ಜಯನಗರದಲ್ಲಿ ಆಕ್ರಿಲಿಕ್ ಪೈಂಟಿಂಗ್ ಕಾರ್ಯಾಗಾರ
ಬೆಂಗಳೂರು, ಜೂನ್ 27: ಪ್ರೊಜೆಕ್ಟ್ ಈವ್ ಪ್ರಸ್ತುತಪಡಿಸುತ್ತಿದೆ ಎಕ್ಸ್ಕ್ಲೂಸಿವ್ ದಿ ಶಿ ಸೆಶನ್ಸ್'' ಆಕ್ರಿಲಿಕ್ ಪೈಂಟಿಂಗ್ ಕಾರ್ಯಾಗಾರ 30ನೇ ಜೂನ್, 2018ರಂದು ತನ್ನ ಜಯನಗರ ಮಳಿಗೆಯಲ್ಲಿ
ಬೆಂಗಳೂರಿನ ಎಲ್ಲಾ ಮಹಿಳಾ ಕಲಾ ಪ್ರೇಮಿಗಳಿಗೊಂದು ಆಹ್ವಾನ! ಒಂದು ಎಕ್ಸ್ ಕ್ಲೂಸಿವ್ ಆದ ಆಕ್ರಿಲಿಕ್ ಪೈಂಟಿಂಗ್ ಕಾರ್ಯಾಗಾರದಲ್ಲಿ ನಿಮ್ಮನ್ನು ತೊಡಗಿಸಿಕೊಂಡು ನಿಮ್ಮ ಬಣ್ಣಗಳು ಹಾಗೂ ಭಾವನೆಗಳನ್ನು ಸುರಿದುಕೊಂಡು ತಜ್ಞರಿಂದ ಕೌಶಲ್ಯಗಳನ್ನು ಕಲಿತುಕೊಂಡು ಅದ್ಭುತವಾದ ಕ್ಯಾನ್ವಾಸ್ ರಚಿಸಬಹುದಾಗಿದೆ.
ಈ ಕಾರ್ಯಾಗಾರದಲ್ಲಿ, ಅಮೂರ್ತ ಕಲೆಯನ್ನು ರಚಿಸುವುದು ಹೇಗೆಂದು ಆಕ್ರಿಲಿಕ್ ಪೈಂಟ್ ಮೂಲಕ ಪೌರಿಂಗ್ ಮಾಧ್ಯಮದಲ್ಲಿ ಮತ್ತು ಕಪ್ಪು ಕ್ಯಾನ್ವಾಸ್ನ ಮೇಲೆ ಕಲಿಯಿರಿ. ಈ ಆಧುನಿಕ ಪೈಂಟಿಂಗ್ ತಂತ್ರವನ್ನು ಪೈಂಟ್ ಬ್ರಷ್ ಇಲ್ಲದೆ ರಚಿಸಬಹುದಾಗಿದೆ.
ನಿಮ್ಮದೇ ಸ್ವಂತ ಕ್ಯಾನ್ವಾಸ್ ರಚಿಸಲು ಉತ್ಸುಕರಾಗಿದ್ದರೆ ಪ್ರೊಜೆಕ್ಟ್ ಈವ್ಗೆ ಭೇಟಿ ನೀಡಿ!

ದಿನಾಂಕ: ಶನಿವಾರ, 30ನೇ ಜೂನ್, 2018
ಸಮಯ: ಸಂಜೆ 3.
ಸ್ಥಳ: ಪ್ರೊಜೆಕ್ಟ್ ಈವ್, ಜಯನಗರ 4ನೇ ಬ್ಲಾಕ್, ಬೆಂಗಳೂರು
ಪ್ರಾಜೆಕ್ಟ್ ಈವ್ : ರಿಲಯನ್ಸ್ ರೀಟೇಲ್ನ ಅಂಗವಾದ ಪ್ರಾಜೆಕ್ಟ್ ಈವ್ ಮಳಿಗೆಯು ಮಹಿಳೆಯರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಮೈದಾಳಿದೆ. ಈ ಮಳಿಗೆಯೊಳಕ್ಕೆ ಬರುವ ಸ್ತ್ರೀಯರಿಗೆ ಅಂತಿಮವಾಗಿ ಹಿತಕರವಾದ ಅನುಭವವಾಗಬೇಕು ಎನ್ನುವುದು ಸಂಸ್ಥೆಯ ಆಶಯವಾಗಿದೆ.
ಬೆಂಗಳೂರಿನ ಜಯನಗರ ಬಡಾವಣೆಯ 4ನೇ ಬ್ಲಾಕ್ನಲ್ಲಿರುವ ಪ್ರಾಜೆಕ್ಟ್ ಈವ್ ಮಳಿಗೆಯು ನಾಲ್ಕು ಅಂತಸ್ತುಗಳಲ್ಲಿ, 9,000 ಚದರ ಅಡಿಗಳಷ್ಟು ವಿಸ್ತಾರವಾಗಿದೆ. ಮುಖ್ಯವಾಗಿ, 25ರಿಂದ 40 ವರ್ಷದೊಳಗಿರುವ ಮಹಿಳೆಯರ ಅಗತ್ಯಗಳಿಗೆ ಸ್ಪಂದಿಸುವಂತಿರಬೇಕೆಂಬ ದೃಷ್ಟಿಯಿಂದ ಇದನ್ನು ರೂಪಿಸಲಾಗಿದೆ.
ಫ್ರೆಂಚ್ ಪಾಕಶಾಲೆ ಇರುವ ಹೋಟೆಲ್, ಫ್ಯಾಷನ್ ವಸ್ತುಗಳು, ಜೀವನಶೈಲಿಯ ಸಾಮಾನು-ಸರಂಜಾಮುಗಳು ಎಲ್ಲವೂ ಇಲ್ಲುಂಟು! ಮಹಿಳೆಯರ ಅಭಿರುಚಿಗಳನ್ನು ಪರಿಗಣಿಸಿ, ಅದಕ್ಕೆ ತಕ್ಕಂತೆ ಈ ಮಳಿಗೆಯನ್ನು ವಿನ್ಯಾಸಗೊಳಿಸಲಾಗಿದೆ. ಅಲ್ಲದೆ, ಖರೀದಿಸಿದ ವಸ್ತುಗಳು ಹೇಗಿವೆಯೆಂದು ನೋಡಲು ವಿಶಾಲವಾದ ಎರಡು ಟ್ರಯಲ್ ರೂಮ್ಗಳು, ಚಾರ್ಜಿಂಗ್ ಡಾಕೆಟ್ಗಳು ಮತ್ತು ಎಕ್ಸ್ಪ್ರೆಸ್ ಚೆಕ್ಔಟ್ನ ಸೌಲಭ್ಯಗಳೂ ಇಲ್ಲಿ ಲಭ್ಯ!
ಇವೆಲ್ಲವನ್ನೂ ತುಂಬಾ ಅಚ್ಚುಕಟ್ಟಾಗಿ, ಮಾನಿನಿಯರ ಕಣ್ಸೆಳೆಯುವಂತೆ ವಿನ್ಯಾಸಗೊಳಿಸಲಾಗಿದೆ ಎಂಬುದನ್ನು ಯಾರೂ ಮರೆಯುವಂತಿಲ್ಲ. ಇವುಗಳ ಜೊತೆಗೆ ಲೋಕಾಭಿರಾಮವಾದ ಮಾತುಕತೆಗಳನ್ನು ನಡೆಸಲು ಸೈಡ್ ಟೇಬಲ್ಗಳು, ಆರಾಮವಾಗಿ ಕೂರಲು ನೆರವಾಗುವಂಥ ಆಸನಗಳು, ಬೆಳಗ್ಗೆ ಮತ್ತು ಸಂಜೆಯ ಹೊತ್ತಿಗೆ ಸರಿಯಾಗಿ ಬೆಳಕು ಸೂಸುವಂಥ ಬಗೆಬಗೆಯ ವಿದ್ಯುದ್ದೀಪಗಳು ಕೂಡ ಇಲ್ಲಿವೆ.
-
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Viral Video: ಮಗನ ಸಾಧನೆ ಕಂಡು ಭಾವುಕರಾದ ಪೋಷಕರು; ಕ್ಯೂಟ್ ವಿಡಿಯೋ ವೈರಲ್ -
ಸರ್ಕಾರಿ ಜಮೀನು ಒತ್ತುವರಿ ತಡೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸ್ಥಳಕ್ಕೆ ಭೇಟಿ ನೀಡುತ್ತಿರಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ -
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
Trisha Krishnan: ದಳಪತಿ ವಿಜಯ್ ಜೊತೆಗಿನ ಸಂಬಂಧ, ಡಿವೋರ್ಸ್ ಬಗ್ಗೆ ಮಾಧ್ಯಮಗಳ ಪ್ರಶ್ನೆ: ನಟಿ ತ್ರಿಶಾ ಕೊಟ್ಟ ಉತ್ತರವೇನು? -
92,00,00,000 ರೂಪಾಯಿ ಬಹುಮಾನ, ಈತನ ಬಗ್ಗೆ ಸುಳಿವು ನೀಡಿದರೆ ನಿಮಗೂ ಸಿಗಲಿದೆ ಹಣ... Mojtaba Khamenei -
Shri Gandhada Gudi Serial: "ಶ್ರೀಗಂಧದಗುಡಿ" ಸೀರಿಯಲ್ಗೆ ಗುಡ್ಬೈ ಹೇಳಿದ ಸಂಜನಾ ಬುರ್ಲಿ, ಕಾರಣ ಇಲ್ಲಿದೆ












Click it and Unblock the Notifications