Get Updates
Get notified of breaking news, exclusive insights, and must-see stories!

Padmanabhanagar Constituency : ಆಡಳಿತಾರೂಢ ಬಿಜೆಪಿ ಮಣಿಸಲಿವೆಯೇ ಕಾಂಗ್ರೆಸ್‌-ಜೆಡಿಎಸ್, ಇಲ್ಲಿದೆ ವರದಿ, ವಿಶ್ಲೇಷಣೆ

ಬೆಂಗಳೂರಿನ ಒಟ್ಟು ವಿಧಾನಸಭಾ ಕ್ಷೇತ್ರಗಳಲ್ಲಿ ಪದ್ಮನಾಭನಗರವು ಒಂದು. ಆಡಳಿತಾರೂಢ ಬಿಜೆಪಿ ಪ್ರಭಾವ ಇಲ್ಲಿದೆ. ಈ ಬಾರಿ ಬಿಜೆಪಿಯನ್ನು ಹಣಿಯಲು ಜೆಡಿಎಸ್ ಮತ್ತು ಕಾಂಗ್ರೆಸ್‌ ಸಜ್ಜಾಗಿವೆ. ಅದೃಷ್ಠ ಯಾರ ಪಾಲಾಗಲಿದೆ ಎಂದು ಕಾದುನೋಡಬೇಕಿದೆ.

ಬೆಂಗಳೂರು, ಫೆಬ್ರವರಿ 21: ರಾಜ್ಯ ರಾಜಧಾನಿ ಬೆಂಗಳೂರಿನ ಒಟ್ಟು ವಿಧಾನಸಭಾ ಕ್ಷೇತ್ರಗಳ ಪೈಕಿ ಪದ್ಮನಾಭ ನಗರವು ಒಂದು. ನಗರದ ಐಶಾರಾಮಿ ಪ್ರದೇಶವನ್ನು ಹೊಂದಿರುವ ಹಾಗೂ ನಗರದ ಪ್ರಮುಖ ಬಡಾವಣೆಗಳನ್ನು ಒಳಗೊಂಡ ವಿಧಾನಸಭಾ ಕ್ಷೇತ್ರ ಇದಾಗಿದೆ.

ಈ ಕ್ಷೇತ್ರದಲ್ಲಿ ಒಂದೇ ಹೆಸರಿನ ಪ್ರಸಿದ್ಧ ಲಕ್ಷ್ಮೀಕಾಂತ ದೇವಾಲಯ ಹಾಗೂ ಉದ್ಯಾನವನವಿದೆ. ಗಣೇಶ್ ಸೇರಿದಂತೆ ಹಲವು ದೇವಾಲಯಗಳು ಇಲ್ಲಿವೆ. ವಿಶೇಷವೆಂದರೆ ಲಕ್ಷ್ಮೀಕಾಂತ ಉದ್ಯಾನದಲ್ಲಿ ಔಷಧಿ ಗಿಡಗಳು ಇವೆ. ಈ ಕ್ಷೇತ್ರವು ನಗರದ ಪ್ರಮುಖ ಬಡಾವಣೆಗಳಾದ ಕುಮಾರಸ್ವಾಮಿ ಲೇಔಟ್, ಯಡಿಯೂರು, ತ್ಯಾಗರಾಜನಗರ, ಬನಶಂಕರಿ ಎರಡನೇ ಹಂತ, ಯಾರಬ್ ನಗರ, ಬನಶಂಕರಿ ದೇವಸ್ಥಾನದ ವಾರ್ಡ್‌ ಸೇರಿದಂತೆ ಇನ್ನಿತರ ಭಾಗಗಳನ್ನು ಒಳಗೊಂಡ ಪ್ರದೇಶವಾಗಿದೆ.

ಸುಮಾರು ಎರಡು ಕಿಲೋ ಮೀಟರ್ ವ್ಯಾಪ್ತಿಯ ಪದ್ಮನಾಭನಗರ ವಿಧಾನಸಭಾ ಕ್ಷೇತ್ರವು ಆರೋಗ್ಯಕ್ಕೆ ಹೆಚ್ಚು ಕಾಳಜಿ ವಹಿಸಿದಂತಿದ್ದು, ಹಲವು ಪ್ರಮುಖ ಆಸ್ಪತ್ರೆಗಳನ್ನು ಈ ಕ್ಷೇತ್ರದಲ್ಲಿ ಕಾಣಬಹುದು. ಈ ಕ್ಷೇತ್ರ ಮೊದಲಿನಿಂದಲೂ ಪಕ್ಷೇತರ, ಕಾಂಗ್ರೆಸ್‌ ಗೆಲುವು ಸಾಧಿಸುತ್ತಾ ಬಂದಿವೆ. ಆದರೆ ಹಿಡಿತ ಸಾಧಿಸುವಲ್ಲಿ ಅವುಗಳು ವಿಫಲವಾಗಿವೆ. ಆದರೆ ಈ ನಿಟ್ಟಿನಲ್ಲಿ ಬಿಜೆಪಿ ವರ್ಷಗಳಿಂದಲೂ ಪದ್ಮನಾಭನಗರ ಕ್ಷೇತ್ರದಲ್ಲಿ ಹಿಡಿತ ಸಾಧಿಸಿದೆ. ಈಗಿನ ಹಾಲಿ ಕಂದಾಯ ಸಚಿವ ಆರ್‌. ಅಶೋಕ್‌ ಅವರು ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಾ ಬಂದಿದ್ದಾರೆ.

ಪದ್ಮನಾಭನಗರ ಕ್ಷೇತ್ರದ ರಾಜಕೀಯ ಇತಿಹಾಸ

ಪದ್ಮನಾಭನಗರ ಕ್ಷೇತ್ರದ ರಾಜಕೀಯ ಇತಿಹಾಸ

ಪದ್ಮನಾಭನಗರ ಕ್ಷೇತ್ರದಲ್ಲಿ ಬಿಜೆಪಿ ಅತೀ ವೇಗವಾಗಿ ಓಡುತ್ತಿದೆ. ಇದಕ್ಕೆ ಬ್ರೇಕ್ ಹಾಕಲು ಪ್ರತಿಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್ ಯತ್ನಿಸುತ್ತಿವೆ. ಈ ಕ್ಷೇತ್ರದಲ್ಲಿ ಸತತವಾಗಿ ಬಿಜೆಪಿಯೇ ವಿಜಯ ಪತಾಕೆ ಹಾರಿಸಿದೆ. ಈ ಕ್ಷೇತ್ರದಲ್ಲಿ 1967 ರಿಂದಲೂ ಕಾಂಗ್ರೆಸ್‌, ಪಕ್ಷೇತರ, ಜನತಾಪಾರ್ಟಿ ಅಭ್ಯರ್ಥಿಗಳು ಆಯ್ಕೆಯಾಗುತ್ತಾ ಬಂದಿದ್ದರು. 1994ರ ನಂತರ ಬಿಜೆಪಿ ಅಭ್ಯರ್ಥಿಗಳು ಗೆಲ್ಲುತ್ತಾ ಬಂದಿದ್ದು, 2018ರವರೆಗೂ ಅದೇ ಮುಂದುವರಿದಿದೆ. ಈಗಿನ ವಿಧಾನಸಭೆಯ ಸಭಾಧಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇಲ್ಲಿಂದಲೇ ಮೂರು ಭಾರಿ ಆಯ್ಕೆಯಾಗಿದ್ದಾರೆ. ನಂತರ 2008ರಿಂದ ಆರ್‌.ಅಶೋಕ್ ಚುನಾಯಿತರಾಗಿದ್ದಾರೆ.

ಕ್ಷೇತ್ರದಲ್ಲಿ ಆರ್‌.ಅಶೋಕ್ ಪ್ರಭಾವ

ಕ್ಷೇತ್ರದಲ್ಲಿ ಆರ್‌.ಅಶೋಕ್ ಪ್ರಭಾವ

ಕ್ಷೇತ್ರ ವಿಂಗಡಣೆ ಆದ ಮೇಲೆ ಪದ್ಮನಾಭನಗರ ಕ್ಷೇತ್ರದಿಂದ 2008 ರಿಂದ ಆರ್‌.ಅಶೋಕ್ ಅವರು ಮೂರು ಭಾರಿ ಆಯ್ಕೆಯಾಗಿದ್ದಾರೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನ ಗೋಪಾಲ್‌ ಎಂಬವವರು ವಿರುದ್ಧ ಆರ್‌.ಅಶೋಕ್ ಅವರು ಭಾರಿ ಅಂತರದಿಂದ (32,166) ಗೆದ್ದಿದ್ದಾರೆ. ಅದರ ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಇದೇ ಅಶೋಕ್ ಅವರು ಮಣಿಸಿದ್ದರು. ಹೀಗಾಗಿ ಈ ಕ್ಷೇತ್ರ ಪ್ರತಿಪಕ್ಷಗಳಿಗೆ ನುಂಗಲಾರದ ತುತ್ತು ಆಗಿದೆ. ಆರ್‌. ಅಶೋಕ್ ಅವರು ಈ ಭಾರಿಯ ಗೆಲುವು ಸಾಧಿಸಲು ಹವಣಿಸುತ್ತಿದ್ದಾರೆ. ಅವರಿಗೆ ಬಿಜೆಪಿಯಿಂದ ಎಲ್ಲ ಬೆಂಬಲವು ಇದೆ ಎಂದು ತಿಳಿದು ಬಂದಿದೆ.

ವಿಧಾನಸಭಾ ಚುನಾವಣೆ 2023: ಟಿಕೆಟ್ ಆಕಾಂಕ್ಷಿಗಳು

ವಿಧಾನಸಭಾ ಚುನಾವಣೆ 2023: ಟಿಕೆಟ್ ಆಕಾಂಕ್ಷಿಗಳು

ಆಡಳಿತಾರೂಢ ಬಿಜೆಪಿಯಿಂದ ಆರ್‌.ಅಶೋಕ್ ಅವರೇ ಈ ಭಾರಿಯು ಚುನಾವಣೆ ಅಖಾಡಕ್ಕಿಳಿಯಲಿದ್ದಾರೆ. ಕಾಂಗ್ರೆಸ್‌ನಿಂದ ಈ ಹಿಂದೊಮ್ಮೆ ಸೋತಿದ್ದ ಡಾ.ಗುರಪ್ಪ ನಾಯ್ಡು ಅವರು ಆಕಾಂಕ್ಷಿ ಎನ್ನಬಹುದು. ಮತ್ತೊಬ್ಬ ಕೈ ಮುಖಂಡ ಗುರುನಾಥ್ ನಾಯ್ಡು ಅವರು ಸಹ ಈ ಸಲ ಟಿಕೆಟ್ ಬಯಸಿದ್ದಾರೆ. ಇನ್ನೂ ಕ್ಷೇತ್ರದಲ್ಲಿ ತುಸು ಗುರುತಿಸಿಕೊಂಡಿರುವ ಜೆಡಿಎಸ್‌ನಿಂದ ಹರಿಬಾಬು ಅವರು ಸ್ಪರ್ಧಿಸುವ ಸಾಧ್ಯತೆ ಇದೆ. ಇಲ್ಲಿ ಬಿಜೆಪಿಯನ್ನು ಮಣಿಸಲು ಪ್ರತಿಪಕ್ಷಗಳು ಸಾಕಷ್ಟು ತಯಾರಿ ಮಾಡಿಕೊಂಡಿವೆ. ಈ ಭಾರಿ ಯಾರಿಗೆ ಅಧಿಕಾರದ ಅದೃಷ್ಠ ಒಲಿಯಲಿದೆ ಎಂದು ಕಾದು ನೋಡಬೇಕಿದೆ.

ಕ್ಷೇತ್ರದಲ್ಲಿ ಒಕ್ಕಲಿಗ- ಬ್ರಾಹ್ಮಣರೇ ನೀರ್ಣಾಯಕ

ಕ್ಷೇತ್ರದಲ್ಲಿ ಒಕ್ಕಲಿಗ- ಬ್ರಾಹ್ಮಣರೇ ನೀರ್ಣಾಯಕ

ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚಿರುವ ಒಕ್ಕಲಿಗರು, ಬ್ರಾಹ್ಮಣರು, ನಾಯ್ಡು ಸಮುದಾಯದವರು ಅಭ್ಯರ್ಥಿಗಳ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಇಲ್ಲಿ ಒಕ್ಕಲಿಗ ಸಮುದಾಯ ನಾಯಕರ ಜೊತೆಗೆ ನಾಯ್ಡು ಸಮುದಾಯದ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಅದೃಷ್ಠವನ್ನು ಪರೀಕ್ಷೆ ಮಾಡಿಕೊಂಡ ಉದಾಹರಣೆಗಳು ಇವೆ. ಜಾತಿ ಆಧಾರಿತ ರಾಜಕೀಯ ಪ್ರಭಾವವು ಇಲ್ಲಿ ಹೆಚ್ಚಿದೆ.


ಮತದಾರರು ಸಂಖ್ಯೆ

ಬಿಬಿಎಂಪಿ ವಾರ್ಡ್ ಸಂಖ್ಯೆ-182

ಒಟ್ಟು ಮತದಾರರು- 2,87,000

ಒಕ್ಕಲಿಗರು - 60,000

ಲಿಂಗಾಯತ - 10,000

ಬ್ರಾಹ್ಮಣ - 25,000

ಒಬಿಸಿ - 72,000

ಎಸ್‌ಸಿ, ಎಸ್‌ಟಿ - 18,000

ಮುಸ್ಲಿಂ - 44,000

ಇತರೆ - 58,000

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+