೊಡುವುದಕ್ಕೂ, ಬಿಜೆಪಿಯ "ಮಾಧ್ಯಮ ವಕ್ತಾರ" ರೊಬ್ಬರು ಇಂತಹ ಹೇಳಿಕೆ ಕೊಡುವುದಕ್ಕೂ ವ್ಯತ್ಯಾಸವಿಲ್ಲವೇ?
* ಡಾ.ವಾಮನಾಚಾರ್ಯರು ಸುವರ್ಣ ವಾಹಿನಿಯಲ್ಲಿ ಚರ್ಚೆಗೆ ಹೋಗಿದ್ದು ಬಿಜೆಪಿ ಪಕ್ಷದ ಪ್ರತಿನಿಧಿಯಾಗಿಯೇ ಹೊರತು ವ್ಯಕ್ತಿಯಾಗಿ ಅಲ್ಲ.(ಇದೇ ಮಾತನ್ನು ನಿರೂಪಕರು ಅವರಿಗೆ ಚರ್ಚೆಯಲ್ಲಿ ನೆನಪಿಸುತ್ತಾರೆ). ಹಾಗಿದ್ದಾಗ ಅವರ ಹೇಳಿಕೆಗೂ ಪಕ್ಷಕ್ಕೂ ಸಂಬಂಧವಿಲ್ಲವೆನ್ನುವುದು ನೈತಿಕವಾಗಿ ಸರಿಯೆನಿಸುತ್ತದೆಯೇ?['ಬಿಲೀಫ್ ಫೆಸ್ಟ್' ಆಚರಿಸುವಂತೆ ಯುವ ಬ್ರಿಗೇಡ್ ಕರೆ, ಏನಿದು ಬಿಲೀಫ್ ಫೆಸ್ಟ್]

* ನಿಮ್ಮ ಪಕ್ಷದ ಮಾಧ್ಯಮ ವಕ್ತಾರರ ಹೇಳಿಕೆಯೇ ನಿಮ್ಮ ಪಕ್ಷಕ್ಕೆ ಸಂಬಧಿಸಿದ್ದಲ್ಲ ಎನ್ನುವುದಾದರೆ, ಬಿಜೆಪಿ ಪಕ್ಷದ ನಿಲುವುಗಳನ್ನು ಮಂಡಿಸಲು 'ವಕ್ತಾರ'ರನ್ನು ಬಿಟ್ಟು ಬೇರೆ ಅಧಿಕೃತ ವ್ಯವಸ್ಥೆ, ವ್ಯಕ್ತಿಗಳಿದ್ದಾರೆಯೇ? ತಿಳಿಸಿ.[ಗೋ ಹತ್ಯೆ ನಿಷೇಧ: ಕೇರಳ ಸರ್ಕಾರದ ನಿಲುವು ಸಮರ್ಥಿಸಿದ ಸಿಎಂ ಸಿದ್ದರಾಮಯ್ಯ]
* ಒಂದು ವೇಳೆ ಚರ್ಚೆಯಲ್ಲಿ ವಾಮನಾಚಾರ್ಯರು ಹೇಳಿದ್ದೆಲ್ಲವೂ Logical, Practical ವಿಚಾರಗಳೆನ್ನುವುದು ಬಿಜೆಪಿಯ ನಾಯಕರ ವಾದವಾಗುವುದಾದರೇ,ಇದುವರೆಗೂ ಪಕ್ಷ ಈ ವಿಷಯದಲ್ಲಿ Illogical, Impractical ಆಗಿ ನಡೆದುಕೊಂಡಿದೆಯೇ? ಲಾಜಿಕಲ್ ವಾದವೇ ಸರಿಯೆನ್ನುವುದಾದರೇ, ಇದೇ ವಿಷಯವಾಗಿ ಭಾವನಾತ್ಮಕ ಭಾಷಣಗಳನ್ನು ನಂಬಿಕೊಂಡು ಗೋ ರಕ್ಷಣೆಗಾಗಿ ತಲೆಕೊಟ್ಟ ಕಾರ್ಯಕರ್ತರ ಪ್ರಾಣಕ್ಕೆ ಬೆಲೆ ಇಲ್ಲವೇ? [ಗೋವಿನ ಬಗ್ಗೆ ನಿಮಗೆ ತಿಳಿಯದ ರೋಚಕ ಸಂಗತಿಗಳು]
* ಹೇಳಿಕೆಯನ್ನು ಸಂಪೂರ್ಣವಾಗಿ ಎಲ್ಲಿ ಹಿಂಪಡೆದರು? ಎಲ್ಲಿ ಯಾರಲ್ಲಿ ಕ್ಷಮೆ ಕೇಳಿದ್ದಾರೆ? ತಿಳಿಸಿ.
* ವೈಯುಕ್ತಿಕವಾಗಿ ವಾಮನಾಚಾರ್ಯರು ಇಂತಹ ಹೇಳಿಕೆಯನ್ನು ನೀಡಿದ್ದರೂ, ಪಕ್ಷದ ಪ್ರಮುಖ ನಾಯಕರಾಗಿ ಇಂತಹ ವಿಷಯಗಳನ್ನು ಅವರೇಕೆ ಕಾರ್ಯಕರ್ತರಿಗೇಕೆ ಮನದಟ್ಟು ಮಾಡಿಕೊಡಲಿಲ್ಲ. ನಿಮ್ಮ ಪಕ್ಷದಲ್ಲಿ ನಾಯಕರಿಗೂ, ಕಾರ್ಯಕರ್ತರಿಗೂ ನಿಲುವು ಬದಲಿಸಿಕೊಳ್ಳಲು ಸೂಕ್ತ ವೇದಿಕೆ ಇಲ್ಲವೇ?
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications