ಬೆಂಗಳೂರಲ್ಲಿ ನಿಕಾನ್ ಇಂಡಿಯಾದಿಂದ ಎಕ್ಸ್ಪಿರಿಯೆನ್ಸ್ ಜೋನ್ ಆರಂಭ
ಬೆಂಗಳೂರು, ಜುಲೈ 8: ನಿಕಾನ್ ಕಾರ್ಪೊರೇಷನ್ನ ಶೇ.100 ಅಧೀನ ಸಂಸ್ಥೆ ನಿಕಾನ್ ಇಂಡಿಯಾ ಬೆಂಗಳೂರಿನಲ್ಲಿ ಹೊಸ ಎಕ್ಸ್ಪಿರಿಯೆನ್ಸ್ ಜೋನ್ ಅನ್ನು ಆರಂಭಿಸಿದೆ. ಇಮೇಜಿಂಗ್ ತಂತ್ರಜ್ಞಾನದ ಮುಂಚೂಣಿಯಲ್ಲಿರುವ ನಿಕಾನ್, ಎಸ್.ಸಿ.ರಸ್ತೆಯ ಬ್ರಿಗೇಡ್ ಪ್ಲಾಜಾದ ಫೊಟೊ ಸರ್ಕಲ್ನಲ್ಲಿಕೇಂದ್ರ ಉದ್ಘಾಟನೆ ಮಾಡಲಾಗಿದೆ.
ಈ ಜೋನ್ ಅನ್ನು ನಿಕಾನ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸಜ್ಜನ್ ಕುಮಾರ್ ಮತ್ತು ನಿಕಾನ್ ಇಂಡಿಯಾದ ಕಾರ್ಪೊರೇಟ್ ಪ್ಲಾನಿಂಗ್ ಜನರಲ್ ಮ್ಯಾನೇಜರ್ ಓಹ್ಬಾ ಯೊಜಿ ಉದ್ಘಾಟಿಸಿದರು. ದಕ್ಷಿಣದಲ್ಲಿ ಈ 33ನೇ ಎಕ್ಸ್ಪಿರಿಯೆನ್ಸ್ ಜೋನ್ ಪ್ರಾರಂಭದ ಮೂಲಕ ಛಾಯಾಗ್ರಾಹಕ ಸಮುದಾಯಕ್ಕೆ ತನ್ನ ಬದ್ಧತೆ ಮತ್ತು ಬೆಂಬಲವನ್ನು ಎತ್ತಿ ತೋರಿಸಿದ್ದು ಇದು ವಿಶಿಷ್ಟ ಉತ್ಪನ್ನದ ಪೋರ್ಟ್ಫೋಲಿಯೊ ಗ್ರಾಹಕರಿಗೆ ಸುಲಭವಾಗಿ ಲಭ್ಯವಿರುವಂತೆ ಮಾಡುತ್ತದೆ.
ಬೆಂಗಳೂರಿನ ಈ ಹೊಸ ಎಕ್ಸ್ಪಿರಿಯೆನ್ಸ್ ಜೋನ್ನ್ ಫೋಟೋಗ್ರಫಿ ಉತ್ಸಾಹಿಗಳು, ವೃತ್ತಿಪರರು, ಹವ್ಯಾಸಿಗಳು ಮತ್ತು ಕಲಾವಿದರ ವಿಸ್ತಾರ ಜಾಲ ತಲುಪಲು ಸನ್ನದ್ಧವಾಗಿಸುತ್ತದೆ ಅಲ್ಲದೆ ಇದು ಸಂಪೂರ್ಣ ಶ್ರೇಣಿಯ ನಿಕಾನ್ ಉತ್ಪನ್ನಗಳು, ಮಿರರ್ಲೆಸ್ ಸೀರೀಸ್, ಡಿಎಸ್ಎಲ್ಆರ್ ಕ್ಯಾಮರಾಗಳು, ಕೂಲ್ಪಿಕ್ಸ್ ರೇಂಜ್, ಲೆನ್ಸ್ಗಳು, ಅಕ್ಸೆಸರಿಗಳು ಮತ್ತು ಸ್ಪೋರ್ಟ್ ಆಪ್ಟಿಕ್ಸ್ ರೇಂಜ್ ಅನ್ನು ಒನ್-ಸ್ಟಾಪ್-ಶಾಪ್ನಲ್ಲಿ ದೊರೆಯುತ್ತದೆ. ಈ ಜೋನ್ಗಳು ಎಲ್ಲ ವೃತ್ತಿಪರ ಛಾಯಾಗ್ರಾಹಕರಿಗೆ ವಿಶೇಷ ತಾಂತ್ರಿಕ ಬೆಂಬಲವನ್ನೂ ನೀಡುತ್ತವೆ.

''ಭಾರತದ ಸಿಲಿಕಾನ್ ವ್ಯಾಲಿ ಬೆಂಗಳೂರಿನಲ್ಲಿ ನಮ್ಮ ಮೌಲಿಕ ಗ್ರಾಹಕರಿಗೆ ಮತ್ತೊಂದು ಫ್ಲಾಗ್ಶಿಪ್ ಎಕ್ಸ್ಪಿರಿಯೆನ್ಸ್ ಜೋನ್ ಪ್ರಾರಂಭಿಸಲು ನಾವು ಬಹಳ ಸಂತೋಷ ಹೊಂದಿದ್ದೇವೆ. ಈ ಹೊಸ ನಿಕಾನ್ ಎಕ್ಸ್ಪಿರಿಯೆನ್ಸ್ ಜೋನ್ ಛಾಯಾಗ್ರಹಣದ ಉತ್ಸಾಹಿಗಳಿಗೆ ನಮ್ಮ ಅತ್ಯಾಧುನಿಕ ಉತ್ಪನ್ನಗಳ ಲಭ್ಯತೆಯನ್ನು ಉತ್ತೇಜಿಸುವ ಗುರಿ ಹೊಂದಿದೆ. ಬೆಂಗಳೂರು ಗಮನಾರ್ಹ ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರವಾಗಿದೆ ಮತ್ತು ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮೆಟ್ರೋಪಾಲಿಟನ್ ನಗರವಾಗಿದೆ. ಇಂದಿನ ಪ್ರಕಟಣೆಯೊಂದಿಗೆ ಗ್ರಾಹಕರು ಈಗ ನಿಕಾನ್ ಸಾಧನದ ಶ್ರೇಣಿ ಕಂಡುಕೊಳ್ಳಬಹುದು ಅದು ವಿಶ್ವದಾದ್ಯಂತ ಛಾಯಾಗ್ರಹಣದ ಸ್ಪೆಕ್ಟ್ರಂ ಅನ್ನು ಬದಲಾಯಿಸಲಿದೆ. ನಮ್ಮ ಗುರಿ ಭಾರತದಾದ್ಯಂತ ನಮ್ಮ ಬ್ರಾಂಡ್ ಅಸ್ತಿತ್ವವನ್ನು ವಿಸ್ತರಿಸುವುದಾಗಿದ್ದು ಛಾಯಾಗ್ರಹಣದಲ್ಲಿ ಆನಂದದಾಯಕ ಮತ್ತು ತಲ್ಲೀನಗೊಳಿಸುವ ಅನುಭವ ನೀಡುತ್ತದೆ'' ಎಂದು ನಿಕಾನ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಸಜ್ಜನ್ ಕುಮಾರ್ ಹೇಳಿದರು.
ಭಾರತದ ದಕ್ಷಿಣ ಮಾರುಕಟ್ಟೆಯು ಸಾಂಸ್ಕತಿಕವಾಗಿ ಪ್ರಗತಿಪರವಾಗಿದ್ದು ಅದು ವಿಸ್ತಾರ ಛಾಯಾಗ್ರಹಣ ಉತ್ಸಾಹಿಗಳು ಮತ್ತು ಕಲಾವಿದರೊಂದಿಗೆ ಸಂಪರ್ಕಕ್ಕೆ ಕಾರ್ಯತಂತ್ರೀಯ ತಾಣವಾಗಿದೆ. ನಿಕಾನ್ ಎಕ್ಸ್ಪಿರಿಯೆನ್ಸ್ ಜೋನ್ಗಳೊಂದಿಗೆ ಕಂಪನಿಯು ಭಾರತದಾದ್ಯಂತ ಗ್ರಾಹಕರಿಗೆ ವಿಶಿಷ್ಟವಾದ 'ಟಚ್ ಅಂಡ್ ಫೀಲ್' ಅನುಭವ ನೀಡುವ ಗುರಿ ಹೊಂದಿದೆ ಮತ್ತು ಯುವ ಮಿಲೆನಿಯಲ್ಗಳೊಂದಿಗೆ ಸಂಪರ್ಕದಲ್ಲಿರಲು ಹಾಗೂ ಆವಿಷ್ಕಾರ ಮತ್ತು ಕಲ್ಪನೆಯ ಸೃಜನಶೀಲ ಅವಕಾಶಗಳನ್ನು ಹುಡುಕಾಟ ನಡೆಸಲು ಸನ್ನದ್ಧವಾಗಿಸುತ್ತದೆ ಎಂದು ಸಂಸ್ಥೆ ಹೇಳಿದೆ.
Recommended Video
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು












Click it and Unblock the Notifications