ಕ್ರೂರತ್ವದ ವಿರುದ್ಧ ಸಾತ್ವಿಕ ಅಭಿಯಾನ: #BeefFest vs #MilkFest
ಬೆಂಗಳೂರು, ಜೂನ್ 6: ಕೇಂದ್ರ ಸರ್ಕಾರದ ವಿವಾದಿತ ಗೋಹತ್ಯೆ ನಿಷೇಧ ಕಾಯ್ದೆವನ್ನು ವಿರೋಧಿಸಿ ದೇಶದ ಹಲವೆಡೆ ಆರಂಭವಾಗಿದ್ದ ಬೀಫ್ ಫೆಸ್ಟ್ ಗೆ ಪ್ರತಿಯಾಗಿ ಶ್ರೀ ರಾಮಚಂದ್ರಾಪುರ ಮಠ ಮಿಲ್ಕ್ ಫೆಸ್ಟ್ ಅನ್ನು ಆರಂಭಿಸಿದೆ. ದೇಸೀ ಹಸುಗಳ ಮಹತ್ವವನ್ನು ಅರ್ಥಮಾಡಿಸುವುದಕ್ಕಾಗಿ ಆರಂಭವಾಗಿರುವ ಈ ಫೆಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿದೆ. ಜೂನ್ 11 ಭಾನುವಾರದಂದು ಬೆಂಗಳೂರಿನ ವಿಜಯನಗರದ ಶ್ರೀಭಾರತಿ ವಿದ್ಯಾಲಯದಲ್ಲಿ ಮಧ್ಯಾಹ್ನ 3 ಗಂಟೆಗೆ ಮಿಲ್ಕ್ ಫೆಸ್ಟ್ ನಡೆಯಲಿದೆ.
ಈ ಬಾರಿ ರಾಜ್ಯ ತೀವ್ರ ಬರಗಾಲ ಎದುರಿಸುತ್ತಿದ್ದ ಸಮಯದಲ್ಲೂ ಗೋವುಗಳಿಗೆ ಮೇವು ಒದಗಿಸುವ ಸಲುವಾಗಿ ರಾಮಚಂದ್ರಾಪುರ ಮಠದಿಂದ ಆರಂಭವಾಗಿದ್ದ #GiveUpAMeal ಅಭಿಯಾನ ಲಕ್ಷಾಂತರ ಜನರನ್ನು ತಲುಪಿ ಕ್ರಾಂತಿಯನ್ನೇ ಮಾಡಿತ್ತು. ಒಂದು ಹೊತ್ತಿನ ಊಟ ಬಿಟ್ಟು ಅದರಿಂದಾಗಿ ಉಳಿಸಿದ ಹಣವನ್ನು ಪುಣ್ಯಕೋಟಿಗೆ ಮೇವು ಒದಗಿಸಲಿಕ್ಕಾಗಿ ವ್ಯಯಿಸುವ ಈ ಅಭೂತಪೂರ್ವ ಕಲ್ಪನೆಗೆ ಲಕ್ಷಾಂತರ ಜನರು ಬೆಂಬಲ ಸೂಚಿಸಿದ್ದರು. ಅದರಂತೆಯೇ ಇದೀಗ #MilkFest ಅಭಿಯಾನ ಸಹ ಆರಂಭವಾಗಿದೆ. ಈ ಹೋರಾಟಕಕೆ ಟ್ವಿಟ್ಟರ್ ಮೂಲಕವೂ ಬೆಂಬಲ ಸೂಚಿಸಬಹುದು.['ಬಿಲೀಫ್ ಫೆಸ್ಟ್' ಆಚರಿಸುವಂತೆ ಯುವ ಬ್ರಿಗೇಡ್ ಕರೆ, ಏನಿದು ಬಿಲೀಫ್ ಫೆಸ್ಟ್!]
ಗೋಹತ್ಯೆಯಂಥ ಮಹಾಪಾಪ ಮಾಡುವವರಿಗೆ ಗೋವಿನ ಮಹತ್ವವನ್ನು ಅರ್ಥಮಾಡಿಸುವ ಸಾತ್ವಿಕ ಹೋರಾಟ ಇದು.
* ಗೋವಿಗೆ ಭಾರತೀಯರ ಹೃದಯದಲ್ಲಿ ಮಹೋನ್ನತ ಸ್ಥಾನ ಏಕಿದೆ?
* ದೇಶಿ ಹಸುವಿನ ಉತ್ಪನ್ನಗಳ ಉಪಯೋಗವೇನು?
* ಗೋಮಾಂಸ ಭಕ್ಷಣೆ ಸಮಾಜದ ಮೇಲೆ ಬೀರುವ ವ್ಯತಿರಿಕ್ತ ಪರಿಣಾಮವೇನು?
ಎಂಬಿತ್ಯಾದಿ ವಿಷಯಗಳ ಕುರಿತು ಚರ್ಚಿಸಿ, ಗೋವಿನ ಬಗೆಗೆ ಪ್ರೀತಿ, ಗೌರವ ಬೆಳಸಿಕೊಳ್ಳುವುದಕ್ಕಾಗಿ ಈ ಮಿಲ್ಕ್ ಫೆಸ್ಟ್. ಇಂದು ಬೆಳಗ್ಗೆ 6.00 ಗಂಟೆಯಿಂದಲೇ ಟ್ವೀಟ್ಟರ್ ನಲ್ಲಿ ಅಭಿಯಾನ ಆರಂಭವಾಗಿದ್ದು, ಇದಕ್ಕೆ ಬೆಂಬಲ ನೀಡುವವರು #MilkFest ಹ್ಯಾಶ್ ಟ್ಯಾಗ್ ಮೂಲಕ ತಮ್ಮ ಬೆಂಬಲವನ್ನು ಸೂಚಿಸಬಹುದು.[ಗೋವಿನ ಬಗ್ಗೆ ನಿಮಗೆ ತಿಳಿಯದ ರೋಚಕ ಸಂಗತಿಗಳು]
ಈಗಾಗಲೇ ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗಿರುವ #MilkFest ಗೆ ಬೆಂಬಲ ಸೂಚಿಸಿದ ಕೆಲವರ ಟ್ವಿಟ್ಟರ್ ಹೇಳಿಕೆಗಳು ಇಲ್ಲಿವೆ.
|
ಕೆಂಪು ಹಿಂಸೆ ಮತ್ತು ಶ್ವೇತ ಶಾಂತಿ!
| Array |
ಮತ್ತೊಂದು ಹಸಿರು ತ್ತು ಶ್ವೇತ ಕ್ರಾಂತಿ
|
ಇದು ಸಕಾಲ
ಮಿಲ್ಕ್ ಫೆಸ್ಟ್ ಆರಂಭಿಸುವುದಕ್ಕೆ ಇದು ಸಕಾಲ. ಬನ್ನಿ, ನಮ್ಮನ್ನು ಬೆಂಬಲಿಸಿ ಎಂದು ಗಿರೀಶ್ ಆಳ್ವ ಎನ್ನುವರು ಟ್ವೀಟ್ ಮಾಡಿದ್ದಾರೆ.
|
ದೇವರು ಕೊಟ್ಟ ಅಮೃತ
ದೇವರು ಕೊಟ್ಟ ಅಮೃತವನ್ನು ಕುಡಿಯುವವುದನ್ನು ಬಿಟ್ಟು ಮನುಷ್ಯ ಸೃಷ್ಟಿಸಿದ ವಿಷವನ್ನು ಸೇವಿಸುವುದು ಸರಿಯೇ? ಎಂದು ಅನುರಾಧಾ ಪಾರ್ವತಿ ಎನ್ನುವವರು ಟ್ವೀಟ್ ಮಾಡಿದ್ದಾರೆ.
|
ಕ್ರೂರತ್ವಕ್ಕೆ, ಸಾತ್ವಿಕ ಹಾದಿಯಲ್ಲಿ ಉತ್ತರ
ಬೀಫ್ ಫೆಸ್ಟ್ ಎಂಬ ಕ್ರೂರ ನಡೆಗೆ, ಮಿಲ್ಕ್ ಫೆಸ್ಟ್ ಎಂಬ ಸಾತ್ವಿಕ ಹಾದಿಯಲ್ಲಿ ಪ್ರತಿಕ್ರಿಯೆ ನೀಡಲಾಗುತ್ತಿದೆ. ಬನ್ನಿ, ಬೆಂಬಲಿಸಿ ಎಂದು ಶಿಶಿರ ಎನ್ನುವವರು ಟ್ವೀಟ್ ಮಾಡಿದ್ದಾರೆ.
-
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ












Click it and Unblock the Notifications