Ellu Bella Recipe : ಕರ್ನಾಟಕ ಖ್ಯಾತಿಯ ಎಳ್ಳು ಬೆಲ್ಲ ಮಾಡುವ ಸುಲಭ ವಿಧಾನ ಇಲ್ಲಿದೆ
ಬೆಂಗಳೂರು, ಜ. 01: ಮಕರ ಸಂಕ್ರಾಂತಿ ಹಬ್ಬವೆಂದರೆ ಹೆಂಗೆಳೆಯರಲ್ಲಿ ಹೊಸ ಸಂಭ್ರಮ ಮನೆ ಮಾಡುತ್ತದೆ. ಹೊಸ ಬಟ್ಟೆ ತೊಟ್ಟು ಕೈಯಲ್ಲಿ ಬುಟ್ಟಿ ಹಿಡಿದು ಮನೆ ಮನೆಗೆ ಹೋಗಿ 'ಎಳ್ಳು ಬೀರುವುದು' ಒಂದು ಖುಷಿಯ ಸಂಗತಿ. ಎಳ್ಳು ಬೀರುವ ಮೂಲಕ ಶುಭಾಶಯ ಕೂರುವುದು ಸಂಕ್ರಾಂತಿಯ ವಾಡಿಕೆ.
ರಾಜ್ಯದ ವಿವಿಧ ಭಾಗಗಳಲ್ಲಿ, ಹುರಿದ ಎಳ್ಳು, ಕತ್ತರಿಸಿದ ಒಣ ತೆಂಗಿನಕಾಯಿ, ಹುರಿದ ಕಡಲೆಕಾಯಿ, ಹುರಿದ ಕಡಲೆ ಬೇಳೆ ಮತ್ತು ಬೆಲ್ಲ, ಜೊತೆಗೆ ಸಕ್ಕರೆ ಅಚ್ಚು ಅಥವಾ ಸಕ್ಕರೆ ಪ್ರತಿಮೆಗಳನ್ನು ಹಾಕಿ ಮಾಡುವ ಎಳ್ಳು ಬೆಲ್ಲ ಎಲ್ಲರ ಅಚ್ಚುಮೆಚ್ಚು. ಬಾಲ್ಯದಲ್ಲಿ ಎಳ್ಳು ಬೆಲ್ಲ ಪ್ರತಿಯೊಬ್ಬರ ನೆಚ್ಚಿನ ತಿಂಡಿ ಕೂಡ.
ಹಾಗಾದರೆ ಈ ಎಳ್ಳು ಬೆಲ್ಲಕ್ಕೆ ಬಹಳ ಮಹತ್ವವಿದೆ ಎಂದು ಅರ್ಥವಲ್ಲವೆ. ಕನ್ನಡಿಗರ ನೆಚ್ಚಿನ ಈ ಎಳ್ಳು ಬೆಲ್ಲ ತಯಾರಿಸಿದ ತಿಂಗಳುಗಟ್ಟಲೆ ಮನೆಯಲ್ಲಿಟ್ಟುಕೊಂಡು ತಿನ್ನಬಹುದು. ನಿಮಗೆ ಎಳ್ಳು ಬೆಲ್ಲ ಸುಲಭವಾಗಿ ಮಾಡುವುದು ಹೇಗೆ ಎಂಬುದು ತಿಳಿದಿದೆಯೇ..? ಇಲ್ಲವೇ...? ಚಿಂತೆ ಬಿಡಿ ಸುಲಭವಾಗಿ ಎಳ್ಳು ಬೆಲ್ಲ ಹೆಗೆ ಮಾಡುವುದು ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.

"ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ" ಎಂದರೆ "ಎಳ್ಳು ಬೆಲ್ಲದ ಮಿಶ್ರಣವನ್ನು ತಿಂದು ಒಳ್ಳೆಯದನ್ನು ಮಾತ್ರ ಮಾತನಾಡು" ಎಂದು. ಇದು ಕನ್ನಡ ಭಾಷೆಯಲ್ಲಿ ಒಂದು ಗಾದೆಯಾಗಿದೆ.
*ಎಳ್ಳು ಬೆಲ್ಲ ತಯಾರಿಸಲು ಬೇಕಾಗುವ ಪದಾರ್ಥಗಳು*
* 1/4 ಕಪ್ - ಬಿಳಿ ಅಥವಾ ಕಪ್ಪು ಎಳ್ಳು
* 1/4 ಕಪ್ - ಕಡಲೆಕಾಯಿ (ಶೇಂಗಾ)
* 1/4 ಕಪ್ - ಬೆಲ್ಲ
* 1/4 ಕಪ್ - ಒಣ ತೆಂಗಿನಕಾಯಿ
* 1/4 ಕಪ್ - ಹುರಿಗಡಲೆ
*ಎಳ್ಳು ಬೆಲ್ಲ ತಯಾರಿಸುವ ವಿಧಾನ*
* ತೆಗೆದುಕೊಂಡಿರುವ ಎಳ್ಳನ್ನು ಬಾಣಲೆಗೆ ವರ್ಗಾಯಿಸಿ ಮತ್ತು ಮಧ್ಯಮ ಉರಿಯಲ್ಲಿ ಕೆಲಸ ನಿಮಿಷ ಹುರಿಯಿರಿ.
*ಈ ಎಳ್ಳು ಬೀಜಗಳು ಕೆಲವು ನಿಮಿಷಗಳ ಕಾಲ ಹುರಿದ ಬಳಿಕ ತಮ್ಮ ಬಣ್ಣವನ್ನು ಸ್ವಲ್ಪಮಟ್ಟಿಗೆ ಬದಲಾಯಿಸಲು ಪ್ರಾರಂಭಿಸುತ್ತವೆ.
* ಉರಿಯನ್ನು ಆಫ್ ಮಾಡಿ ಮತ್ತು ಬಟ್ಟಲಿಗೆ ವರ್ಗಾಯಿಸಿ.
* ಈಗ ಕಡಲೆಕಾಯಿ ಬೀಜಗಳನ್ನು ಬಾಣಲೆಗೆ ಹಾಕಿ, ಮಧ್ಯಮ ಉರಿಯಲ್ಲಿ ಕೆಲವು ನಿಮಿಷಗಳ ಕಾಲ ಹುರಿಯಿರಿ.
* ಕಡಲೆಕಾಯಿ ಬೀಜದಲ್ಲಿ ಕಪ್ಪು ಚುಕ್ಕೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿದಾಗ, ಗ್ಯಾಸ್ ಆಫ್ ಮಾಡಿ, ಪ್ಲೇಟ್ಗೆ ವರ್ಗಾಯಿಸಿ.
* ಈಗ ಕಡಲೆಕಾಯಿ ಬೀಜವನ್ನು ಕೆಲವು ನಿಮಿಷಗಳ ಕಾಲ ತಣ್ಣಗಾಗಲು ಬಿಟ್ಟು, ಬಳಿಕ ಅದರ ಮೇಲೆ ಕೈಯಿಂದ ಉಜ್ಜಿ ಸಿಪ್ಪೆ ತೆಗೆಯಿರಿ.

* ಬೆಲ್ಲವನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಇಟ್ಟುಕೊಳ್ಳಿ
* ಒಣ ತೆಂಗಿನಕಾಯಿಯನ್ನು ತೆಗೆದುಕೊಂಡು ಕೊಬ್ಬರಿ ತೆಗೆದುಕೊಳ್ಳಿ. ಅದನ್ನು ಚಿಕ್ಕ ತುಂಡುಗಳಾಗಿ ಕತ್ತರಿಸಿಕೊಳ್ಳಿ.
*ಹುರಿಗಡಲೆಯನ್ನು ಬೇಕಿದ್ದರೆ ಒಂದೆರಡು ನಿಮಿಷ ಉರಿದುಕೊಳ್ಳಿ.
* ಎಲ್ಲಾ ಪದಾರ್ಥಗಳನ್ನು ಒಂದು ಬಟ್ಟಲಿಗೆ ವರ್ಗಾಯಿಸಿ ಮತ್ತು ಚಮಚದ ಸಹಾಯದಿಂದ ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ಬೇಕಿದ್ದರೆ ಅಚ್ಚು ಬೆಲ್ಲ, ಅಥವಾ ಸಕ್ಕರೆ ಅಚ್ಚುಗಳನ್ನು ಸೇರಿಸಿಕೊಳ್ಳಬಹುದ. ಈಗ ಎಳ್ಳು ಬೆಲ್ಲ ಹಂಚಲು ತಯಾರು.
-
Bengaluru: ಬಿಡಿಎಗೆ 50ರ ಸಂಭ್ರಮ; ಹೊಸ ಲೋಗೋ, ಟ್ಯಾಗ್ಲೈನ್ ವಿನ್ಯಾಸ ಮಾಡಿ 1 ಲಕ್ಷ ರೂ. ಬಹುಮಾನ ಗೆಲ್ಲಿ -
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ












Click it and Unblock the Notifications