ಬೆಂಗಳೂರಲ್ಲಿ ನಿಕಾನ್ ಇಂಡಿಯಾದಿಂದ ಎಕ್ಸ್ಪಿರಿಯೆನ್ಸ್ ಜೋನ್ ಆರಂಭ
ಬೆಂಗಳೂರು, ಜುಲೈ 8: ನಿಕಾನ್ ಕಾರ್ಪೊರೇಷನ್ನ ಶೇ.100 ಅಧೀನ ಸಂಸ್ಥೆ ನಿಕಾನ್ ಇಂಡಿಯಾ ಬೆಂಗಳೂರಿನಲ್ಲಿ ಹೊಸ ಎಕ್ಸ್ಪಿರಿಯೆನ್ಸ್ ಜೋನ್ ಅನ್ನು ಆರಂಭಿಸಿದೆ. ಇಮೇಜಿಂಗ್ ತಂತ್ರಜ್ಞಾನದ ಮುಂಚೂಣಿಯಲ್ಲಿರುವ ನಿಕಾನ್, ಎಸ್.ಸಿ.ರಸ್ತೆಯ ಬ್ರಿಗೇಡ್ ಪ್ಲಾಜಾದ ಫೊಟೊ ಸರ್ಕಲ್ನಲ್ಲಿಕೇಂದ್ರ ಉದ್ಘಾಟನೆ ಮಾಡಲಾಗಿದೆ.
ಈ ಜೋನ್ ಅನ್ನು ನಿಕಾನ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸಜ್ಜನ್ ಕುಮಾರ್ ಮತ್ತು ನಿಕಾನ್ ಇಂಡಿಯಾದ ಕಾರ್ಪೊರೇಟ್ ಪ್ಲಾನಿಂಗ್ ಜನರಲ್ ಮ್ಯಾನೇಜರ್ ಓಹ್ಬಾ ಯೊಜಿ ಉದ್ಘಾಟಿಸಿದರು. ದಕ್ಷಿಣದಲ್ಲಿ ಈ 33ನೇ ಎಕ್ಸ್ಪಿರಿಯೆನ್ಸ್ ಜೋನ್ ಪ್ರಾರಂಭದ ಮೂಲಕ ಛಾಯಾಗ್ರಾಹಕ ಸಮುದಾಯಕ್ಕೆ ತನ್ನ ಬದ್ಧತೆ ಮತ್ತು ಬೆಂಬಲವನ್ನು ಎತ್ತಿ ತೋರಿಸಿದ್ದು ಇದು ವಿಶಿಷ್ಟ ಉತ್ಪನ್ನದ ಪೋರ್ಟ್ಫೋಲಿಯೊ ಗ್ರಾಹಕರಿಗೆ ಸುಲಭವಾಗಿ ಲಭ್ಯವಿರುವಂತೆ ಮಾಡುತ್ತದೆ.
ಬೆಂಗಳೂರಿನ ಈ ಹೊಸ ಎಕ್ಸ್ಪಿರಿಯೆನ್ಸ್ ಜೋನ್ನ್ ಫೋಟೋಗ್ರಫಿ ಉತ್ಸಾಹಿಗಳು, ವೃತ್ತಿಪರರು, ಹವ್ಯಾಸಿಗಳು ಮತ್ತು ಕಲಾವಿದರ ವಿಸ್ತಾರ ಜಾಲ ತಲುಪಲು ಸನ್ನದ್ಧವಾಗಿಸುತ್ತದೆ ಅಲ್ಲದೆ ಇದು ಸಂಪೂರ್ಣ ಶ್ರೇಣಿಯ ನಿಕಾನ್ ಉತ್ಪನ್ನಗಳು, ಮಿರರ್ಲೆಸ್ ಸೀರೀಸ್, ಡಿಎಸ್ಎಲ್ಆರ್ ಕ್ಯಾಮರಾಗಳು, ಕೂಲ್ಪಿಕ್ಸ್ ರೇಂಜ್, ಲೆನ್ಸ್ಗಳು, ಅಕ್ಸೆಸರಿಗಳು ಮತ್ತು ಸ್ಪೋರ್ಟ್ ಆಪ್ಟಿಕ್ಸ್ ರೇಂಜ್ ಅನ್ನು ಒನ್-ಸ್ಟಾಪ್-ಶಾಪ್ನಲ್ಲಿ ದೊರೆಯುತ್ತದೆ. ಈ ಜೋನ್ಗಳು ಎಲ್ಲ ವೃತ್ತಿಪರ ಛಾಯಾಗ್ರಾಹಕರಿಗೆ ವಿಶೇಷ ತಾಂತ್ರಿಕ ಬೆಂಬಲವನ್ನೂ ನೀಡುತ್ತವೆ.

''ಭಾರತದ ಸಿಲಿಕಾನ್ ವ್ಯಾಲಿ ಬೆಂಗಳೂರಿನಲ್ಲಿ ನಮ್ಮ ಮೌಲಿಕ ಗ್ರಾಹಕರಿಗೆ ಮತ್ತೊಂದು ಫ್ಲಾಗ್ಶಿಪ್ ಎಕ್ಸ್ಪಿರಿಯೆನ್ಸ್ ಜೋನ್ ಪ್ರಾರಂಭಿಸಲು ನಾವು ಬಹಳ ಸಂತೋಷ ಹೊಂದಿದ್ದೇವೆ. ಈ ಹೊಸ ನಿಕಾನ್ ಎಕ್ಸ್ಪಿರಿಯೆನ್ಸ್ ಜೋನ್ ಛಾಯಾಗ್ರಹಣದ ಉತ್ಸಾಹಿಗಳಿಗೆ ನಮ್ಮ ಅತ್ಯಾಧುನಿಕ ಉತ್ಪನ್ನಗಳ ಲಭ್ಯತೆಯನ್ನು ಉತ್ತೇಜಿಸುವ ಗುರಿ ಹೊಂದಿದೆ. ಬೆಂಗಳೂರು ಗಮನಾರ್ಹ ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರವಾಗಿದೆ ಮತ್ತು ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮೆಟ್ರೋಪಾಲಿಟನ್ ನಗರವಾಗಿದೆ. ಇಂದಿನ ಪ್ರಕಟಣೆಯೊಂದಿಗೆ ಗ್ರಾಹಕರು ಈಗ ನಿಕಾನ್ ಸಾಧನದ ಶ್ರೇಣಿ ಕಂಡುಕೊಳ್ಳಬಹುದು ಅದು ವಿಶ್ವದಾದ್ಯಂತ ಛಾಯಾಗ್ರಹಣದ ಸ್ಪೆಕ್ಟ್ರಂ ಅನ್ನು ಬದಲಾಯಿಸಲಿದೆ. ನಮ್ಮ ಗುರಿ ಭಾರತದಾದ್ಯಂತ ನಮ್ಮ ಬ್ರಾಂಡ್ ಅಸ್ತಿತ್ವವನ್ನು ವಿಸ್ತರಿಸುವುದಾಗಿದ್ದು ಛಾಯಾಗ್ರಹಣದಲ್ಲಿ ಆನಂದದಾಯಕ ಮತ್ತು ತಲ್ಲೀನಗೊಳಿಸುವ ಅನುಭವ ನೀಡುತ್ತದೆ'' ಎಂದು ನಿಕಾನ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಸಜ್ಜನ್ ಕುಮಾರ್ ಹೇಳಿದರು.
ಭಾರತದ ದಕ್ಷಿಣ ಮಾರುಕಟ್ಟೆಯು ಸಾಂಸ್ಕತಿಕವಾಗಿ ಪ್ರಗತಿಪರವಾಗಿದ್ದು ಅದು ವಿಸ್ತಾರ ಛಾಯಾಗ್ರಹಣ ಉತ್ಸಾಹಿಗಳು ಮತ್ತು ಕಲಾವಿದರೊಂದಿಗೆ ಸಂಪರ್ಕಕ್ಕೆ ಕಾರ್ಯತಂತ್ರೀಯ ತಾಣವಾಗಿದೆ. ನಿಕಾನ್ ಎಕ್ಸ್ಪಿರಿಯೆನ್ಸ್ ಜೋನ್ಗಳೊಂದಿಗೆ ಕಂಪನಿಯು ಭಾರತದಾದ್ಯಂತ ಗ್ರಾಹಕರಿಗೆ ವಿಶಿಷ್ಟವಾದ 'ಟಚ್ ಅಂಡ್ ಫೀಲ್' ಅನುಭವ ನೀಡುವ ಗುರಿ ಹೊಂದಿದೆ ಮತ್ತು ಯುವ ಮಿಲೆನಿಯಲ್ಗಳೊಂದಿಗೆ ಸಂಪರ್ಕದಲ್ಲಿರಲು ಹಾಗೂ ಆವಿಷ್ಕಾರ ಮತ್ತು ಕಲ್ಪನೆಯ ಸೃಜನಶೀಲ ಅವಕಾಶಗಳನ್ನು ಹುಡುಕಾಟ ನಡೆಸಲು ಸನ್ನದ್ಧವಾಗಿಸುತ್ತದೆ ಎಂದು ಸಂಸ್ಥೆ ಹೇಳಿದೆ.
Recommended Video
-
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications