ನಮ್ಮ ಮೆಟ್ರೋದಲ್ಲಿ ಹಿಂದಿ ಹೇರಿಕೆ ಕಂಡರೆ ಸಂಸದ ಪ್ರತಾಪ್ ಗೆ ತಿಳಿಸಿ
ಬೆಂಗಳೂರು, ಜುಲೈ 08: ಪ್ರಾದೇಶಿಕ ಭಾಷಾ ನೀತಿಯನ್ನು ಗಾಳಿಗೆ ತೂರಿ 'ನಮ್ಮ ಮೆಟ್ರೋ' ರೈಲಿನಲ್ಲಿ ಹಿಂದಿ ಹೇರಿಕೆಯಾಗುತ್ತಿದೆ. ಚೆನ್ನೈ, ಕೊಲ್ಕತ್ತಾ, ದೆಹಲಿ ಮುಂತಾಡ ಕಡೆ ಇರುವ ಮೆಟ್ರೋ ಎರಡು ಭಾಷೆಯ ನೀತಿ ಇರುವಾಗ ಇಲ್ಲಿ ಮಾತ್ರ ಮೂರು ಸೇರಿಸುವುದು ಏಕೆ ಎಂಬ ಕೂಗಿಗೆ ಈಗ ಸಂಸದ ಪ್ರತಾಪ್ ಸಿಂಹ ದನಿಗೂಡಿಸಿದ್ದಾರೆ.
ನಮ್ಮ ಮೆಟ್ರೋ, ಬಿಎಂಆರ್ ಸಿಎಲ್ ನಿರ್ಮಾಣದ ನಿಲ್ದಾಣ, ನಾಮಫಲಕಗಳಲ್ಲಿ ಬರೀ ಇಂಗ್ಲೀಷ್ ಅಥವಾ ಹಿಂದಿ ಭಾಷೆ ಮಾತ್ರ ಬಳಕೆ ಮಾಡಿದ್ದರೆ ಫೋಟೊ ತೆಗೆದು ನನಗೆ ಇಮೇಲ್([email protected]) ಮಾಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. [ನಮ್ಮ ಮೆಟ್ರೋ ಮೇಲೆ ಹಿಂದಿ ಹೇರಿಕೆ ಏಕೆ?]

ಈ ಬಗ್ಗೆ ಪ್ರತಿಕ್ರಿಯಿಸಿರುವ ಕನ್ನಡ ಪರ ನಾಗರಿಕರು:
ಕನ್ನಡಕ್ಕೆ ಮಾನ್ಯತೆ ಕೊಡಿಸುವುದೊಂದೇ ಅಲ್ಲ. ಕನ್ನಡವನ್ನು ಎರಡನೇ ದರ್ಜೆಯ ಭಾಷೆಯಾಗಿಸಲು ಹೊರಟಿರುವ ದೆಹಲಿ ರಾಜಕಾರಣಿಗಳು ಮಾಡುತ್ತಿರುವ ಹಿಂದಿ ಹೇರಿಕೆಯಿಂದಲೂ ಕನ್ನಡಿಗರನ್ನು ಕಾಪಾಡಬೇಕಿದೆ.
ಇದು ಕನ್ನಡಿಗರಿಂದ ಆಯ್ಕೆಯಾಗಿರುವ ರಾಜಕಾರಣಿಗಳ ಕರ್ತವ್ಯ ಕನ್ನಡಕ್ಕೆ ಮಾನ್ಯತೆ ಕೊಡಿಸುವುದೊಂದೇ ಅಲ್ಲ. ಕನ್ನಡವನ್ನು ಎರಡನೇ ದರ್ಜೆಯ ಭಾಷೆಯಾಗಿಸಲು ಹೊರಟಿರುವ ದೆಹಲಿ ರಾಜಕಾರಣಿಗಳು ಮಾಡುತ್ತಿರುವ ಹಿಂದಿ ಹೇರಿಕೆಯಿಂದಲೂ ಕನ್ನಡಿಗರನ್ನು ಕಾಪಾಡಬೇಕಿದೆ. ಇದು ಕನ್ನಡಿಗರಿಂದ ಆಯ್ಕೆಯಾಗಿರುವ ರಾಜಕಾರಣಿಗಳ ಕರ್ತವ್ಯ : ಅಮರನಾಥ್ ಶಿವಶಂಕರ್
ಕನ್ನಡಕ್ಕೆ ಮಾನ್ಯತೆ ಕೊಡಿಸುವುದೊಂದೇ ಅಲ್ಲ. ಕನ್ನಡವನ್ನು ಎರಡನೇ ದರ್ಜೆಯ ಭಾಷೆಯಾಗಿಸಲು ಹೊರಟಿರುವ ದೆಹಲಿ ರಾಜಕಾರಣಿಗಳು ಮಾಡುತ್ತಿರುವ ಹಿಂದಿ ಹೇರಿಕೆಯಿಂದಲೂ ಕನ್ನಡಿಗರನ್ನು ಕಾಪಾಡಬೇಕಿದೆ. ಇದು ಕನ್ನಡಿಗರಿಂದ ಆಯ್ಕೆಯಾಗಿರುವ ರಾಜಕಾರಣಿಗಳ ಕರ್ತವ್ಯ-ಗಣೇಶ್ ಚೇತನ್
ಪ್ರತಾಪ್ ಸಿಂಹ ಅವರ ಟ್ವೀಟ್ ಹೀಗಿದೆ:
If you find ONLY Eng n Hindi sign boards in Namma Bengaluru Metro, pls take a pic n mail to [email protected]
— Pratap Simha (@mepratap) July 8, 2015 (ಒನ್ ಇಂಡಿಯಾ ಸುದ್ದಿ)












Click it and Unblock the Notifications