Get Updates
Get notified of breaking news, exclusive insights, and must-see stories!

Namma Metro: ಪಿಲ್ಲರ್ ಕುಸಿತ, ಮೃತ ತೇಜಸ್ವಿನಿ ತಂದೆ ಮದನ್ ಕೇಳಿದ ಪ್ರಶ್ನೆಗೆ ಸರ್ಕಾರದ ಬಳಿ ಉತ್ತರವಿದೆಯೇ?

ಬೆಂಗಳೂರು, ಜನವರಿ 12: ಸರ್ಕಾರಕ್ಕೆ ನಾನೇ ಒಂದು ಕೋಟಿ ರೂಪಾಯಿ ಹಣ ನೀಡುತ್ತೇನೆ. ನನಗೆ ಮೃತಪಟ್ಟ ಮಗಳು ಮತ್ತು ಮೊಗ್ಗನನ್ನು ಮರಳಿ ಕೊಡುವಿರಾ? ಎಂದು ತೇಜಸ್ವಿನಿ ತಂದೆ ಮದನ್ ಹೇಳಿದ್ದಾರೆ.

ಮಂಗಳವಾರಷ್ಟೇ ಬೆಂಗಳೂರಿನಲ್ಲಿ ನಡೆದ ಮೆಟ್ರೋ ಪಿಲ್ಲರ್ ಕುಸಿತ ದುರಂತದಲ್ಲಿ ಮಗಳು ಸಾಫ್ಟವೇರ್ ಎಂಜಿನಿಯರ್ ತೇಜಸ್ವಿನಿ ಹಾಗೂ ಎರಡೂವರೆ ವರ್ಷದ ಮೊಮ್ಮಗನನ್ನು ಕಳೆದುಕೊಂಡಿರುವ ತಂದೆ ಮದನ್ ಅವರು ದುಃಖದ ನುಡಿಗಳಿವು.

ಘಟನೆ ನಡೆದ ದಿನ ರಾತ್ರಿಯೇ ತೇಜಸ್ವಿನಿ ಮತ್ತು ಪುಟ್ಟ ಕಂದ ವಿಹಾನ್ ಅವರ ಮೃತದೇಹವನ್ನು ದಾವಣಗೆರೆಯಲ್ಲಿನ ತೇಜಸ್ವಿನಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ತೇಜಸ್ವಿನಿ ತಂದೆ ಮದನ್ ಅವರು, ಘಟನೆ ಬಳಿಕ ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (BMRCL) 20 ಲಕ್ಷ ರೂಪಾಯಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 10 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ ಎಂದರು.

Namma Metro Pillar Collapse: I Will Pay Rs 1 Crore, Can You Bring Back My Daughter And Grandson

ಕಪ್ಪು ಪಟ್ಟಿಗೆ ಸೇರಿಸಲು ಒತ್ತಾಯ

ಆದರೆ ನನಗೆ ಪರಿಹಾರ ಬೇಕಿಲ್ಲ. ನಾನೇ ಸರ್ಕಾರಕ್ಕೆ ಒಂದು ಕೋಟಿ ರೂಪಾಯಿ ನೀಡುತ್ತೇನೆ. ಅಗಲಿದ ಮಗಳು ಹಾಗೂ ಮೊಮ್ಮಗನ ಜೀವ ಹಿಂತಿರುಗಿಸುವಿರಾ ಎಂದು ಮುಖ್ಯಮಂತ್ರಿಗಳಿಗೆ ಪ್ರಶ್ನೆ ಮಾಡಿದ್ದಾರೆ. ಪರಿಹಾರ ಘೋಷಣೆ ಮುಖ್ಯವಲ್ಲ ದಯವಿಟ್ಟು ಘಟನೆಗೆ ಕಾರಣರಾದವರನ್ನು ಬಂಧಿಸಬೇಕು.

ಗುತ್ತಿಗೆದಾರರು ಹಾಗೂ ನಾಗಾರ್ಜುನ್ ಕನ್ಟ್ರಕ್ಷನ್ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿ. ನಗರದ ಸಾಕಷ್ಟು ಕಡೆಗಳಲ್ಲಿ ಕಾಮಗಾರಿಗಳು ನಡೆಯುತ್ತಿವೆ. ನೂರಾರು ಜನರ ಜೀವಗಳ ರಕ್ಷಿಸಬೇಕಿದೆ ಎಂದು ಅವರು ಆಗ್ರಹಿಸಿದರು.

ಪರಿಹಾರ ಘೋಷಣೆ ಮಾಡಿರುವ ಮುಖ್ಯಮಂತ್ರಿಗಳು ಯಾವುದೇ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿಲ್ಲ. ಅವರು ಮೊದಲು ಈ ಕೆಲಸ ಮಾಡಿದೆ. ಹೆಚ್ಚಿನ ಸಮಯವನ್ನು ಇಂತಹ ಘಟನೆಗಳನ್ನು ತಡೆಯಲು, ಆಗಿರುವ ದುರಂತಕ್ಕೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ. ಜನರ ಜೀವದ ಅಪಾಯದಲ್ಲಿರುವುದನ್ನು ಗಂಭೀರವಾಗಿ ಪರಿಗಣಿಸಿ ಎಂದು ಅವರು ಒತ್ತಾಯಿಸಿದರು. ರಾತ್ರಿಯೇ ಮೃತ ಮಗಳು ಹಾಗೂ ಮೊಮ್ಮನ ಅಂತಿಮ ವಿಧಿವಿಧಾನ ನೆರವೇರಿಸಿದರು.

Namma Metro Pillar Collapse: I Will Pay Rs 1 Crore, Can You Bring Back My Daughter And Grandson

ಎಫ್‌ಐಆರ್‌ ದಾಖಲು: 3 ಮಂದಿ ಅಮಾನತು

ಘಟನೆ ಸಂಬಂಧ ಬಿಎಂಆರ್‌ಸಿಎಲ್‌ ಹಾಗೂ ಗುತ್ತಿಗೆದಾರ ಕಂಪನಿ ವಿರುದ್ಧ ಗೃಹ ಸಚಿವ ಆರಗ ಜ್ಞಾನೇಂದ್ರ ಕ್ರಮಕ್ಕೆ ಸೂಚಿಸಿದ್ದಾರೆ. ಇದರ ಬೆನ್ನಲ್ಲೆ ಕಿರಿಯ ಎಂಜಿನಿಯರ್ ಪ್ರಭಾಕರ್, ನಿರ್ದೇಶಕ ಚೈತನ್ಯ, ವಿಶೇಷ ಯೋಜನಾ ವ್ಯವಸ್ಥಾಪಕ ಮೆಥಾಯಿ, ಯೋಜನಾ ವ್ಯವಸ್ಥಾಪಕ ವಿಕಾಸ್ ಸಿಂಗ್, ಮೇಲ್ವಿಚಾರಕ ಲಕ್ಷ್ಮಿಪಥಿ, ಬಿಎಂಆರ್‌ಸಿಲ್ ಕಾರ್ಯನಿರ್ವಾಹಕ ಎಂಜಿನಿಯರ್ ಮಹೇಶ್ ಬಂಡೇಕರಿ ಹಾಗೂ ಉಪ ಮುಖ್ಯ ಎಂಜಿನಿಯರ್ ವೆಂಕಟೇಶ್ ಶೆಟ್ಟಿ ಅವರ ಮೇಲೆ ಎಫ್‌ಐಆರ್‌ ದಾಖಲಾಗಿದೆ. ಪ್ರರಕಣ ಗೋವಿಂದಪುರ ಪೋಲಿಸ್ ಠಾಣೆಯಲ್ಲಿ ದಾಖಲಾಗಿದೆ.

ಪಿಲ್ಲರ್ ಕುಸಿತ ಸಂಬಂಧ ಬೆಂಗಳೂರು ಮೆಟ್ರೋ ರೈಲ್ ಕಾರ್ಫೋರೇಷನ್ ಲಿಮಿಟೆಡ್ (BMRCL) ಬುಧವಾರವಷ್ಟೇಮೂರು ಮಂದಿ ಅಧಿಕಾರಿಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+