Get Updates
Get notified of breaking news, exclusive insights, and must-see stories!

ಸರ್ಕಾರಕ್ಕೆ ಹಲವು ಬೇಡಿಕೆಗಳನ್ನಿಟ್ಟ ಕೆಪಿಟಿಸಿಎಲ್ ಹಾಗೂ ಎಸ್ಕಾಂ ಹೊರಗುತ್ತಿಗೆ ನೌಕರರು

ಬೆಂಗಳೂರು, ಆಗಸ್ಟ್‌, 10: ವಿವಿಧ ಬೇಡಿಕೆಗೆ ಆಗ್ರಹಿಸಿ ಫ್ರೀಡಂ ಪಾರ್ಕ್‌ನಲ್ಲಿ ಇಂದು (ಆಗಸ್ಟ್‌ 10) ಸರ್ಕಾರದ ವಿರುದ್ಧ ಕೆಪಿಟಿಸಿಎಲ್ ಮತ್ತು ಎಸ್ಕಾಂ‌ ಹೊರಗುತ್ತಿಗೆ ನೌಕರರು ನೌಕರರು ಧರಣಿ ನಡೆಸಿದ್ದಾರೆ.

ಕೆಲಸ ಸ್ಥಗಿತ ಮಾಡಿ ರಾಜ್ಯದ ಸಾವಿರಾರು ಹೊರಗುತ್ತಿಗೆ ನೌಕಕರು ಹೋರಾಟಕ್ಕೆ ಬಂದಿದ್ದು, ಸಚಿವರು ಸ್ಥಳಕ್ಕೆ ಬರುವವರೆಗೆ ನಮ್ಮ ಹೋರಾಟ ನಿಲ್ಲಲ್ಲ. ಇಲ್ಲಿಂದ ನಾವು ಕದಲಲ್ಲ, ಕೆಲಸ ಮಾಡಲ್ಲ ಅಂತಾ ಪಟ್ಟುಹಿಡಿದಿದ್ದಾರೆ.

Many demands to government by KPTCL and escom outsourcing employees in bengaluru

ಕರ್ನಾಟಕ ಕೆಪಿಟಿಸಿಎಲ್ ಹಾಗೂ ಎಸ್ಕಾಂ ಹೊರಗುತ್ತಿಗೆ ನೌಕರರ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಅನಿರ್ಧಿಷ್ಟಾವಧಿ ಹೋರಾಟಕ್ಕೆ ಗುತ್ತಿಗೆ ನೌಕರರು ನಿರ್ಧಾರ ಮಾಡಿದ್ದಾರೆ. ನಮ್ಮ ಮನವಿಗೆ ಸ್ಪಂದಿಸದೆ ಇದ್ದಲ್ಲಿ ಕೆಪಿಟಿಸಿಎಲ್ ಕಚೇರಿ ಕಾವೇರಿ ಭವನಕ್ಕೆ ಮುತ್ತಿಗೆ ಹಾಕುವ ಎಚ್ಚರಿಕೆಯನ್ನಯ ಕೂಡ ನೀಡಿದ್ದಾರೆ.

ಹೊರಗುತ್ತಿಗೆ ನೌಕರರು ಸಾಕಷ್ಟು ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟಿದ್ದು, ಗೃಹ ಸಚಿವರು ತಮ್ಮ ಬೇಡಿಕೆ ಈಡೇರಿಕೆ ಮಾಡಬೇಕು ಅಂತಾ ಪಟ್ಟುಹಿಡಿದಿದ್ದಾರೆ. ಹಾಗಾದರೆ ಪ್ರಮುಖ ಬೇಡಿಕೆಗಳು ಯಾವುದು ಅಂತ ನೋಡುವುದಾದರೆ, ಎಲ್ಲಾ‌ ಹೊರಗುತ್ತಿಗೆ ನೌಕರರ ಸೇವೆ ಕಾಯಂ ಮಾಡಬೇಕು, ಕಾಯಂ ಆಗುವವರೆಗೂ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಜೊತೆಗೆ ನೌಕರರು ವಿದ್ಯುತ್ ಅವಘಡದಲ್ಲಿ ಮೃತಪಟ್ಟವರ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಗುತ್ತಿಗೆ ಪದ್ಧತಿ ಎಂಬ ಜೀತ ಪದ್ಧತಿಯಿಂದ ನೌಕರರನ್ನು ಮುಕ್ತಗೊಳಿಸಬೇಕು. ಹಾಗೆಯೇ ಇಂಧನ ಇಲಾಖೆಯಿಂದಲೇ ನೌಕರರಿಗೆ ನೇರ ಪಾವತಿ ಮಾಡಬೇಕು. ಅದರ ಜೊತೆಗೆ ಈಗಾಗಲೇ ವಿವಿಧ ಕಾರಣದಿಂದ ವಜಾಗೊಂಡವರನ್ನು ತಕ್ಷಣ ನೇಮಕ‌ ಮಾಡಬೇಕು ಎಂದು ಸಚಿವರ ಬಳಿ ಬೇಡಿಕೆ ಇಟ್ಟಿದ್ದಾರೆ.

ಒಂದು ವೇಳೆ ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ನಮ್ಮ ಮುಂದಿನ ಹೋರಾಟ ಇನ್ನೂ ಉಗ್ರ ರೂಪಾ ತಾಳಲಿದೆ ಅಂತಾ ಎಚ್ಚರಿಕೆ ಕೊಟ್ಟಿದ್ದಾರೆ. ಇನ್ನೂ ಹೊರಗುತ್ತಿಗೆ ನೌಕರರ ಹೋರಾಟಕ್ಕೆ ಮಣಿದು ಸ್ಥಳಕ್ಕೆ ಸಚಿವ ಕೆ.ಜೆ.ಜಾರ್ಜ್ ಬರುತ್ತಾರಾ ಅಥವಾ ಇದು ಅನಿರ್ಧಿಷ್ಟಾವಧಿ ಹೋರಾಟಕ್ಕೆ ಸಾಕ್ಷಿಯಾಗುತ್ತಾ ಕಾದುನೋಡಬೇಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+