Get Updates
Get notified of breaking news, exclusive insights, and must-see stories!

ಶಾಂತಿನಗರದ ಜಪಾನಿ ಹೋಟೆಲ್ ವಿರುದ್ಧ ಸಂಸದ ಕಿಡಿ

ಬೆಂಗಳೂರು, ಜೂ.27: ಸರ್ವಜನಾಂಗದ ಶಾಂತಿಯ ತೋಟ ಎನಿಸಿರುವ ಕನ್ನಡ ನಾಡಿನ ರಾಜಧಾನಿ ಬೆಂಗಳೂರಿನ ಶಾಂತಿನಗರದ ಹೋಟೆಲ್ ವೊಂದರ ಮೇಲೆ ಸಂಸದ ರಾಜೀವ್ ಚಂದ್ರಶೇಖರ್ ಕಿಡಿಕಾರಿದ್ದಾರೆ. ಕಳೆದ ಕೆಲವು ದಿನಗಳಿಂದ ಸದ್ದು ಮಾಡಿದ್ದ ಜಪಾನಿ ಹೋಟೆಲ್ ವಿರುದ್ಧ ಸಂಸದ ರಾಜೀವ್ ಅವರು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ.

ಶಾಂತಿನಗರದ Uno-In ಜಪಾನಿ ಹೋಟೆಲ್ ನಲ್ಲಿ ಭಾರತಿಯರಿಗೆ ಪ್ರವೇಶ ನಿರಾಕರಿಸಿದ ಸುದ್ದಿಯನ್ನು ಬೆಂಗಳೂರು ಮಿರರ್ ಇತ್ತೀಚೆಗೆ ಪ್ರಕಟಿಸಿತ್ತು. ಈ ಬಗ್ಗೆ ರೇಡಿಯೋ ಮಿರ್ಚಿ 98.3 ಎಫ್ಎಂ ವಾಹಿನಿಯ 'ಹಾಯ್ ಬೆಂಗಳೂರು' ಕಾರ್ಯಕ್ರಮದಲ್ಲಿ ಆರ್ ಜೆ ಸ್ಮಿತಾ ದೀಕ್ಷಿತ್ ಕೂಡಾ ಬೆಂಗಳೂರಿಗರ ಗಮನ ಸೆಳೆದರು.

ವಿವಾದಿತ ಹೋಟೆಲ್ ವಿರುದ್ಧ ನಿರೀಕ್ಷೆಯಂತೆ ಜನಾಭಿಪ್ರಾಯ ಸಿಕ್ಕಿತು. ಆದರೆ, ವಿಷಯ ಮುಂದಕ್ಕೆ ಹೋಗಲಿಲ್ಲ. ಈ ಸುದ್ದಿ ಬಗ್ಗೆ ತಿಳಿದ ಜನಾನುರಾಗಿ ಸಂಸದ ರಾಜೀವ್ ಚಂದ್ರಶೇಖರ್ ಅವರು 'ಘಟನೆ ಬಗ್ಗೆ ತೀವ್ರ ವಿಷಾದವಿದೆ. ಯಾವುದೇ ಹೊಟೆಲ್ ಆಗಲಿ ಅತಿಥಿಗಳನ್ನು ರಾಷ್ಟ್ರೀಯತೆ ಆಧಾರದ ಮೇಲೆ ವರ್ಣ ಬೇಧ ಮಾಡುವಂತಿಲ್ಲ' ಎಂದಿದ್ದಾರೆ.

MP Rajeev Chandrasekhar writes to CM Siddu on Racist Japanese Hotel UNO

ಈ ಸಂಬಂಧ ಸಂಸದ ರಾಜೀವ್​ ಚಂದ್ರಶೇಖರ್​​ ಈಗಾಗಲೇ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು, ಜಾತಿ, ಧರ್ಮ, ರಾಷ್ಟ್ರೀಯತೆಯ ಹೆಸರಿನಲ್ಲಿ ತಾರತಮ್ಯ ಮಾಡುವುದನ್ನು ಬಲವಾಗಿ ವಿರೋಧಿಸಿದ್ದಾರೆ.

'ನಾವೇನು ಪ್ರಜಾಪ್ರಭುತ್ವದಲ್ಲಿದ್ದೇವಾ ಅಥವಾ ಇನ್ನೂ ಬ್ರಿಟಿಷ್ ರಾಜ್ಯಭಾರವಿದೆಯೇ? ಈ ಹಿಂದೆ Indians and dogs not allowed ಎಂದು ಬ್ರಿಟಿಷರು ಹಾಕಿದ್ದ ಫಲಕ ಕಿಚ್ಚು ಎಬ್ಬಿಸಿತ್ತು. ಈಗ Indians not allowed ಎಂಬುದನ್ನು ಯಾವ ರೀತಿಯಿಂದಲೂ ಸಹಿಸಲು ಸಾಧ್ಯವಿಲ್ಲ' ಎಂದು ಬಿ ಪ್ಯಾಕ್ ಸದಸ್ಯ, ಮಣಿಪಾಲ್ ವಿದ್ಯಾಸಂಸ್ಥೆ ಚೇರ್ಮನ್ ಮೋಹನ್ ದಾಸ್ ಪೈ ಖಂಡಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+