ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಸಿ ಕಸ ನಿರ್ವಹಣೆ ಉತ್ತೇಜನಕ್ಕೆ ತೆರಿಗೆ ವಿನಾಯ್ತಿಗಾಗಿ ಅಭಿಯಾನ

|
Google Oneindia Kannada News

ಬೆಂಗಳೂರು, ಅ.3: ಬೆಂಗಳೂರು ನಗರ ಕಸ ವಿಚಾರಣೆ ವಿಚಾರದಲ್ಲಿ ಒಂದು ಹೆಜ್ಜೆ ಮುಂದಿಟ್ಟಿರುವ ಮಲ್ಲೇಶ್ವರ ಶಾಸಕ ಅಶ್ವತ್ಥನಾರಾಯಣ ಹಸಿ ಕಸವನ್ನು ಮನೆಯಲ್ಲೇ ಕಾಂಪೋಸ್ಟ್ ಮಾಡುವಂತಹ ನಾಗರಿಕರಿಗೆ ಘನತ್ಯಾಜ್ಯ ತೆರಿಗೆ ಸೆಸ್ ನಿಂದ ವಿನಾಯ್ತಿ ನೀಡಬೇಕೆಂಬ ಹೊಸ ಉಪಾಯ ಒಂದನ್ನು ಬಿಬಿಎಂಪಿ ಮುಂದೆ ಇರಿಸಿದ್ದಾರೆ.

ಈ ಕುರಿತು ಚೇಂಜ್ ಡಾಟ್ ಆರ್ಗ್ ವೆಬ್‌ಸೈಟ್‌ ಮೂಲಕ ಅಭಿಯಾನವೊಂದನ್ನು ಆರಂಭಿಸಿರುವ ಶಾಸಕ ಅಶ್ವತ್ಥನಾರಾಯಣ, ಹಸಿಕಸವನ್ನು ಮನೆಯಲ್ಲೇ ಕಾಂಪೋಸ್ಟ್ ಮಾಡಿಕೊಳ್ಳುವ ನಾಗರಿಕರಿಗೆ ಘನ್ಯತ್ಯಾಜ್ಯ ಸೆಸ್ ನಲ್ಲಿ ವಿನಾಯ್ತಿ ನೀಡಿದರೆ ಹಸಿಕಸವನ್ನು ಮನೆಯಲ್ಲೇ ಕಾಂಪೋಸ್ಟ್ ಮಾಡುವ ಮೂಲಕ ವಿಭಿನ್ನ ಬಗೆಯ ಬಳಕೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಮನವಿ ಮಾಡಿದ್ದಾರೆ.

ಎಲ್ಲೆಂದರಲ್ಲಿ ಕಸ ಹಾಕೋರಿಗೆ ಪಾಠ ಕಲಿಸಲು ಈತ ಮಾಡಿದ ಉಪಾಯಕ್ಕೆ ಸಿಕ್ಕಿತು ಫಲ ಎಲ್ಲೆಂದರಲ್ಲಿ ಕಸ ಹಾಕೋರಿಗೆ ಪಾಠ ಕಲಿಸಲು ಈತ ಮಾಡಿದ ಉಪಾಯಕ್ಕೆ ಸಿಕ್ಕಿತು ಫಲ

ನಗರದಲ್ಲಿ ಪ್ರತಿನಿತ್ಯ ತ್ಯಾಜ್ಯ ವಿಲೇವಾರಿ ದೊಡ್ಡ ಸಮಸ್ಯೆಯಾಗಿದೆ, ಇದಕ್ಕೆ ಉತ್ತರ ಕಂಡುಕೊಳ್ಳುವುದು ಸುಲಭವಲ್ಲ, ಮನೆಯಲ್ಲಿ ಅಪಾರ್ಟ್ ಮೆಂಟ್ ಸಮುಚ್ಛಯಗಳಲ್ಲಿ ಕಾಂಪೋಸ್ಟ್ ತಯಾರಿಸುತ್ತಿರುವವರಿಗೆ ಉತ್ತೇಜನ ನೀಡಬೇಕಾದ ಅಗತ್ಯವಿದೆ.

MLA Ashwath Narayan launches campaign for SWM cess relaxation

ಬಿಡದಿಯ ಕಸ ವಿಲೇವಾರಿ ಸಮಸ್ಯೆಗೆ ಮುಕ್ತಿ ಯಾವಾಗ? ಬಿಡದಿಯ ಕಸ ವಿಲೇವಾರಿ ಸಮಸ್ಯೆಗೆ ಮುಕ್ತಿ ಯಾವಾಗ?

ಅದರ ಬದಲು ಬಿಬಿಎಂಪಿ ಎಲ್ಲರನ್ನು ಒಂದೇ ತಕ್ಕಡಿಯಲ್ಲಿ ತೂಗುತ್ತಿದೆ. ಕಸವನ್ನು ಪಾಲಿಕೆಗೆ ನೀಡುವವರಿಗೆ ಹಾಗೂ ಕಾಂಪೋಸ್ಟ್ ತಯಾರಿಸುವವರಿಗೆ ಒಂದೇ ಸೆಸ್ ವಿಧಿಸುವುದು ಅನ್ಯಾಯವಾಗುತ್ತದೆ ಹಾಗಾಗಿ ಕಾಂಪೋಸ್ಟ್ ಮಾಡುವವರಿಗೆ ತೆರಿಗೆಯಲ್ಲಿ ವಿನಾಯ್ತಿ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

English summary
MLA Dr.Ashwathnarayan has launched an online campaign for seeking cess relaxation on solid waste management to promote wet waste management at individual houses.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X