ಕೇರಳದ ಜಾಗಕ್ಕೆ ಗಾಜಾಪಟ್ಟಿ ಹೆಸರೇಕೆ?
ಕೇರಳ, ಜೂನ್ 19: ಕೇರಳದ ಸ್ಥಳವೊಂದಕ್ಕೆ ಪ್ಯಾಲೆಸ್ತಿನ್ ಮತ್ತು ಇಸ್ರೇಲ್ ನಡುವಿನ ವಿವಾದದ ಕೇಂದ್ರ ಬಿಂದುವಾದ ಗಾಜಾ ಪಟ್ಟಿಯ ಹೆಸರಿಟ್ಟಿರುವುದು ಇದೀಗ ಭಾರತೀಯ ತನಿಖಾ ದಳದ ಕೆಂಗಣ್ಣಿಗೆ ಗುರಿಯಾಗಿದೆ.
ಪ್ಯಾಲೆಸ್ತಿನ್ ಮತ್ತು ಇಸ್ರೇಲ್ ನಡುವೆ ಸದಾ ಯುದ್ಧ ನಡೆಯುವುದಕ್ಕೆ ಕಾರಣ ಇದೇ ಗಾಜಾಪಟ್ಟಿ. ಆದರೆ ಈ ಹೆಸರನ್ನು ಕೇರಳದ ಕಾಸರಗೋಡಿನ ಸ್ಥಳವೊಂದಕ್ಕೆ ಇಟ್ಟಿರುವುದು ಏಕೆ ಎಂಬ ಅನುಮಾನ ತನಿಖಾ ದಳವನ್ನು ಕಾಡುತ್ತಿದೆ. ಈ ಕೆಲಸದ ಹಿಂದೆ ಯುವಕರನ್ನು ಹಾದಿ ತಪ್ಪಿಸುವ ಉದ್ದೇಶವಿದೆ ಎಂಬುದು ತನಿಖಾ ದಳದ ಊಹೆ.

ಈ ಸ್ಥಳಕ್ಕೆ ನಾಮಕರಣ ಮಾಡಿ, ಉದ್ಘಾಟಿಸಿದವರು ಕಾಸರಗೋಡು ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಜಿಸಿ ಬಶೀರ್ ಎನ್ನುವವರು.
ಇನ್ನೂ ಆತಂಕದ ವಿಷಯವೆಂದರೆ ಇದೇ ಬೀದಿಯ ಪಕ್ಕದ ಪಡನೆ ಎಂಬ ಪ್ರದೇಶದಿಂದ 21 ಯುವಕರು ಅಫ್ಘಾನಿಸ್ತಾನಕ್ಕೆ ಪರಾರಿಯಾಗಿ ಐಸಿಸ್ ಸೇರಿದ್ದರು. ಇದೀಗ ಈ ಬೀದಿಗೆ ಗಾಜಾ ಎಂಬ ಹೆಸರಿಟ್ಟಿರುವುದು ಮತ್ತಷ್ಟು ಆತಂಕವನ್ನುಂಟುಮಾಡಿದೆ.












Click it and Unblock the Notifications