Get Updates
Get notified of breaking news, exclusive insights, and must-see stories!

ಬೆಂಗಳೂರಿನಲ್ಲಿ ಇತ್ತೀಚೆಗೆ ಸುರಿದ ಮಳೆಗೆ ಉಂಟಾದ ನಷ್ಟವೆಷ್ಟು?

ಬೆಂಗಳೂರು, ಸೆಪ್ಟೆಂಬರ್‌ 02: ಎಲ್ಲಾ ಪ್ರಮುಖ ಐಟಿ ಮತ್ತು ಬ್ಯಾಂಕಿಂಗ್ ಕಂಪನಿಗಳನ್ನು ಪ್ರತಿನಿಧಿಸುವ ಹೊರ ವರ್ತುಲ ರಸ್ತೆ (ORR-outer ring road) ಕಂಪನಿಗಳ ಸಂಘ (ಒಆರ್‌ಆರ್‌ಸಿಎ), ಆಗಸ್ಟ್ 30 ರಂದು ಉಂಟಾದ ಪ್ರವಾಹದಿಂದಾಗಿ 225 ಕೋಟಿ ರೂಪಾಯಿಗಳ ನಷ್ಟ ಉಂಟಾಗಿದೆ ಎಂದು ಅಂದಾಜಿಸಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬರೆದ ಪತ್ರದಲ್ಲಿ ಸಂಘವು ಒಆರ್‌ಆರ್‌ನ ಉದ್ದಕ್ಕೂ ಕಳಪೆ ಮೂಲಸೌಕರ್ಯವನ್ನು ಸಹ ಒತ್ತು ಹೇಳಿದೆ. ಈ ಕಾರಿಡಾರ್‌ನಲ್ಲಿನ ಕಳಪೆ ಮೂಲಸೌಕರ್ಯವು ಕಂಪನಿಗಳ ದಕ್ಷತೆ ಮತ್ತು ಉತ್ಪಾದಕತೆಯನ್ನು ತಗ್ಗಿಸುತ್ತಿದೆ. ಅಲ್ಲದೆ ಉದ್ಯೋಗಿಗಳ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಅಪಾಯಕ್ಕೆ ತಳ್ಳುತ್ತಿದೆ. ಒಆರ್‌ಆರ್‌ನಲ್ಲಿ ಅಸಮರ್ಪಕ ಮೂಲಸೌಕರ್ಯ ಬಿಕ್ಕಟ್ಟಿನ ಮಟ್ಟವನ್ನು ತಲುಪಿದೆ.

ಒಆರ್‌ಆರ್‌ ಜನಸಂಖ್ಯೆಯ ಕೇವಲ 30% ಜನರು ಕಚೇರಿಯಿಂದ ಕೆಲಸಕ್ಕೆ ಮರಳಿದ್ದರೂ, ಮೂಲಸೌಕರ್ಯಗಳ ಕುಸಿತವು ಭವಿಷ್ಯದ ಬೆಳವಣಿಗೆಯನ್ನು ನಿಭಾಯಿಸಲು ಬೆಂಗಳೂರಿನ ಅಸಮರ್ಥತೆಯ ಬಗ್ಗೆ ಜಾಗತಿಕ ಕಳವಳವನ್ನು ಉಂಟು ಮಾಡಿದೆ ಎಂದು ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ತಿಳಿಸಲಾಗಿದೆ.

ಸೆಂಟ್ರಲ್ ಸಿಲ್ಕ್ ಬೋರ್ಡ್ ಮತ್ತು ಕೆಆರ್ ಪುರ ನಡುವಿನ 17 ಕಿ.ಮೀ. ವ್ಯಾಪ್ತಿಯಲ್ಲಿ ಬರುವ ಕಂಪೆನಿಗಳು ಒಂದು ದಶಲಕ್ಷಕ್ಕೂ ಹೆಚ್ಚು ಜನರನ್ನು ನೇಮಿಸಿಕೊಂಡಿದೆ. ಇವು ವಾರ್ಷಿಕ 22 ಶತಕೋಟಿ ಡಾಲರ್ ಆದಾಯವನ್ನು ಗಳಿಸುತ್ತದೆ. ಇದು ಬೆಂಗಳೂರಿನ ಒಟ್ಟು ಆದಾಯದ 32% ಮತ್ತು ಅತಿ ಹೆಚ್ಚು ತೆರಿಗೆ ಕೊಡುಗೆಯಾಗಿದೆ. ಈ ಕಾರಿಡಾರ್‌ನಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡಿರುವುದು ಭಯಾನಕವಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಹೀಗಾಗಿ ಸಂಘವು ಎಲ್ಲಾ ಏಜೆನ್ಸಿಗಳ ಜಂಟಿ ಸಮನ್ವಯ ಸಭೆಯನ್ನು ಕೋರಿದೆ. ಹಳೆ ವಿಮಾನ ನಿಲ್ದಾಣ ರಸ್ತೆ, ಐಟಿಪಿಎಲ್ ರಸ್ತೆ ಮತ್ತು ವರ್ತೂರು ರಸ್ತೆಯಂತಹ ವಿಭಿನ್ನ ರಸ್ತೆಗಳಲ್ಲಿನ ಯೋಜನೆಗಳ ತ್ವರಿತ ಸುಧಾರಣೆ, ಮೆಟ್ರೋ ಯೋಜನೆಗಳ ವಿವರವಾದ ಯೋಜನಾ ಟೈಮ್‌ಲೈನ್‌ಗಳು ಮತ್ತು ನಿಯಮಿತವಾಗಿ ಮುಖ್ಯ ಕ್ಯಾರೇಜ್‌ವೇ ನಿರ್ವಹಣೆ ಮಾಡಬೇಕು ಎಂದು ಆಗ್ರಹಿಸಿದೆ.

ಬೆಳ್ಳಂದೂರು ಬಳಿಯ ಹೊರ ವರ್ತುಲ ರಸ್ತೆಯ ಒಂದು ಭಾಗವು ಸತತ ಮೂರನೇ ದಿನವೂ ನದಿಯಂತೆ ಹರಿದು ರಾಜಕಾಲುವೆ (ಚರಂಡಿ) ತುಂಬಿ ಹರಿಯುತ್ತಿದೆ. ಸರ್ಜಾಪುರ ರಸ್ತೆಯ ರೈನ್‌ಬೋ ಡ್ರೈವ್‌ ಲೇಔಟ್‌ನಲ್ಲಿ ಗುರುವಾರವೂ ಮೊಣಕಾಲು ಆಳದ ನೀರಿನಿಂದ ತುಂಬಿರುವ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿರಲಿಲ್ಲ. ಮುಂದಿನ ಐದು ದಿನಗಳಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದರಿಂದ ತಗ್ಗು ಪ್ರದೇಶಗಳು ಕಟ್ಟೆಚ್ಚರ ವಹಿಸಬೇಕಾಗಿದೆ.

ನೀರನ್ನು ತೆರವುಗೊಳಿಸಲು ಕಾರ್ಮಿಕರ ನಿಯೋಜನೆ

ನೀರನ್ನು ತೆರವುಗೊಳಿಸಲು ಕಾರ್ಮಿಕರ ನಿಯೋಜನೆ

ನೀರಿನಿಂದ ತುಂಬಿರುವ ರಸ್ತೆಯ ಕೆಲವು ಭಾಗಗಳು ಚಲಿಸಲು ಸಾಧ್ಯವಾಗದ ಕಾರಣ ಹೊರ ವರ್ತುಲ ರಸ್ತೆ (ಒಆರ್‌ಆರ್‌)ನಲ್ಲಿ ವಾಹನ ಸಂಚಾರ ನಿಧಾನವಾಗಿತ್ತು. ಕೆಲವೆಡೆ ಮೊಣಕಾಲುವರೆಗೆ ನೀರು ಕಂಡಿದ್ದರಿಂದ ಪಾದಚಾರಿಗಳೂ ರಸ್ತೆ ದಾಟಲು ಹರಸಾಹಸ ಪಡಬೇಕಾಯಿತು. ಬಿಬಿಎಂಪಿ ಹೊರತುಪಡಿಸಿ, ಖಾಸಗಿ ಕಂಪನಿಗಳು ನೀರನ್ನು ತೆರವುಗೊಳಿಸಲು ಮತ್ತು ಸಂಚಾರ ನಿರ್ವಹಣೆಯಲ್ಲಿ ಪೊಲೀಸರಿಗೆ ಸಹಾಯ ಮಾಡಲು ಕಾರ್ಮಿಕರನ್ನು ನಿಯೋಜಿಸಿದ್ದವು.

ಸೌಲ್ ಕೆರೆಯಿಂದ ವರ್ತೂರು ಕೆರೆಗೆ ನೀರು

ಸೌಲ್ ಕೆರೆಯಿಂದ ವರ್ತೂರು ಕೆರೆಗೆ ನೀರು

ಹೊರ ವರ್ತುಲ ರಸ್ತೆಯ ಕೆಳಭಾಗದಲ್ಲಿ ಕಿರಿದಾದ ಮೋರಿ ನಿರ್ಮಾಣವಾಗಿದ್ದು, ಇದರ ಮೂಲಕ ಸೌಲ್ ಕೆರೆಯಿಂದ ವರ್ತೂರು ಕೆರೆಗೆ ನೀರು ಹರಿಯುತ್ತಿದೆ. ರಾಜಕಾಲುವೆ ಒತ್ತುವರಿಯಾಗಿರುವುದು ಕೂಡ ಪ್ರವಾಹಕ್ಕೆ ಪ್ರಮುಖ ಕಾರಣವಾಗಿದೆ. ಯುವ ಕಾಂಗ್ರೆಸ್ ಸದಸ್ಯರು ಸೇರಿದಂತೆ ಕೆಲವು ನಿವಾಸಿಗಳು ಸಾಂಕೇತಿಕವಾಗಿ ಮೀನು ಹಿಡಿಯುವ ಮೂಲಕ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದರು.

ತ್ವರಿತ ಕ್ರಮ ಯಾವಾಗಲೂ ನಾಪತ್ತೆ

ತ್ವರಿತ ಕ್ರಮ ಯಾವಾಗಲೂ ನಾಪತ್ತೆ

ರೈನ್‌ಬೋ ಡ್ರೈವ್ ಲೇಔಟ್‌ನ ನಿವಾಸಿ ಕೆಪಿ ಸಿಂಗ್, ಸರ್ಕಾರವು ಬಿಕ್ಕಟ್ಟನ್ನು ಸದುಪಯೋಗಪಡಿಸಿಕೊಂಡು ಸಮಸ್ಯೆಗಳನ್ನು ಪರಿಹರಿಸಬಹುದು. ಮುಖ್ಯಮಂತ್ರಿ ಅವರು ಅಲ್ಪಾವಧಿಯ ಅಥವಾ ದೀರ್ಘಾವಧಿಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅಧಿಕಾರಿಗಳು ಪರಿಹಾರಗಳ ಬಗ್ಗೆ ತಿಳಿದಿದ್ದಾರೆ. ಆದರೆ ತ್ವರಿತ ಕ್ರಮ ಯಾವಾಗಲೂ ಕಾಣೆಯಾಗಿದೆ. ಅವರ ಬಡಾವಣೆಯಲ್ಲಿನ ಪ್ರವಾಹವನ್ನು ನಿವಾರಿಸಲು, ಜುನ್ನಸಂದ್ರ ಮತ್ತು ಹಾಲನಾಯಕನಹಳ್ಳಿ ಕೆರೆಗಳಿಂದ ಹೆಚ್ಚುವರಿ ನೀರನ್ನು ಸಾಗಿಸಲು ಎರಡು ಹೊಸ ಚರಂಡಿಗಳನ್ನು ನಿರ್ಮಸಬೇಕು ಎಂದು ಅವರು ಸಲಹೆಯಿತ್ತರು.

ಬೆಂಗಳೂರಿಗೆ ಯಲ್ಲೋ ಅಲರ್ಟ್

ಬೆಂಗಳೂರಿಗೆ ಯಲ್ಲೋ ಅಲರ್ಟ್

ಮುಂದಿನ ಐದು ದಿನಗಳ ಕಾಲ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಲಾಖೆಯು ಬೆಂಗಳೂರಿಗೆ ಹಳದಿ ಅಲರ್ಟ್ ಮತ್ತು ಕೊಡಗು ಮತ್ತು ಶಿವಮೊಗ್ಗದಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ. ಮಾನ್ಸೂನ್ ಉತ್ತರ ಒಳ ಕರ್ನಾಟಕದ ಮೇಲೆ ಪ್ರಬಲವಾಗಿದೆ ಮತ್ತು ದಕ್ಷಿಣ ಒಳನಾಡಿನಲ್ಲಿ ಸಕ್ರಿಯವಾಗಿದೆ. ಉತ್ತರ ತಮಿಳುನಾಡಿನಲ್ಲಿ ಚಂಡಮಾರುತದ ಪರಿಚಲನೆ ಮತ್ತು ದಕ್ಷಿಣ ಶ್ರೀಲಂಕಾದ ಕರಾವಳಿಯಿಂದ ಮಧ್ಯಪ್ರದೇಶದವರೆಗೆ ವ್ಯಾಪಿಸಿರುವ ಚಂಡಮಾರುತ ಭಾರೀ ಮಳೆಗೆ ಕಾರಣವಾಗುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+