ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜನಾರ್ದನ ರೆಡ್ಡಿ ಸಿಸಿಬಿ ಕಚೇರಿಗೆ: ಪೊಲೀಸರು ಊಟಕ್ಕೆ ಹೋಗಿದ್ರು

|
Google Oneindia Kannada News

ಬೆಂಗಳೂರು, ನವೆಂಬರ್ 10: ಮಾಜಿ‌ಸಚಿವ ಜನಾರ್ದನ್ ರೆಡ್ಡಿ‌ ಸಿಸಿಬಿ ಕೇಂದ್ರ ಕಚೇರಿಗೆ ಬಂದು ವಿಚಾರಣೆಗೆ ಹಾಜರಾದರೂ ಅವರ ವಿಚಾರಣೆ ನಡೆಸಬೇಕಾದ ಪೊಲೀಸರು ಊಟಕ್ಕೆ ಹೋಗಿದ್ದರು ಸುದ್ದಿ ಬಂದಿದೆ.

ಮಾಜಿ ಸಚಿವ ಜರ್ನಾನ ರೆಡ್ಡಿ ತನ್ನ ವಕೀಲ ಚಂದ್ರಶೇಕರ್ ಅವರೊಂದಿಗೆ ಸಿಸಿಬಿ ಕಚೇರಿಗೆ ವಿಚಾರಣೆಗೆಂದು ತೆರಳಿದ್ದಾರೆ. ಆದರೆ ಅವರನ್ನು ವಿಚಾರಣೆಗೆ ಒಳಪಡಿಸಬೇಕಾದ ವೆಂಕಟೇಶ್ ಪ್ರಸನ್ನ, ಡಿಸಿಪಿ ಗಿರೀಶ್ ಎಲ್ಲರೂ ಕೂಡ ಊಟಕ್ಕೆಂದು ಕಚೇರಿಯಿಂದ ಹೊರಕ್ಕೆ ತೆರಳಿದ್ದಾರೆ. ಹೀಗಾಗಿ ಅವರೆಲ್ಲರೂ ಬರುವ ತನಕ ಸಿಸಿಬಿ ಕಚೇರಿಯಲ್ಲೇ ಜನಾರ್ದನ ರೆಡ್ಡಿ ಕಾಯಬೇಕಾಗಿರುವ ಪರಿಸ್ಥಿತಿ ಇದೆ.

ನಾನು ಓಡಿ ಹೋಗಿಲ್ಲ, ಬೆಂಗಳೂರಲ್ಲೇ ಇದ್ದೇನೆ: ಜನಾರ್ದನ ರೆಡ್ಡಿ ವಿಡಿಯೋ ನಾನು ಓಡಿ ಹೋಗಿಲ್ಲ, ಬೆಂಗಳೂರಲ್ಲೇ ಇದ್ದೇನೆ: ಜನಾರ್ದನ ರೆಡ್ಡಿ ವಿಡಿಯೋ

ಜನಾರ್ದನ ರೆಡ್ಡಿ ಮಧ್ಯಾಹ್ನ 3.15ಕ್ಕೆ ಸಿಸಿಬಿ ಕಚೇರಿಗೆ ಹಾಜರಾಗುವುದಾಗಿ ವಿಡಿಯೋ ಒಂದರ ಮೂಲಕ ಮಾಹಿತಿ ನೀಡಿದ್ದರು ಆದರೆ 3.45ಆದರೂ ಕಚೇರಿಗೆ ಆಗಮಿಸದ ಹಿನ್ನೆಲೆಯಲ್ಲಿ ಪೊಲೀಸರು ಊಟಕ್ಕೆಂದು ಹೊರಗಡೆ ಹೋಗಿದ್ದಾರೆ. ಇದೀಗ ಜನಾರ್ದನ ರೆಡ್ಡಿ ಸಿಸಿಬಿ ಕಚೇರಿಯೊಳಗೆ ಅವರ ವಕೀಲ ಚಂದ್ರಶೇಖರ್ ಅವರೊಂದಿಗೆ ಕುಳಿತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗುತ್ತಿದೆ.

Police out for lunch while Janardhan Reddy in CCB head quarter

ರೆಡ್ಡಿಗೆ ಜಾಮೀನು ಸಿಗುತ್ತೋ ಇಲ್ವೋ: ವಕೀಲರು ಹೇಳುವುದೇನು? ರೆಡ್ಡಿಗೆ ಜಾಮೀನು ಸಿಗುತ್ತೋ ಇಲ್ವೋ: ವಕೀಲರು ಹೇಳುವುದೇನು?

ಪೊಲೀಸರು ಬಂದ ನಂತರ ಅವರೇ ಜನಾರ್ದನ ರೆಡ್ಡಿ ಎನ್ನುವದಕ್ಕೆ ಒಂದು ಐಡಿ ಕಾರ್ಡ್, ಫೋಟೊ ಹಾಗೂ ಸಹಿ ಮಾಡಿಸಿಕೊಂಡ ಬಳಿಕ ವಿಚಾರಣೆ ನಡೆಯಲಿದೆ.

ಬಳಿಕ ಎಸಿಪಿ ವೆಂಕಟೇಶ್ ಪ್ರಸನ್ನ ಅವರಿಂದ ವಿಚಾರಣೆ ಆರಂಭವಾಯಿತು, ಅಲಖಾನ್ ಮತ್ತು ವಕೀಲರು ಹೊರಗಡೆಯೇ ಕುಳಿತಿದ್ದರು. ಇದೀಗ ಆಂಬಿಡೆಂಟ್ ಸಂಸ್ಥೆ ಮಾಲೀಕ ಫಿರೀದ್ ವಿಚಾರಣೆಗೆ ಹಾಜರಾಗಿದ್ದಾರೆ.

English summary
Former minister Janardhan Reddy has surrendered before CCB police on Saturday afternoon but senior officers were out for the lunch. He was waited for the further procedure in the CCB head quarter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X