ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕ್ರೂರತ್ವದ ವಿರುದ್ಧ ಸಾತ್ವಿಕ ಅಭಿಯಾನ: #BeefFest vs #MilkFest

|
Google Oneindia Kannada News

ಬೆಂಗಳೂರು, ಜೂನ್ 6: ಕೇಂದ್ರ ಸರ್ಕಾರದ ವಿವಾದಿತ ಗೋಹತ್ಯೆ ನಿಷೇಧ ಕಾಯ್ದೆವನ್ನು ವಿರೋಧಿಸಿ ದೇಶದ ಹಲವೆಡೆ ಆರಂಭವಾಗಿದ್ದ ಬೀಫ್ ಫೆಸ್ಟ್ ಗೆ ಪ್ರತಿಯಾಗಿ ಶ್ರೀ ರಾಮಚಂದ್ರಾಪುರ ಮಠ ಮಿಲ್ಕ್ ಫೆಸ್ಟ್ ಅನ್ನು ಆರಂಭಿಸಿದೆ. ದೇಸೀ ಹಸುಗಳ ಮಹತ್ವವನ್ನು ಅರ್ಥಮಾಡಿಸುವುದಕ್ಕಾಗಿ ಆರಂಭವಾಗಿರುವ ಈ ಫೆಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿದೆ. ಜೂನ್ 11 ಭಾನುವಾರದಂದು ಬೆಂಗಳೂರಿನ ವಿಜಯನಗರದ ಶ್ರೀಭಾರತಿ ವಿದ್ಯಾಲಯದಲ್ಲಿ ಮಧ್ಯಾಹ್ನ 3 ಗಂಟೆಗೆ ಮಿಲ್ಕ್ ಫೆಸ್ಟ್ ನಡೆಯಲಿದೆ.

ಈ ಬಾರಿ ರಾಜ್ಯ ತೀವ್ರ ಬರಗಾಲ ಎದುರಿಸುತ್ತಿದ್ದ ಸಮಯದಲ್ಲೂ ಗೋವುಗಳಿಗೆ ಮೇವು ಒದಗಿಸುವ ಸಲುವಾಗಿ ರಾಮಚಂದ್ರಾಪುರ ಮಠದಿಂದ ಆರಂಭವಾಗಿದ್ದ #GiveUpAMeal ಅಭಿಯಾನ ಲಕ್ಷಾಂತರ ಜನರನ್ನು ತಲುಪಿ ಕ್ರಾಂತಿಯನ್ನೇ ಮಾಡಿತ್ತು. ಒಂದು ಹೊತ್ತಿನ ಊಟ ಬಿಟ್ಟು ಅದರಿಂದಾಗಿ ಉಳಿಸಿದ ಹಣವನ್ನು ಪುಣ್ಯಕೋಟಿಗೆ ಮೇವು ಒದಗಿಸಲಿಕ್ಕಾಗಿ ವ್ಯಯಿಸುವ ಈ ಅಭೂತಪೂರ್ವ ಕಲ್ಪನೆಗೆ ಲಕ್ಷಾಂತರ ಜನರು ಬೆಂಬಲ ಸೂಚಿಸಿದ್ದರು. ಅದರಂತೆಯೇ ಇದೀಗ #MilkFest ಅಭಿಯಾನ ಸಹ ಆರಂಭವಾಗಿದೆ. ಈ ಹೋರಾಟಕಕೆ ಟ್ವಿಟ್ಟರ್ ಮೂಲಕವೂ ಬೆಂಬಲ ಸೂಚಿಸಬಹುದು.['ಬಿಲೀಫ್ ಫೆಸ್ಟ್' ಆಚರಿಸುವಂತೆ ಯುವ ಬ್ರಿಗೇಡ್ ಕರೆ, ಏನಿದು ಬಿಲೀಫ್ ಫೆಸ್ಟ್!]

ಗೋಹತ್ಯೆಯಂಥ ಮಹಾಪಾಪ ಮಾಡುವವರಿಗೆ ಗೋವಿನ ಮಹತ್ವವನ್ನು ಅರ್ಥಮಾಡಿಸುವ ಸಾತ್ವಿಕ ಹೋರಾಟ ಇದು.
* ಗೋವಿಗೆ ಭಾರತೀಯರ ಹೃದಯದಲ್ಲಿ ಮಹೋನ್ನತ ಸ್ಥಾನ ಏಕಿದೆ?
* ದೇಶಿ ಹಸುವಿನ ಉತ್ಪನ್ನಗಳ ಉಪಯೋಗವೇನು?
* ಗೋಮಾಂಸ ಭಕ್ಷಣೆ ಸಮಾಜದ ಮೇಲೆ ಬೀರುವ ವ್ಯತಿರಿಕ್ತ ಪರಿಣಾಮವೇನು?
ಎಂಬಿತ್ಯಾದಿ ವಿಷಯಗಳ ಕುರಿತು ಚರ್ಚಿಸಿ, ಗೋವಿನ ಬಗೆಗೆ ಪ್ರೀತಿ, ಗೌರವ ಬೆಳಸಿಕೊಳ್ಳುವುದಕ್ಕಾಗಿ ಈ ಮಿಲ್ಕ್ ಫೆಸ್ಟ್. ಇಂದು ಬೆಳಗ್ಗೆ 6.00 ಗಂಟೆಯಿಂದಲೇ ಟ್ವೀಟ್ಟರ್ ನಲ್ಲಿ ಅಭಿಯಾನ ಆರಂಭವಾಗಿದ್ದು, ಇದಕ್ಕೆ ಬೆಂಬಲ ನೀಡುವವರು #MilkFest ಹ್ಯಾಶ್ ಟ್ಯಾಗ್ ಮೂಲಕ ತಮ್ಮ ಬೆಂಬಲವನ್ನು ಸೂಚಿಸಬಹುದು.[ಗೋವಿನ ಬಗ್ಗೆ ನಿಮಗೆ ತಿಳಿಯದ ರೋಚಕ ಸಂಗತಿಗಳು]

ಈಗಾಗಲೇ ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗಿರುವ #MilkFest ಗೆ ಬೆಂಬಲ ಸೂಚಿಸಿದ ಕೆಲವರ ಟ್ವಿಟ್ಟರ್ ಹೇಳಿಕೆಗಳು ಇಲ್ಲಿವೆ.

ಕೆಂಪು ಹಿಂಸೆ ಮತ್ತು ಶ್ವೇತ ಶಾಂತಿ!

[ಗೋಭಕ್ಷಕರಿಗೆ ಸರಿಯಾಗಿ ಚಾಟಿ ಬೀಸಿದ ಉಚ್ಚ ನ್ಯಾಯಾಲಯ][ಗೋಭಕ್ಷಕರಿಗೆ ಸರಿಯಾಗಿ ಚಾಟಿ ಬೀಸಿದ ಉಚ್ಚ ನ್ಯಾಯಾಲಯ]

Array

ಮತ್ತೊಂದು ಹಸಿರು ತ್ತು ಶ್ವೇತ ಕ್ರಾಂತಿ

[ಗೋಹತ್ಯೆ ನಿಷೇಧಕ್ಕೆ ಕೇಂದ್ರ ಸರಕಾರ ಮಹತ್ವದ ನಿರ್ಧಾರ][ಗೋಹತ್ಯೆ ನಿಷೇಧಕ್ಕೆ ಕೇಂದ್ರ ಸರಕಾರ ಮಹತ್ವದ ನಿರ್ಧಾರ]

ಇದು ಸಕಾಲ

ಮಿಲ್ಕ್ ಫೆಸ್ಟ್ ಆರಂಭಿಸುವುದಕ್ಕೆ ಇದು ಸಕಾಲ. ಬನ್ನಿ, ನಮ್ಮನ್ನು ಬೆಂಬಲಿಸಿ ಎಂದು ಗಿರೀಶ್ ಆಳ್ವ ಎನ್ನುವರು ಟ್ವೀಟ್ ಮಾಡಿದ್ದಾರೆ.

ದೇವರು ಕೊಟ್ಟ ಅಮೃತ

ದೇವರು ಕೊಟ್ಟ ಅಮೃತವನ್ನು ಕುಡಿಯುವವುದನ್ನು ಬಿಟ್ಟು ಮನುಷ್ಯ ಸೃಷ್ಟಿಸಿದ ವಿಷವನ್ನು ಸೇವಿಸುವುದು ಸರಿಯೇ? ಎಂದು ಅನುರಾಧಾ ಪಾರ್ವತಿ ಎನ್ನುವವರು ಟ್ವೀಟ್ ಮಾಡಿದ್ದಾರೆ.

ಕ್ರೂರತ್ವಕ್ಕೆ, ಸಾತ್ವಿಕ ಹಾದಿಯಲ್ಲಿ ಉತ್ತರ

ಬೀಫ್ ಫೆಸ್ಟ್ ಎಂಬ ಕ್ರೂರ ನಡೆಗೆ, ಮಿಲ್ಕ್ ಫೆಸ್ಟ್ ಎಂಬ ಸಾತ್ವಿಕ ಹಾದಿಯಲ್ಲಿ ಪ್ರತಿಕ್ರಿಯೆ ನೀಡಲಾಗುತ್ತಿದೆ. ಬನ್ನಿ, ಬೆಂಬಲಿಸಿ ಎಂದು ಶಿಶಿರ ಎನ್ನುವವರು ಟ್ವೀಟ್ ಮಾಡಿದ್ದಾರೆ.

English summary
Milk fest is a counter for beef fest which has intiated by Ramachandrapur math to protect desi cows. This is a peaceful revolution of the math, which will help us to understanding importance of desi cows. The Milk fest will be organised by Shri Math at Shri Bharati Vidyalaya, Vijayanagar, Bengaluru, on 11th June, Sunday, 3pm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X