ಬೆಂಗಳೂರಿನಲ್ಲಿ ಆಸ್ತಿ ಕೊಳ್ಳಬೇಕೆ?; ಬೆಲೆ ಏರಿಕೆ ಬಗ್ಗೆ ತಿಳಿಯಿರಿ
ಬೆಂಗಳೂರು, ನ.16: ಕೊರೊನಾ ಸಾಂಕ್ರಾಮಿಕದ ನಂತರ ರಾಜಧಾನಿ ಬೆಂಗಳೂರಿನಲ್ಲಿ ಆಸ್ತಿ ಬೆಲೆಯಲ್ಲಿ ಗಮನಾರ್ಹ ಬದಲಾವಣೆಗಳು ಕಂಡು ಬಂದಿವೆ.
ಕೊರೊನಾ ನಂತರ ಆಸ್ತಿ ವ್ಯವಹಾರದಲ್ಲಿ ಹೆಚ್ಚುತ್ತಿರುವ ಬೇಡಿಕೆಯಂತೆಯೇ ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಆಸ್ತಿ ಬೆಲೆಗಳು ಗಣನೀಯವಾಗಿ ಏರಿಕೆಯಾಗುತ್ತಿರುವುದು ಕಂಡು ಬರುತ್ತಿದೆ.
ಸಾಂಕ್ರಾಮಿಕದಲ್ಲಿ ನಷ್ಟ ಕಂಡಿದ್ದ ರಿಯಲ್ ಎಸ್ಟೇಟ್ ಉದ್ಯಮ ಮತ್ತೆ ಈಗ ಚಿಗುರೊಡೆಯುತ್ತಿದೆ. ಕೊರೊನಾ ನಂತರ ಸ್ವಂತ ಮನೆಯನ್ನು ಹೊಂದುವುದಕ್ಕೆ ಭಾರಿ ಪ್ರಾಮುಖ್ಯತೆಯನ್ನು ನೀಡಲಾಗುತ್ತಿದ್ದು, ಆಸ್ತಿ ಖರೀದಿಗೆ ಬೇಡಿಕೆ ಹೆಚ್ಚಾಗಿದೆ.
ಆಸ್ತಿ ಮಾರಾಟ ಮಾಡುವ ರೀಲರ್ಗಳು ಹೇಳುವಂತೆ 2018-19 ರಿಂದ ಅಸ್ತಿ ಬೆಲೆಗಳು ಶೇಕಡಾ 20 ರಷ್ಟು ಹೆಚ್ಚಾಗಿದೆ ಎಂದಿದ್ದಾರೆ.
ಉದಾಹರಣೆಗೆ ಮಹದೇವಪುರದಲ್ಲಿ 2018-19ರಲ್ಲಿ ಪ್ರತಿ ಚದರ ಅಡಿಗೆ 5,000 ರೂಪಾಯಿಯಿಂದ 6,000 ರೂಪಾಯಿಯಿದ್ದ ಭೂಮಿಯ ಬೆಲೆ ಈಗ 8,000ಕ್ಕೆ ಏರಿಕೆಯಾಗಿದೆ.
ಅದೇ ರೀತಿ ಯಲಹಂಕದಲ್ಲಿ 8 ಸಾವಿರವಿದ್ದ ಆಸ್ತಿ ಬೆಲೆಗಳು 11 ಸಾವಿರಕ್ಕೆ ಏರಿಕೆಯಾಗಿದೆ.

ಉತ್ತಮ ಮನೆ, ಒಳ್ಳೇಯ ಜೀವನಶೈಲಿ ಇಂದಿನ ಪ್ರಾಮುಖ್ಯತೆ
ವಿಶ್ವದಲ್ಲಿ ಅಪ್ಪಳಿಸಿದ ಕೊರೊನಾ ಸಾಂಕ್ರಾಮಿಕ ರೋಗ ಹಲವು ಪಾಠಗಳನ್ನು ಕಲಿಸಿದೆ. ಅದರಲ್ಲಿ ಒಂದು ಮನೆಗಳ ಕುರಿತು ಜನರ ಭಾವನೆಯನ್ನು ಬದಲಾಯಿಸಿದ್ದು. ಲಾಕ್ಡೌನ್ಗಳು, ವರ್ಕ್ ಫ್ರಂ ಹೋಮ್, ಆನ್ಲೈನ್ ತರಗತಿಗಳು ಜನರನ್ನು ಮನೆಯಲ್ಲಿ ಇರುವಂತೆಯೇ ಮಾಡಿತು. ಇಡೀ ದಿನ ಮನೆಗಳಲ್ಲಿಯೇ ಇದ್ದ ಜನರಿಗೆ ಉತ್ತಮ, ವಿಶಾಲ ಮತ್ತು ಸ್ವಂತ ಮನೆಗಳನ್ನು ಹೊಂದುವ ಆಸೆಗೆ ನೂಕಿದೆ. ಜತೆಗೆ ಅದು ಅನಿವಾರ್ಯ ಎಂಬಂತಹ ಪರಿಸ್ಥಿತಿಗೂ ತಳ್ಳಿದೆ ಎಂದು ರಿಯಲ್ ಎಸ್ಟೇಟ್ ಉದ್ಯಮಿ ಆಶಿಶ್ ಶರ್ಮಾ.

ಸ್ವಂತ ಮನೆಯತ್ತ ದೃಷ್ಟಿ ನಿಟ್ಟಿರುವ ಯುವಜನತೆ
ವಿಶಾಲವಾದ ರಸ್ತೆಗಳು, ಉತ್ತಮ ಮೂಲಸೌಕರ್ಯಗಳು, ಕಡಿಮೆ ಟ್ರಾಫಿಕ್ ಜಂಜಾಟವಿರುವ ಹೊಸ ಬಡಾವಣೆಗಳತ್ತ ಜನರು ಆಕರ್ಷಿತರಾಗುತ್ತಿದ್ದಾರೆ. ಇದು ಕೂಡ ಆಸ್ತಿ ಬೆಲೆ ಏರಿಕೆಗೆ ಕಾರಣವಾಗಿದೆ.
ಇನ್ನೂ, ಇಷ್ಟು ದಿನ ಮನೆಯಿಂದ ಕೆಲಸ ಮಾಡುತ್ತಿದ್ದ ಐಟಿ ಕಂಪನಿಗಳ ಯುವಜನತೆ ಈಗ ಕಚೇರಿಗೆ ಹೋಗುತ್ತಿದ್ದು, ಹೊಸ ಮನೆಗಳ ಹುಡುಕಾಟದಲ್ಲಿದ್ದಾರೆ.
ಸ್ವಂತ ಮನೆಗಳನ್ನು ಮಾಡಿಕೊಳ್ಳುವುದು, ಅದು ಕೂಡ ತಮ್ಮ ಆಫಿಸ್ಗಳಿಗೆ ಹತ್ತಿರವಿರುವ ಜಾಗಗಳಲ್ಲಿಯೇ ಮನೆ ಹುಡುಕುವುದರಿಂದ ಮಹದೇವಪುರ ವ್ಯಾಪ್ತಿಯಲ್ಲಿ ಆಸ್ತಿ ಬೆಲೆ ಜಾಸ್ತಿಯಾಗಿದೆ.

ಬಾಡಿಗೆ ಕಟ್ಟುವ ಬದಲು, ಸ್ವಂತ ಮನೆ ಹೊಂದುವ ಯೋಚನೆ
ಬೆಂಗಳೂರಿನಲ್ಲಿ ಬಾಡಿಗೆ ಬೆಲೆ ದುಬಾರಿಯಾಗುತ್ತಿದೆ. ತಿಂಗಳಿಗೆ ಸಾವಿರಾರು ರೂಪಾಯಿ ಕಟ್ಟಿ ಬಾಡಿಗೆ ಮನೆಯಲ್ಲಿರುವವರು ಸ್ವಂತ ಮನೆಯ ಬಗ್ಗೆ ಯೋಚಿಸುತ್ತಿದ್ದಾರೆ.
ಇಷ್ಟು ದಿನ ಶೇಕಡಾ ಐದರಷ್ಟು ಏರುತ್ತಿದ್ದ ಬಾಡಿಗೆ ದರ. ಈ ಬಾರಿಯಿಂದ ಹಲವು ಭಾಗಗಳಲ್ಲಿ ಶೇಕಡಾ ಮೂವತೈದರಷ್ಟು ಏರಿಕೆಯಾಗಿದೆ. ಇದು ಬಾಡಿಗೆ ದಾರರಿಗೆ ನುಂಗಲಾರದ ತುತ್ತಾಗಿದೆ. ಹೀಗಾಗಿ ಆಸ್ತಿ ಖರೀದಿಯಲ್ಲಿ ಹಣ ತೊಡಗಿಸಲು ಜನ ಉತ್ಸುಕರಾಗಿದ್ದಾರೆ.

ಕಟ್ಟಡ ಸಾಮಾಗ್ರಿಗಳ ದರ ಏರಿಕೆಯಿಂದ ಆಸ್ತಿ ಬೆಲೆ ಗಗನಕ್ಕೆ
ಆರ್ ಆರ್ ನಗರ ವ್ಯಾಪ್ತಿಯಲ್ಲಿ ನಮ್ಮ ಮೆಟ್ರೋ ನಿಲ್ದಾಣಗಳ ಹೆಚ್ಚುವಿಕೆ, ಬೆಂಗಳೂರು - ಮೈಸೂರು ಹೆದ್ದಾರಿ ಅಭಿವೃದ್ಧಿ ಕಾರ್ಯಗಳು ಕೂಡ ಬೆಲೆ ಏರಿಕೆಗೆ ಪರೋಕ್ಷ ಕಾರಣಗಳಾಗಿವೆ. ಮಹಾದೇವಪುರ ವ್ಯಾಪ್ತಿಯಲ್ಲಿಯೂ ಮೆಟ್ರೋ ಸಂಪರ್ಕ ಹೆಚ್ಚಳವಾಗಿರುವುದು ಆಸ್ತಿ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.
ಇನ್ನು, ಕಟ್ಟಡ ನಿರ್ಮಾಣ ಸಾಮಗ್ರಿಗಳ ಬೆಲೆಗಳು ಗಗನಕ್ಕೆ ಏರಿವೆ. ಸಿಮೆಂಟ್, ಸ್ಟೀಲ್, ಇಟ್ಟಿಗೆ, ಸಾರಿಗೆ, ಕಾರ್ಮಿಕರ ಕೂಲಿ ಸೇರಿದಂತೆ ಎಲ್ಲದರಲ್ಲೂ ಬೆಲೆ ಏರಿಕೆಯಾಗಿದೆ ಹೀಗಾಗಿ ಆಸ್ತಿ ಬೆಲೆಗಳು ಹೆಚ್ಚಾಗಿವೆ ಎನ್ನುತ್ತಾರೆ ರಿಯಲ್ ಎಸ್ಟೇಟ್ ಉದ್ಯಮಿಗಳು.
ಇನ್ನು ಬೇಡಿಕೆ ಹೆಚ್ಚಾದಂತೆ ಪೂರೈಕೆಯಲ್ಲಿ ವಿಳಂಬವಾಗಬಹುದು ಎಂದು ಹಲವು ತಜ್ಞರು ಹೇಳುತ್ತಾರೆ.
(ಮಾಹಿತಿ ಕೃಪೆ: ಡೆಕ್ಕನ್ ಹೆರಾಲ್ಡ್)
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
AI ಮೂಲಕ ಬರುವ ಉದ್ಯೋಗ ಅರ್ಜಿಗಳಿಂದ ಬೆಂಗಳೂರು ಉದ್ಯಮಿ ಬೇಸರ: 'ಅರ್ಜಿಗಳು ಜಾಸ್ತಿ, ಅರ್ಹತೆ ಕಡಿಮೆ’ -
RCB Vs SRH: ಎಸ್ಆರ್ಎಚ್ ವಿರುದ್ಧದ ಐಪಿಎಲ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕಿಂಗ್ ಕುರಿತು ಆರ್ಸಿಬಿ ಬಿಗ್ ಅಪ್ಡೇಟ್ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಜೋಶ್ ಹ್ಯಾಜಲ್ವುಡ್ ಔಟ್, 7 ಕೋಟಿಯ ಆಟಗಾರನಿಗಿಲ್ಲ ಸ್ಥಾನ; ಅಶ್ವಿನ್ ಹೇಳಿದ ಆರ್ಸಿಬಿ ಸಂಭಾವ್ಯ ಪ್ಲೇಯಿಂಗ್ 11 ಇಲ್ಲಿದೆ -
ತಿಂಗಳಿಗೆ 50 ಸಾವಿರ ಸಂಬಳ ಇದೆಯಾ? 2026ರಲ್ಲಿ ಬೆಂಗಳೂರಿನಂತಹ ಮಹಾನಗರದಲ್ಲಿ ಜೀವನ ವೆಚ್ಚ ಎಷ್ಟಾಗುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್












Click it and Unblock the Notifications