Bengaluru: ಹಾಲಿನ ಕೊರತೆಯಿಂದ ಹೋಟೆಲ್ಗಳ ಮೇಲೆ ಪರಿಣಾಮ, ಆತಂಕದಲ್ಲಿ ಉದ್ಯಮ- ಮಾಹಿತಿ ತಿಳಿಯಿರಿ
ಬೆಂಗಳೂರು, ಮಾರ್ಚ್ 11: ಹಾಲು ಉತ್ಪಾದನೆಯಲ್ಲಿ ಆತಂಕಕಾರಿ ಕುಸಿತದಿಂದ ನಗರದ ಹೋಟೆಲ್ ಉದ್ಯಮಕ್ಕೆ ಭಾರೀ ಹೊಡೆತ ಬಿದ್ದಿದೆ. ದಿನಕ್ಕೆ ಸುಮಾರು 4.5 ಲಕ್ಷ ಲೀಟರ್ ಹಾಲು ಮತ್ತು 3 ಲಕ್ಷ ಲೀಟರ್ ಮೊಸರು ಅಗತ್ಯವಿದ್ದು, ಹೋಟೆಲ್ ಮಾಲೀಕರು ಸಕಾಲದ ಪೂರೈಕೆಯಲ್ಲಿ ಕೊರತೆ ಎದುರಿಸುತ್ತಿದ್ದಾರೆ.
ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಜಗತ್ತು ಚೇತರಿಸಿಕೊಳ್ಳುತ್ತಿದ್ದಂತೆ ಹೋಟೆಲ್ ಉದ್ಯಮವು ತನ್ನ ವ್ಯವಹಾರದಲ್ಲಿ ಚೇತರಿಕೆ ಕಂಡಿತ್ತು. ಈ ಹೆಚ್ಚಿದ ಬೇಡಿಕೆಯ ಪರಿಣಾಮವಾಗಿ ಹೋಟೆಲ್ಗಳಲ್ಲಿ ಹಾಲಿನ ಅಗತ್ಯವೂ ಗಣನೀಯವಾಗಿ ಏರಿದೆ. ಆದರೆ, ಸಕಾಲಕ್ಕೆ ಹಾಲು ಪೂರೈಕೆಯಾಗದಿದ್ದಲ್ಲಿ ಖಾಸಗಿ ಕಂಪನಿಗಳ ಮೊರೆ ಹೋಗಬೇಕಾದ ಅನಿವಾರ್ಯತೆ ಎದುರಾಗಬಹುದು ಎಂದು ಹೊಟೇಲ್ ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ.

'ನಂದಿನಿ ಬ್ರಾಂಡ್ ಗುಣಮಟ್ಟದ ಹಾಲು ನೀಡುತ್ತದೆ. ಅದು ನಮ್ಮ ರಾಜ್ಯದ ಹೆಮ್ಮೆಯಾಗಿದೆ. ಖಾಸಗಿ ಕಂಪನಿಗಳಿಂದ ಹಾಲು ಖರೀದಿಸಲು ನಮಗೂ ಇಷ್ಟವಿಲ್ಲ. ಆದರೆ, ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗುತ್ತಿದೆ' ಎಂದು ಹೋಟೆಲ್ ಮಾಲೀಕರು ಹೇಳಿದ್ದಾರೆ.
'ಬೇರೆ ರಾಜ್ಯಗಳಿಗೆ ಹಾಲು ಪೂರೈಕೆಯನ್ನು ನಿಲ್ಲಿಸಬೇಕು. ಆಗ ಇಲ್ಲಿಯೂ ಹಾಲು ದೊರೆಯುತ್ತದೆ. ಹೋಟೆಲ್ ಉದ್ಯಮದ ಮೇಲೆ ಪರಿಣಾಮ ಬೀರದ ರೀತಿಯಲ್ಲಿ ಕ್ರಮಗಳನ್ನು ತೆಗೆದುಕೊಳ್ಳಬೇಕು' ಎಂದು ಬೃಹತ್ ಬೆಂಗಳೂರು ಹೋಟೆಲ್ ಅಸೋಸಿಯೇಷನ್ (BBHA) ಅಧ್ಯಕ್ಷ ಪಿ ಸಿ ರಾವ್ 'ಡಿಕ್ಕನ್ ಹೆರಾಲ್ಡ್' ಪತ್ರಿಕೆಗೆ ತಿಳಿಸಿದ್ದಾರೆ.
ರಾಜ್ಯಾದ್ಯಂತ ಹೈನುಗಾರಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಹೊಸ ಉಪಕ್ರಮಗಳನ್ನು ಪರಿಚಯಿಸಲು ಮತ್ತು 'ಮನೆಗೆ ಒಂದು ಹಸು' ನಂತಹ ಕಾರ್ಯಕ್ರಮಗಳನ್ನು ಪ್ರಾರಂಭಿಸಲು ರಾವ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

'ಈಗ ಖೋವಾ ಮತ್ತು ಇತರ ಡೈರಿ ಆಧಾರಿತ ಉತ್ಪನ್ನಗಳ ಉತ್ಪಾದನೆಯನ್ನು ಕಡಿಮೆ ಮಾಡಬೇಕು. ಮದುವೆ ಸಮಾರಂಭಗಳಿಗೆ ಹಾಲು ಆಧಾರಿತ ಸಿಹಿತಿಂಡಿಗಳನ್ನು ಕೆಲವು ದಿನಗಳವರೆಗೆ ತಪ್ಪಿಸಬೇಕು' ಎಂದು ರಾವ್ ಹೇಳಿದ್ದಾರೆ.
ನಗರದಲ್ಲಿನ ಕೆಲವು ಸಹಕಾರಿ ಸಂಸ್ಥೆಗಳು ಮತ್ತು ಹಾಲಿನ ಪಾರ್ಲರ್ಗಳು ಹಾಲಿನ ಕೊರತೆ ಎದುರಿಸುತ್ತಿವೆ. ಮದರ್ ಡೈರಿ ಉತ್ಪನ್ನಗಳನ್ನು ಪಡೆಯುವ ನಗರದ ನಂದಿನಿ ಮಿಲ್ಕ್ ಪಾರ್ಲರ್ ಮಾಲೀಕರು ಫೆಬ್ರವರಿ 28 ರಂದು ಹಾಲು ಸರಬರಾಜು ಮಾಡಲಿಲ್ಲ ಎಂದು ಆರೋಪಿಸಿದ್ದರು. ಪೂರೈಕೆ ಪುನರಾರಂಭವಾಗಿದ್ದರೂ, ಕೊರತೆ ಮುಂದುವರೆದಿದೆ ಎಂದು ತಿಳಿದುಬಂದಿದೆ.
ಕೊರತೆಯಿದೆ ಎಂದು ಮದರ್ ಡೈರಿಯ ಮೂಲವೊಂದು ದೃಢಪಡಿಸಿದೆ. 'ನನ್ನ ಅವಶ್ಯಕತೆ ದಿನಕ್ಕೆ 1,500 ಲೀಟರ್ ಆಗಿದ್ದರೆ, ಏಜೆಂಟ್ ಸುಮಾರು 1,000 ಲೀಟರ್ ಮಾತ್ರ ಪೂರೈಸಲು ಸಾಧ್ಯವಾಗುತ್ತಿದೆ. ಅನೇಕ ಅಂಗಡಿ ಮಾಲೀಕರು ಮದರ್ ಡೈರಿಯಿಂದ ಇದೇ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ' ಎಂದು ಮಾಲೀಕರು ಹೇಳಿದ್ದರು.
ಬೆಂಗಳೂರು ಮಿಲ್ಕ್ ಯೂನಿಯನ್ ಲಿಮಿಟೆಡ್ (ಬಮುಲ್) ಮುಖ್ಯಸ್ಥರಾದ ನರಸಿಂಹ ಮೂರ್ತಿ ಅವರು ಡೈರಿ ರೈತರಿಂದ ಸಂಗ್ರಹಿಸುವ ಹಾಲಿನ ಕೊರತೆಯನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಒಕ್ಕೂಟವು ಈಗ ಪ್ರತಿದಿನ 13 ಲಕ್ಷ ಲೀಟರ್ ಹಾಲನ್ನು ಸಂಗ್ರಹಿಸುತ್ತದೆ ಮತ್ತು ಅವುಗಳು ಒಂದು ಲಕ್ಷ ಲೀಟರ್ಗಳಷ್ಟು ಕೊರತೆಯಿದೆ ಎಂದು ಅವರು ತಿಳಿಸಿದ್ದಾರೆ.
ಕೆಎಂಎಫ್ನ ಖರೀದಿ ಬೆಲೆಯಿಂದ ಅತೃಪ್ತರಾಗಿರುವ ರೈತರು ತಮ್ಮ ಜಾನುವಾರುಗಳನ್ನು ಹೆಚ್ಚಾಗಿ ಮಾರಾಟ ಮಾಡುತ್ತಿರುವುದು ಕೊರತೆಗೆ ಕಾರಣವಾಗಿದೆ ಎಂದು ಮೂರ್ತಿ ಹೇಳುತ್ತಾರೆ. ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಕೊರತೆ ತೀವ್ರವಾಗಲಿದೆ ಎಂದಿದ್ದಾರೆ
ಬಮುಲ್ನಿಂದ ಪ್ರತಿದಿನ 5,000-6,000 ಲೀಟರ್ ಹಾಲನ್ನು ಸಂಗ್ರಹಿಸಿ ಪ್ಯಾಲೇಸ್ ಗುಟ್ಟಹಳ್ಳಿಯ ಹಾಲಿನ ಪಾರ್ಲರ್ಗಳು ಮತ್ತು ಹೋಟೆಲ್ಗಳಿಗೆ ಸರಬರಾಜು ಮಾಡುವ ಏಜೆಂಟ್ ಆನಂದ್, ಈಗ ಪ್ರತಿದಿನ ಸುಮಾರು 400 ಲೀಟರ್ ಹಾಲಿನ ಕೊರತೆಯಿದೆ ಎಂದು ಹೇಳಿದ್ದಾರೆ.
-
Karnataka Weather: ಕಲಬುರಗಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ 39 ಡಿಗ್ರಿ ದಾಟಿದ ತಾಪಮಾನ -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Gold Rate: ಬಂಗಾರ ಮತ್ತಷ್ಟು ದುಬಾರಿ: 16,000 ರೂ. ದಾಟಿದ ಚಿನ್ನ, ಬೆಳ್ಳಿ ಬೆಲೆ ಕೂಡ ಏರಿಕೆ, ಇಲ್ಲಿದೆ ಇಂದಿನ ದರ ವಿವರ -
ಎಲ್ಪಿಜಿ ಸಿಲಿಂಡರ್ ಪೂರೈಕೆ ಸ್ಥಗಿತ: ನಾಳೆಯಿಂದ ಬೆಂಗಳೂರಿನಾದ್ಯಂತ ಹೋಟೆಲ್ಗಳು ಬಂದ್ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ












Click it and Unblock the Notifications