ನಂದಿ ಬೆಟ್ಟದ ಬೆರಗು: ನಂದಿ ಹಬ್ಬದಲ್ಲಿ ತೆರೆದುಕೊಳ್ಳಲಿದೆ ಇತಿಹಾಸ, ವಾಸ್ತವ
ಬೆಂಗಳೂರು, ಫೆಬ್ರವರಿ 27 : ಪ್ರಕೃತಿ ಮಾತೆ ಮೈದಳೆದು ನಿಂತಿರುವ ನಂದಿ ಬೆಟ್ಟವನ್ನು ಇನ್ನುಷ್ಟು ಮೆರುಗುಗೊಳಿಸುವ ನಿಟ್ಟಿನಲ್ಲಿ ನಂದಿ ಹಬ್ಬ ಎನ್ನುವ ವಿಶೇಷ ಕಾರ್ಯಕ್ರಮ ಜರುಗಲಿದೆ.
ಮಾನವನ ದಬ್ಬಾಳಿಕೆಯಿದ್ದರೂ ತನ್ನ ತನವನ್ನು ಹಿಡಿದಿಟ್ಟಿರುವ ನಂದಿ ಬೆಟ್ಟದಲ್ಲಿ ರಾಜ್ಯ ಪ್ರವಾಸೋದ್ಯಮ ಇಲಾಖೆಯು ನಂದಿ ಹಬ್ಬವನ್ನು ಮಾರ್ಚ್4 ರಂದು ಆಯೋಜಿಸಿದೆ. ಇತಿಹಾಸವನ್ನು ಇನ್ನಷ್ಟು ಪ್ರಚುರಪಡಿಸಲು ಹಾಗೂ ಯುವ ಪೀಳಿಗೆಗೆ ಈ ಬಗ್ಗೆ ತಿಳಿಸಿಕೊಡಲು ನಂದಿ ಹಬ್ಬವನ್ನು ನಂದಿ ಬೆಟ್ಟದಲ್ಲಿ ಆಯೋಜಿಸಿದೆ. ಯುನೈಟೆಡ್ ವೇ ಬೆಂಗಳೂರು ಹಾಗೂ ನಮ್ಮ ನಿಮ್ಮ ಸೈಕಲ್ ಪ್ರತಿಷ್ಠಾನ ಸಹಯೋಗದಲ್ಲಿ ಹಮ್ಮಿಕೊಂಡಿದೆ.
ನಡಿಗೆ, ಮ್ಯಾರಥಾನ್, ಸೈಕ್ಲಿಂಗ್ ಹೀಗೆ ನಾನಾ ಚಟುವಟಿಕೆಗಳನ್ನು ನಡೆಸುವುದರ ಜತೆಗೆ ನಂದಿ ಬೆಟ್ಟದ ಪುರಾತನ ಕಟ್ಟಡ, ಸಸ್ಯರಾಶಿಗಳು, ಜೀವಸಂಕುಲ, ಸ್ಥಳೀಯ ಸಂಸ್ಕೃತಿ, ಆಹಾರ ಪದ್ಧತಿಯ ಸಮಗ್ರ ಪರಿಚಯ ಮಾಡಿಕೊಡುವುದು ಈ ಹಬ್ಬದ ವಿಶೇಷತೆಯಾಗಿದೆ.

ನಂದಿ ಹಬ್ಬದಲ್ಲಿ ಯೋಗ, ಆಹಾರದ ಕುರಿತ ತರಗತಿಗಳು
ಎಲ್ಲಾ ವಯಸ್ಸಿನವರಿಗೂ ಯೋಗ ತರಗತಿ ನಡೆಯಲಿದ್ದು, ಪ್ರತಿನಿತ್ಯ ಮಕ್ಕಳು ಯಾವ ರೀತಿಯ ಆಹಾರವನ್ನು ಸೇವಿಸಬೇಕು, ವೃದ್ಧರು, ಹಾಗೂ ಯುವಕರು ಯಾವ ರೀತಿಯ ಆಹಾರವನ್ನು ಸೇವಿಸಬೇಕು ಎನ್ನುವ ಕುರಿತು ಕಾರ್ಯಾಗಾರ ನಡೆಯಲಿದೆ.

ನಂದಿ ಬೆಟ್ಟ ಉಳಿಸಲು ಮ್ಯಾರಥಾನ್
ಚಾರಣಿಗರನ್ನು, ಪ್ರವಾಸಿಗರನ್ನು ನಂದಿ ಬೆಟ್ಟ ಕೈಬೀಸಿ ಕರೆಯುತ್ತಿದೆ. ನಂದಿ ಬೆಟ್ಟದಲ್ಲಿ ಸಸ್ಯರಾಶಿಗಳಿವೆ, ಪುರಾತನ ದೇವಾಲಯಗಳಿವೆ. ಇವೆಲ್ಲವನ್ನು ಉಳಿಸುವ ಉದ್ದೇಶದಿಂದ ನಂದಿ ಬೆಟ್ಟದಲ್ಲಿ ಮಾರ್ಚ್ ೪ ರಂದು ಮ್ಯಾರಥಾನ್ ಹಮ್ಮಿಕೊಳ್ಳಲಾಗಿದೆ.

ಬೆಟ್ಟವನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಕ್ರಮ
ನಂದಿ ಬೆಟ್ಟದ ಸ್ವಚ್ಛತೆಗೂ ಒತ್ತು ನೀಡಲಾಗಿದ್ದು, ಬೆಟ್ಟ ಹಾಗೂ ಸುತ್ತಮುತ್ತಲ ಪ್ರದೇಶವನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮ ಸಹ ಆಯೋಜಿಸಲಾಗಿದೆ. ಕಳೆದ ಸೆಪ್ಟೆಂಬರ್ ಆರಂಭದಲ್ಲೇ ನಡೆಯಬೇಕಿದ್ದ ಈ ಕಾರ್ಯಕ್ರಮ ಕಾರಣಾಂತರಗಳಿಂದ ಮುಂದೂಡಲ್ಪಟ್ಟಿತ್ತು. ಪಾರಂಪರಿಕ ತಾಣಗಳ ಪರಿಚಯ: ನಂದಿ ಬೆಟ್ಟದ ಬಳಿಯ ವ್ಯಾಲಿ ಆಫ್ ವಿಂಡ್ ನಿಂದ ಆರಂಭವಾಗುವ ಅನೇಕ ಬಗೆಯ ನಡಿಗೆ ಹಾಗೂ ಮ್ಯಾರಥಾನ್ ಬೆಟ್ಟದ ಸುತ್ತಮುತ್ತಲ ಪ್ರದೇಶದಲ್ಲಿ ಸಾಗಲಿದೆ.

ನಂದಿ ಬೆಟ್ಟ ಸುತ್ತಮುತ್ತಲಿನ ಪಾರಂಪರಿಕ ತಾಣಗಳು
ಈ ವೇಳೆ ನಂದಿಯ ಸುತ್ತಮುತ್ತ ಗಿರಿಗಳು, ಚೋಳರ ಕಾಲದ ಭೋಗ ನಂದೀಶ್ವರ ದೇವಾಲಯ, ಕಲ್ಯಾಣಿ, ಟಿಪ್ಪು ಡ್ರಾಪ್, ಬೊಟಾನಿಕಲ್ ಗಾರ್ಡನ್, ಬ್ರಿಟಿಷ್ ಅಧಿಕಾರಿಗಳ ಸಮಾಧಿ ಸ್ಥಳ, ವಿಶ್ವೇಶ್ವರಯ್ಯನವರ ಜನ್ಮ ಸ್ಥಳ ಸೇರಿದಂತೆ ಸುತ್ತಮುತ್ತಲ ಪಾರಂಪರಿಕ ತಾಣಗಳ ಪರಿಚಯಮಾಡಿಕೊಡಲಾಗುತ್ತದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
AI ಮೂಲಕ ಬರುವ ಉದ್ಯೋಗ ಅರ್ಜಿಗಳಿಂದ ಬೆಂಗಳೂರು ಉದ್ಯಮಿ ಬೇಸರ: 'ಅರ್ಜಿಗಳು ಜಾಸ್ತಿ, ಅರ್ಹತೆ ಕಡಿಮೆ’ -
RCB Vs SRH: ಎಸ್ಆರ್ಎಚ್ ವಿರುದ್ಧದ ಐಪಿಎಲ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕಿಂಗ್ ಕುರಿತು ಆರ್ಸಿಬಿ ಬಿಗ್ ಅಪ್ಡೇಟ್ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಜೋಶ್ ಹ್ಯಾಜಲ್ವುಡ್ ಔಟ್, 7 ಕೋಟಿಯ ಆಟಗಾರನಿಗಿಲ್ಲ ಸ್ಥಾನ; ಅಶ್ವಿನ್ ಹೇಳಿದ ಆರ್ಸಿಬಿ ಸಂಭಾವ್ಯ ಪ್ಲೇಯಿಂಗ್ 11 ಇಲ್ಲಿದೆ -
ತಿಂಗಳಿಗೆ 50 ಸಾವಿರ ಸಂಬಳ ಇದೆಯಾ? 2026ರಲ್ಲಿ ಬೆಂಗಳೂರಿನಂತಹ ಮಹಾನಗರದಲ್ಲಿ ಜೀವನ ವೆಚ್ಚ ಎಷ್ಟಾಗುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್












Click it and Unblock the Notifications