ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲೊಟ್ಟೆಗೊಲ್ಲಹಳ್ಳಿಯಲ್ಲಿ ಭೈರತಿ ಸುರೇಶ್‌ ವಿರುದ್ಧ ಬಿಜೆಪಿ-ಜೆಡೆಎಸ್ ಪ್ರತಿಭಟನೆ

By Manjunatha
|
Google Oneindia Kannada News

ಬೆಂಗಳೂರು, ಮೇ 14: ಮರು ಮತದಾನ ನಡೆಯುತ್ತಿರುವ ಹೆಬ್ಬಾಳ ಕ್ಷೇತ್ರದ ಲೊಟ್ಟೆಗೊಲ್ಲಹಳ್ಳಿಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್‌ ಅಭ್ಯರ್ಥಿ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಭೈರತಿ ಸುರೇಶ್‌ ಅವರು ಅಪಾರ್ಟ್‌ಮೆಂಟ್‌ ಒಂದರಲ್ಲಿ ಹಣ ಹಂಚುತ್ತಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಲೊಟ್ಟೆಗೊಲ್ಲಹಳ್ಳಿಯ ವೃತ್ತದಲ್ಲಿ ಪ್ರತಿಭಟನೆ ಮಾಡಿದರು.

ಹೆಬ್ಬಾಳದಲ್ಲಿ ಮರುಮತದಾನ: ಎಡಗೈ ಮಧ್ಯ ಬೆರಳಿಗೆ ಅಳಿಸಲಾಗದ ಶಾಯಿ ಹೆಬ್ಬಾಳದಲ್ಲಿ ಮರುಮತದಾನ: ಎಡಗೈ ಮಧ್ಯ ಬೆರಳಿಗೆ ಅಳಿಸಲಾಗದ ಶಾಯಿ

ಆದರೆ ಆರೋಪವನ್ನು ತಳ್ಳಿ ಹಾಕಿರುವ ಕಾಂಗ್ರೆಸ್ ಅಭ್ಯರ್ಥಿ ಭೈರತಿ ಸುರೇಶ್ ಅವರು 'ನಾನು ಅನ್ರಿಯಾ ಪಲೇಷಿಯಸ್ ಅಪಾರ್ಟ್‌ಮೆಂಟ್‌ಗೆ ತಿಂಡಿ ತಿನ್ನಲು ಹೋಗಿದ್ದೆ ಅಷ್ಟೆ ಅಲ್ಲಿ ಹಣ ಹಂಚಿಕೆ ಮಾಡಿಲ್ಲ' ಎಂದಿದ್ದಾರೆ.

protest against congress candidate in Lottegollahalli where Re-election in progress

ಪ್ರತಿಭಟನಾಕಾರರನ್ನು ಮತಗಟ್ಟೆಯಿಂದ ದೂರ ಇಡಲು ಯಶಸ್ವಿಯಾಗಿರುವ ಪೊಲೀಸರು ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಹರ ಸಾಹಸ ಪಟ್ಟರು. ಪ್ರತಿಭಟನೆ ನಡೆಯುತ್ತಿದ್ದರೂ ಸಹ ಮತದಾನಕ್ಕೆ ಯಾವುದೇ ಅಡೆ-ತಡೆ ಆಗಿಲ್ಲ.

ಮೇ 15ರಂದು ಮತ ಎಣಿಕೆ:ರಾಜ್ಯಾದ್ಯಂತ ಬಿಗಿ ಬಂದೋಬಸ್ತ್ಮೇ 15ರಂದು ಮತ ಎಣಿಕೆ:ರಾಜ್ಯಾದ್ಯಂತ ಬಿಗಿ ಬಂದೋಬಸ್ತ್

ಮೇ 12ರಂದು ಹೆಬ್ಬಾಳ ಕ್ಷೇತ್ರದ ಲೊಟ್ಟೆಗೊಲ್ಲಹಳ್ಳಿಯ ಬೂತ್‌ ಸಂಖ್ಯೆ 156ರಲ್ಲಿ ಮತಯಂತ್ರ ಸಮಸ್ಯೆ ಆದ ಕಾರಣ ಇಂದು ಮರು ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ.

English summary
JDS and BJP party workers protesting against congress candidate Byrathi Suresh in Hebbals Lottegollahalli where re election is in progress. JDS and BJP party workers alleged that congress candidate giving money in Apartment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X