Bengaluru Rains : ಮಾಂಡೌಸ್ ಪರಿಣಾಮ: ಬೆಂಗಳೂರು ಸೇರಿ ಹಲವೆಡೆ ಮಳೆ

ಬೆಂಗಳೂರು, ಡಿಸೆಂಬರ್‌ 13: ಮಾಂಡೌಸ್ ಚಂಡಮಾರುತದ ಪರಿಣಾಮದಿಂದ ಬೆಂಗಳೂರು ನಗರದಲ್ಲಿ ಮಂಗಳವಾರ ಬೆಳಗ್ಗೆಯೂ ಮಳೆಯಿಂದ ಸಾರ್ವಜನಿಕರು ಹೈರಾಣಾದರು. ಕೆಲಸ ಕಾರ್ಯಗಳಿಗೆ ಹೋಗುವ ಜನರು ಜಿಟಿಜಿಟಿ ಮಳೆಯಿಂದ ತೊಂದರೆ ಅನುಭವಿಸಿದರು.

ಮಂಗಳವಾರ ರಾತ್ರಿ 11.30 ರ ಹೊತ್ತಿಗೆ ಬೆಂಗಳೂರು ನಗರದಲ್ಲಿ 9 ಮಿಮೀ ಮಳೆ ಸುರಿದಿದೆ. ಸೋಮವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ 20.7 ಮಿಮೀ ಮಳೆ ದಾಖಲಾಗಿದೆ. ನಗರದ ಪೂರ್ವ ಮತ್ತು ಆಗ್ನೇಯ ಪ್ರದೇಶಗಳನ್ನು ಪ್ರತಿನಿಧಿಸುವ ಭಾರತೀಯ ಹವಾಮಾನ ಇಲಾಖೆ ಎಚ್‌ಎಎಲ್‌ ವಿಮಾನ ನಿಲ್ದಾಣ ವೀಕ್ಷಣಾಲಯವು ಸೋಮವಾರ ರಾತ್ರಿ 11.30 ರವರೆಗೆ 4 ಮಿಮೀ ಮಳೆ ದಾಖಲಾಗಿದೆ. ಇದು ಬೆಳಿಗ್ಗೆ 8.30ಕ್ಕೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ 11.4 ಮಿಮೀ ಮಳೆ ದಾಖಲಾಗಿದೆ.

ಒಟ್ಟಾರೆಯಾಗಿ ನಗರ ವೀಕ್ಷಣಾಲಯವು ಈ ಡಿಸೆಂಬರ್‌ನಲ್ಲಿ ಸೋಮವಾರ ರಾತ್ರಿ 11.30 ರವರೆಗೆ 75 ಮಿಮೀ ಮಳೆಯನ್ನು ದಾಖಲಿಸಿದೆ. ಎಚ್ ಎಎಲ್ ವಿಮಾನ ನಿಲ್ದಾಣಕ್ಕೆ 53.4 ಮಿ.ಮೀ ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 67.2 ಮಿ.ಮೀ ಮಳೆ ದಾಖಲಿಸಿದೆ. ದುರ್ಬಲಗೊಳ್ಳುತ್ತಿರುವ ಸೈಕ್ಲೋನಿಕ್ ವ್ಯವಸ್ಥೆಯು ಗರಿಷ್ಠ ತಾಪಮಾನವನ್ನು ಹೆಚ್ಚಿಸಿತು. ಇದು ವಾರಾಂತ್ಯದಲ್ಲಿ ತೀವ್ರವಾಗಿ ಕುಸಿದಿದೆ. ಸೋಮವಾರ ಸಂಜೆ 5.30 ಕ್ಕೆ ನಗರದಲ್ಲಿ ಗರಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಇತ್ತು. ಭಾನುವಾರ 21.9 ಡಿಗ್ರಿ ಸೆಲ್ಸಿಯಸ್ ಮತ್ತು ಶನಿವಾರ 19.6 ಡಿಗ್ರಿ ಸೆಲ್ಸಿಯಸ್ ಇತ್ತು. ಈ ಮಧ್ಯೆ ಕನಿಷ್ಠ ತಾಪಮಾನವು ವಾಡಿಕೆಗಿಂತ ಒಂದು ಅಥವಾ ಎರಡು ಡಿಗ್ರಿಗಳಷ್ಟು ಮುಂದುವರಿದಿದೆ.

ಡಿಸೆಂಬರ್ 17ರ ವೇಳೆಗೆ ಪ್ರಭಾವ ಕಡಿಮೆ

ಡಿಸೆಂಬರ್ 17ರ ವೇಳೆಗೆ ಪ್ರಭಾವ ಕಡಿಮೆ

ಮುಂದಿನ ಎರಡು ದಿನಗಳಲ್ಲಿ ಗರಿಷ್ಠ ತಾಪಮಾನವು 28 ಡಿಗ್ರಿ ಸೆಲ್ಸಿಯಸ್ ತಲುಪಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ. ಡಿಸೆಂಬರ್ 17ರ ವೇಳೆಗೆ ಹಗಲಿನಲ್ಲಿ ಆಕಾಶವು ಸ್ಪಷ್ಟವಾಗುತ್ತದೆ ಮತ್ತು ಚಳಿಗಾಲದ ಪರಿಸ್ಥಿತಿಗಳು ಪ್ರಾರಂಭವಾಗುವುದನ್ನು ನಿರೀಕ್ಷಿಸುತ್ತದೆ. ಅದು ಸಂಭವಿಸಿದಾಗ, ಕನಿಷ್ಠ ತಾಪಮಾನವು ಇಳಿಯಲು ಪ್ರಾರಂಭಿಸುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ನಾಯಂಡಹಳ್ಳಿ ವಲಯದಲ್ಲಿ 23 ಮಿಮೀ ಮಳೆ

ನಾಯಂಡಹಳ್ಳಿ ವಲಯದಲ್ಲಿ 23 ಮಿಮೀ ಮಳೆ

ಮಂಗಳವಾರ ಕೆಲವು ಭಾಗಗಳಲ್ಲಿ ಮುಂಜಾನೆಯಿಂದಲೆ ಮಳೆಯಾಗಿದೆ. ಚೌಡೇಶ್ವರಿ (17.5 ಮಿಮೀ), ಯಲಹಂಕ (28 ಮಿಮೀ), ಜಕ್ಕೂರು (33.5 ಮಿಮೀ), ಬಸವನಪುರ (18 ಮಿಮೀ), ಹಗದೂರು (38.5 ಮಿಮೀ), ದೊಡ್ಡಬಿದರಕಲ್ಲು (18.5 ಮಿಮೀ), ಪೀಣ್ಯ (16 ಮಿಮೀ), ಕೆಆರ್ ಪುರಂ (16.5 ಮಿಮೀ), ಹಂಪಿನಗರ (22 ಮಿಮೀ), ಗಾಳಿಯಾಂಜನೇಯ ದೇವಸ್ಥಾನ (19.5 ಮಿಮೀ), ವಿದ್ಯಾಪೀಠ (17.5 ಮಿಮೀ), ನಾಯಂಡಹಳ್ಳಿ (23 ಮಿಮೀ) ಮತ್ತು ಜ್ಞಾನಭಾರತಿ (25.5 ಮಿಮೀ) ಸಾಧಾರಣ ಮಳೆಯಾಗಿದೆ. ಇನ್ನುಳಿದ ಪ್ರದೇಶಗಳಲ್ಲಿ ಅಲ್ಪ ಪ್ರಮಾಣದ ಮಳೆಯಾಗಿದೆ.

24 ಗಂಟೆಗಳ ಕಾಲ ಭಾರೀ ಮಳೆ

24 ಗಂಟೆಗಳ ಕಾಲ ಭಾರೀ ಮಳೆ

ಮಳೆಯಿಂದಾಗಿ ಹಲವೆಡೆ ರಸ್ತೆಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಸಿಲ್ಕ್ ಬೋರ್ಡ್ ಜಂಕ್ಷನ್, ಬಸವನಗುಡಿ, ಕ್ವೀನ್ಸ್ ಸರ್ಕಲ್, ಸುಲ್ತಾನಪೇಟೆ ಮುಖ್ಯರಸ್ತೆ, ಮುಂತಾದವು ನಗರದ ಕಳಪೆ ಒಳಚರಂಡಿಗೆ ಜ್ವಲಂತ ಉದಾಹರಣೆಗಳಾಗಿವೆ. ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳ ಕಾಲ ಭಾರೀ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಸೋಮವಾರ ಬುಲೆಟಿನ್‌ನಲ್ಲಿ ಪ್ರಕಟಿಸಿದೆ. ದಕ್ಷಿಣ ರಾಜ್ಯದ ಕೆಲವು ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಸಹಿತ ಎಚ್ಚರಿಕೆಯನ್ನೂ ಐಎಂಡಿ ನೀಡಿದೆ.

 ಒಳನಾಡಿನ ಪ್ರದೇಶಗಳಲ್ಲಿ ಸಾಧಾರಣ ಮಳೆ

ಒಳನಾಡಿನ ಪ್ರದೇಶಗಳಲ್ಲಿ ಸಾಧಾರಣ ಮಳೆ

ಹವಾಮಾನ ಇಲಾಖೆಯ ಪ್ರಕಾರ ಚಾಮರಾಜನಗರ, ಚಿಕ್ಕಮಗಳೂರು, ಕೊಡಗು, ಮೈಸೂರು, ಶಿವಮೊಗ್ಗ ಜಿಲ್ಲೆಗಳ ಜೊತೆಗೆ ಕರಾವಳಿ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಮುಂದಿನ 24 ಗಂಟೆಗಳಲ್ಲಿ ಕರ್ನಾಟಕದ ಉತ್ತರ ಒಳಭಾಗ ಮತ್ತು ದಕ್ಷಿಣ ಒಳನಾಡಿನ ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಐಎಂಡಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+