ಬೆಂಗಳೂರು; ಜಮೀನಿನಲ್ಲಿ ಲೇಔಟ್, ಪಟ್ಟಣೆಗೆರೆ ರೈತರ ಪ್ರತಿಭಟನೆ
ಬೆಂಗಳೂರು, ಮೇ. 22: ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿ ರೈತರ ಜಮೀನಿನಲ್ಲಿ ಅಕ್ರಮವಾಗಿ ಬಡಾವಣೆ ನಿರ್ಮಾಣ ಮಾಡುತ್ತಿರುವ ಖಾಸಗಿ ಕಂಪನಿ ವಿರುದ್ಧ ಪಟ್ಟಣಗೆರೆ ರೈತರು ತಿರುಗಿ ಬಿದ್ದಿದ್ದಾರೆ.
ನ್ಯಾಯಾಲಯದ ತಡೆಯಾಜ್ಞೆ ಇದ್ದರೂ ಸಹ ಪಟ್ಟಣಗೆರೆ ಗ್ರಾಮದ 3 ಎಕರೆ ಜಮೀನಿನಲ್ಲಿ ಬಡಾವಣೆ ನಿರ್ಮಿಸಲು ಟ್ರಿಂಕೋ ಇನ್ ಫ್ರಾ. ಪ್ರೈವೆಟ್ ಲಿ. ಮುಂದಾಗಿತ್ತು. ಲೇಔಟ್ನಲ್ಲಿ ಜೆಸಿಬಿಗಳ ಮೂಲಕ ಕಾಮಗಾರಿ ನಿರ್ವಹಿಸಲು ಯತ್ನಿಸಿತ್ತು.
ಟಿವಿ ನಿರೂಪಕರಿಗೆ ಹೊಸ ಆದೇಶ ಹೊರಡಿಸಿದ; ತಾಲಿಬಾನ್
ರೈತರ ಜಮೀನನ್ನು ಅಕ್ರಮವಾಗಿ ಆಕ್ರಮಿಸಿಕೊಂಡು ಬಡಾವಣೆ ನಿರ್ಮಾಣ ಮಾಡುವ ನೆಪದಲ್ಲಿ ರೈತರಿಗೆ ನೀಡುತ್ತಿರುವ ಕಿರುಕುಳ ವಿರೋಧಿಸಿ ರೈತರು ಪ್ರತಿಭಟನೆ ನಡೆಸಿದರು.
ಬೆಂಗಳೂರು ದಕ್ಷಿಣ ತಾಲ್ಲೂಕು ಕೆಂಗೇರಿ ಹೋಬಳಿ ಪಟ್ಟಣಗೆರೆ ಗ್ರಾಮದ ಸರ್ವೇ ನಂ 68 (ಹಳೇ ನಂ 10) ರಲ್ಲಿ 3 ಏಕರೆ ರೈತರ ಜಮೀನಿದ್ದು, ಇದಕ್ಕೆ ಸಂಬಂಧಿಸಿದಂತೆ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ಬಾಕಿಯಿದೆ.
ಈ ವಿವಾದಿತ ಜಮೀನಿನಲ್ಲಿ ಯಾವುದೇ ಥರಹದ ಕಾಮಗಾರಿಗಳನ್ನು ಕೈಗೊಳ್ಳಬಾರದು ಎಂದು ತಡೆಯಾಜ್ಞೆ ನೀಡಲಾಗಿದೆ. ಆದರೂ ಸಹ ಸಹ, M/s Trinco Infra Priviate Limited ಸಂಸ್ಥೆ ಲೇಔಟ್ ನಿರ್ಮಿಸುವ ಕಾಮಗಾರಿ ಕೈಗೆತ್ತಿಕೊಂಡಿದೆ. ಕೆಲ ಗೂಂಡಾಗಳು ರೈತರ ಮೇಲೆ ದಬ್ಬಾಳಿಕೆ ಮಾಡುವ ಯತ್ನ ನಡೆಸಿದ್ದಾರೆ.
ಯಾವುದೇ ಲೇಔಟ್ ಕೂಡಾ ನಿರ್ಮಿಸದೇ ರೈತರುಗಳೇ ಈ ಜಮೀನನ್ನು ಹೊಂದುವ ಅಭಿಲಾಷೆ ಹೊಂದಿದ್ದರೂ ನಮ್ಮಿಂದ ನಮ್ಮ ಜಮೀನನ್ನು ಕಿತ್ತುಕೊಳ್ಳಲು ಹುನ್ನಾರ ನಡೆದಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿ ಅರಿತ ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು.
Recommended Video