'ಅನಂತ್ ಬದಲಾಯಿಸಿ, ಬೆಂಗಳೂರು ಉಳಿಸಿ'
ಬೆಂಗಳೂರು, ಮಾ.17: ಈ ವಾರವಿಡೀ ನಡೆದ ಹಲವಾರು ಕಾರ್ಯಕ್ರಮಗಳಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಜನರು ಭಾಗವಹಿಸಿ, ತಮ್ಮ ಬೆಂಬಲ ತೋರಿಸಿದ್ದನ್ನು ಕಂಡು ನನ್ನಲ್ಲಿ ವಿನಮ್ರ ಭಾವನೆ ಮೂಡಿದೆ. ಉತ್ತಮ ಬೆಂಗಳೂರು ನಮ್ಮೆಲ್ಲರ ಹಕ್ಕು. ಬನ್ನಿ, ನಾವು ನಮ್ಮ ನಗರಕ್ಕಾಗಿ ಹೋರಾಡೋಣ. ಈಗ ಬದಲಾವಣೆ ಕಾಲ ಬಂದಿದೆ. ಅನಂತ್ ಕುಮಾರ್ ಅವರನ್ನು ಬದಲಾಯಿಸಿ ಬೆಂಗಳೂರನ್ನು ಉಳಿಸಿ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಂದನ್ ನಿಲೇಕಣಿ ಮತದಾರರಿಗೆ ಕರೆ ನೀಡಿದ್ದಾರೆ.
ಭಾರತ್ ನಿರ್ಮಾಣ್ ಪಾದಯಾತ್ರೆಯಲ್ಲಿ ಪಾಲ್ಗೊಂಡಿರುವ ನಂದನ್ ನಿಲೇಕಣಿ ಅವರಿಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ವಿಜಯನಗರ ಕೃಷ್ಣಪ್ಪ, ದಿನೇಶ್ ಗುಂಡೂರಾವ್ ಮುಂತಾದ ನಾಯಕರು ಸಾಥ್ ನೀಡಿದರು. ನಗರ ದೇವೇಗೌಡ ಪೆಟ್ರೋಲ್ ಬಂಕ್, ಯಡಿಯೂರು, ಪದ್ಮನಾಭನಗರದ ಗಲ್ಲಿಗಳು, ಚಿಕ್ಕಪೇಟೆ, ವಿಜಯನಗರ ಸೇರಿದಂತೆ ಹಲವಾರು ಬಡಾವಣೆಗಳಲ್ಲಿ ಕಾಂಗ್ರೆಸ್ ಪಾದಯಾತ್ರೆ ಯಶಸ್ವಿಯಾಗಿ ಸಾಗಿದೆ. ಭಾರತ್ ನಿರ್ಮಾಣ್ ಪಾದಯಾತ್ರೆ ಚಿತ್ರಗಳು, ನಂದನ್ ನಿಲೇಕಣಿ ಚುಟುಕು ಭಾಷಣಗಳ ವಿಡಿಯೋ ತುಣುಕುಗಳನ್ನು ತಪ್ಪದೇ ಮುಂದೆ ವೀಕ್ಷಿಸಿ...
ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಪುಷ್ಪಪುಷ್ಟಿ
ಭಾರತ್ ನಿರ್ಮಾಣ್ ಪಾದಯಾತ್ರೆ ಸಂದರ್ಭದಲ್ಲಿ ನಂದನ್ ಅವರಿಗೆ ಹೂ ಚೆಲ್ಲಿ ಸ್ವಾಗತಿಸಲಾಯಿತು
ಅಲ್ಲಲ್ಲಿ ಚುಟುಕು ಭಾಷಣ ಮಾಡಿದ ನಂದನ್
ಬೆಂಗಳೂರಿಗಾಗಿ ನಾನು ಸಮರ್ಥ ಯೋಜನೆ ರೂಪಿಸಿದ್ದೇನೆ ನನಗೆ ಮತ ನೀಡಿ ಎಂದ ನಂದನ್ ನಿಲೇಕಣಿ
ದಕ್ಷಿಣ ಕ್ಷೇತ್ರದಲ್ಲಿ ನಂದನ್ ಸಂಚಾರ
ದಕ್ಷಿಣ ಕ್ಷೇತ್ರದಲ್ಲಿ ನಂದನ್ ಅವರಿಗೆ ದಿನೇಶ್ ಗುಂಡೂರಾವ್, ಬಿಕೆ ಚಂದ್ರಶೇಖರ್, ಕೃಷ್ಣಪ್ಪ ಮುಂತಾದವರು ಸಾಥ್ ನೀಡಿದರು.
ನಾನೇ ಬೇರೆ ನನ್ನ ಸ್ಟೈಲೇ ಬೇರೆ
ಮಾಧ್ಯಮಗಳ OB ವಾಹನಗಳಿಗೆ ಸುದ್ದಿ ಕೊಡುವುದಲ್ಲ. ಬದಲಿಗೆ ಬದಲಾವಣೆಯ ಹಾದಿಯಲ್ಲಿ ನಡೆದು ಸುದ್ದಿಯನ್ನು ಜನರೇ ನೀಡುವಂತೆ ಮಾಡುತ್ತೇನೆ ಎಂದರು
ಜನರ ಪ್ರತಿಕ್ರಿಯೆಗೆ ನಂದನ್ ಸಂತೃಪ್ತಿ
ಜನರು ತೋರಿಸಿರುವ ಪ್ರತಿಕ್ರಿಯೆ ಕಂಡು ನನ್ನ ಹೃದಯ ತುಂಬಿ ಬಂದಿದೆ ಎಂದ ನಂದನ್ ನಿಲೇಕಣಿ. ಎಎಪಿ ಪಕ್ಷದಂತೆ ಪ್ರತಿಭಟನೆಯೇ ರಾಜಕಾರಣವಾಗಲೂ ಬಿಡುವುದಿಲ್ಲ ಎಂದರು
|
ಚಿಕ್ಕಪೇಟೆಯಲ್ಲಿ ನಂದನ್ ಪ್ರಚಾರ ಕಾರ್ಯ
ಚಿಕ್ಕಪೇಟೆಯಲ್ಲಿ ರಾಮಲಿಂಗಾರೆಡ್ಡಿ ಅವರು ನಂದನ್ ನಿಲೇಕಣಿಗೆ ಸಾಥ್ ನೀಡಿದರು.
|
ಕಾಂಗ್ರೆಸ್ ಭಾರತ್ ನಿರ್ಮಾಣ್ ಯಾತ್ರೆ
ಕಾಂಗ್ರೆಸ್ ಭಾರತ್ ನಿರ್ಮಾಣ್ ಯಾತ್ರೆ ಚಿತ್ರಗಳು
ಕಾಂಗ್ರೆಸ್ ಭಾರತ್ ನಿರ್ಮಾಣ್ ಯಾತ್ರೆ ವಿಡಿಯೋ
ನಂದನ್ ನಿಲೇಕಣಿ ಅವರು ಕಾಂಗ್ರೆಸ್ ಭಾರತ್ ನಿರ್ಮಾಣ್ ಯಾತ್ರೆ ಸಂದರ್ಭದಲಿ ನಡೆಸಿದ ಭಾಷಣದ ತುಣುಕು