ಇಂದು ಮತ ಹಾಕಿದವರಿಗೆ ಉಚಿತ ಹೇರ್ ಕಟ್, ಶೇವಿಂಗ್!
ಬೆಂಗಳೂರು, ಏಪ್ರಿಲ್ 18 : ತಮಗೇ, ತಮ್ಮ ಪಕ್ಷಕ್ಕೇ ಮತ ಹಾಕಲೆಂದು 'ನಾಚಿಗ್ಗೇಡಿ' ರಾಜಕಾರಣಿಗಳು, ಅವರ ಕೆಲಸಕ್ಕೆ ಬಾರದ ಚೇಲಾಗಳು ವಿವಿಧ ರೀತಿಯಲ್ಲಿ ಆಮಿಷ ಒಡ್ಡುವುದು ನಮ್ಮ ಭಾರತೀಯ ಪ್ರಜಾತಂತ್ರದಲ್ಲಿ ಸಹಜ. ಲಜ್ಜೆಗೇಡಿಯಾಗಿ ಇಸಿದುಕೊಳ್ಳುವವರು ಇರುವವರೆಗೆ ಕೊಡುವವರು ಇದ್ದೇ ಇರುತ್ತಾರೆ.
ಲೋಕಸಭೆ ಚುನಾವಣೆ ಕೂಡ ಇಂತಹ ಹಲವಾರು ಅಕ್ರಮಗಳನ್ನು ನೋಡಿದೆ. ಯಾವುದೋ ಒಂದು ಕ್ಷೇತ್ರದಲ್ಲಿ, ಅಭ್ಯರ್ಥಿಯೊಬ್ಬ ಗೆಲ್ಲಲೆಂದು 150 ಕೋಟಿ ರುಪಾಯಿ ವ್ಯಯಿಸಲಾಗಿದೆ ಎಂಬುದನ್ನು ಗಮನಿಸಿದರೆ, ಭ್ರಷ್ಟಾಚಾರ ಯಾವ ಮಟ್ಟಕ್ಕೆ ಹೋಗಿದೆ ಎಂಬುದನ್ನು ಪ್ರಜ್ಞಾವಂತ ಮತದಾರರು ಊಹಿಸಬಹುದು.
ರಾತ್ರಿಯಾದರೆ ಕುಡಿಯಲು ಹೆಂಡ, ಸೂರ್ಯ ನೆತ್ತಿಯ ಮೇಲಿರುವಾಗಲೇ ಹಂಚಲಾಗುವ ಗರಿಗರಿ ನೋಟುಗಳು, ಜೊತೆಗೆ ದೇವರ ಫೋಟೋ ಬೇರೆ ಆಣೆ ಮಾಡಲು. ಇನ್ನು ಸೀರೆ, ಮಿಕ್ಸಿ, ಮೊಬೈಲು, ಚಿನ್ನ-ಬೆಳ್ಳಿ ಮತ್ತಿತರ ಭೌತಿಕ ವಸ್ತುಗಳಿಗಂತೂ ಲೆಕ್ಕವೇ ಇಲ್ಲ. ನಮ್ಮ ನಾಡು ಯಾವಾಗ ಉದ್ಧಾರವಾಗುತ್ತದೋ ಆ ಮಂಜುನಾಥನೇ ಬಲ್ಲ.

ಆದರೆ, ಬೆಂಗಳೂರಿನಲ್ಲೊಬ್ಬ ವ್ಯಕ್ತಿ ಮತಹಾಕುವುದು ಎಷ್ಟು ಪವಿತ್ರವಾದದ್ದು ಎಂಬುದನ್ನು ಬಲ್ಲರು. ಇದರಲ್ಲಿ ಯಾವುದೇ ವಿಶೇಷತೆಯಿಲ್ಲ. ಮತದಾನ ಮಾಡುವುದು ಕರ್ತವ್ಯ ಮಾತ್ರವಲ್ಲ, ಅದು ಪವಿತ್ರ ಎಂದು ನಂಬಿದವರು ಬೇಕಾದಷ್ಟಿದ್ದಾರೆ. ಆದರೆ, ಏಪ್ರಿಲ್ 18ರಂದು ಮತದಾನ ಮಾಡಿದವರಿಗೆ ಅವರೇ ಒಂದು ವಿಶೇಷ ಕೊಡುಗೆಯನ್ನು ನೀಡುತ್ತಿದ್ದಾರೆ. ಅದೂ ಉಚಿತವಾಗಿ.
ಅದೇನೆಂದರೆ, ಮತದಾನ ಮಾಡಿ, ತಮ್ಮ ಬಳಿ ಬಂದವರಿಗೆ ಉಚಿತವಾಗಿ ಹೇರ್ ಕಟ್ ಮತ್ತು ಶೇವಿಂಗ್ ಮಾಡುವುದಾಗಿ ಮಾತು ಕೊಟ್ಟಿದ್ದರು, ಬೆಂಗಳೂರಿನ ಕೋಡಿಚಿಕ್ಕನಹಳ್ಳಿಯಲ್ಲಿ ಗುಡ್ ಲೈನ್ಸ್ ಪಾರ್ಲರ್ ನಡೆಸುತ್ತಿರುವ ಶ್ರೀನಿವಾಸ್ ಮತ್ತು ಅವರ ಮಕ್ಕಳು.

ಸುಮಾರು 40 ವರ್ಷಗಳಿಂದ ಕ್ಷೌರಿಕ ವೃತ್ತಿಯಲ್ಲಿ ಇರುವ ಶ್ರೀನಿವಾಸ್ ಮತ್ತು ಇದೀಗ ಅವರ ಜೊತೆಯಾಗಿರುವ ಅವರಿಬ್ಬರು ಮಕ್ಕಳ ವಾಗ್ದಾನ, ಯಾವುದೇ ಪಕ್ಷದ ಪ್ರಣಾಳಿಕೆಯಲ್ಲಿನ ಹುಸಿ ಭರವಸೆಯಂತಲ್ಲ. ಮಾತುಕೊಟ್ಟಂತೆ, ಇಂದು ಬೆಳಗ್ಗಿನಿಂದಲೇ ಮತದಾನ ಮಾಡಿದವರಿಗೆ ಉಚಿತವಾಗಿ ಕ್ಷೌರ ಮಾಡುತ್ತಿದ್ದಾರೆ.
ಇದು ಇವರು ಪ್ರಥಮ ಬಾರಿಯೇನು ಮಾಡುತ್ತಿಲ್ಲ. ಕಳೆದ ಚುನಾವಣೆಯಲ್ಲಿಯೂ ಶ್ರೀನಿವಾಸ್ ಅವರು ಇದೇ ರೀತಿ, ಮತದಾನ ಮಾಡಿದವರಿಗೆ ಉಚಿತವಾಗಿ ಹೇರ್ ಕಟ್ ಮತ್ತು ಶೇವಿಂಗ್ ಮಾಡಿದ್ದರು. ಬೆಳಿಗ್ಗೆಯಿಂದಲೇ ಅವರ ಕ್ಷೌರದಂಗಡಿ ಮತದಾನ ಮಾಡಿ ಬಂದವರಿಂದ ತುಂಬಿ ತುಳುಕುತ್ತಿದೆ. ಎಷ್ಟೇ ಜನ ಬಂದರೂ ಯಾರನ್ನೂ ವಾಪಸ್ ಕಳಿಸುವುದಿಲ್ಲ ಎಂದು ಅವರು ಒನ್ಇಂಡಿಯಾ ಕನ್ನಡಕ್ಕೆ ಹೆಮ್ಮೆಯಿಂದ ಹೇಳಿದರು.

"ಇಂದಿನ ಕಾಲದಲ್ಲಿ ವೋಟು ಹಾಕುವವರೇ ಕಮ್ಮಿಯಾಗಿದ್ದಾರೆ. ಕಳೆದ ಚುನಾವಣೆಯಲ್ಲೂ ಮತದಾನ ತುಂಬಾ ಕಡಿಮೆಯಾಗಿತ್ತು. ಈ ಉಚಿತ ಸೇವೆಯ ಕಾರಣದಿಂದಲಾದರೂ ಈ ಬಾರಿ ಮತದಾನ ಜಾಸ್ತಿಯಾದರೆ ಸಾಕು ಎಂಬ ಕಾರಣದಿಂದ ಉಚಿತವಾಗಿ ಕ್ಷೌರ ಮಾಡುತ್ತಿದ್ದೇವೆ. ನಮಗೆ ಇದಕ್ಕಿಂತ ಖುಷಿಯ ಸಂಗತಿ ಮತ್ತೊಂದಿಲ್ಲ" ಎಂದು ಶ್ರೀನಿವಾಸ್ ತಮ್ಮ ಅನಿಸಿಕೆ ಹಂಚಿಕೊಂಡರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ತಮ್ಮ ಬಳಿಗೆ ಉಚಿತವಾಗಿ ಕ್ಷೌರ ಮಾಡಿಸಿಕೊಳ್ಳಬಯಸುವವರು ಸಂಜೆ 6 ಗಂಟೆಯೊಳಗೆ ಬರಬೇಕು. ಅವರು ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಮಾತ್ರ ಮಾಡಬೇಕೆಂದೇನಿಲ್ಲ, ಯಾವುದೇ ಕ್ಷೇತ್ರದಲ್ಲಿ ಮತದಾನ ಮಾಡಿರಬಹುದು. ಯಾವ ಪಕ್ಷಕ್ಕೆ ಮತ ಹಾಕಿದ್ದೀರಿ ಎಂದು ಕೂಡ ಕೇಳುವುದಿಲ್ಲ. ಒಟ್ಟಿನಲ್ಲಿ ಮತ ಚಲಾಯಿಸಿದ ಶಾಯಿಯಿರುವ ಬೆರಳು ತೋರಿಸಿದರೆ ಸಾಕು, ಅವರಿಗೆ ಉಚಿತ ಸೇವೆ ಗ್ಯಾರಂಟಿ ಎಂದು ಹೆಮ್ಮೆಯಿಂದ ಹೇಳುತ್ತಾರೆ ಶ್ರೀನಿವಾಸ್ ಅವರ ಮಗ ರಾಮು.

ತಮಿಳುನಾಡಿನ ಮೂಲದವರಾದ ಶ್ರೀನಿವಾಸ್ ಅವರು ಬೆಂಗಳೂರಿನಲ್ಲಿಯೇ ವೃತ್ತಿಯ ಜೊತೆಗೆ ಗೂಡು ಕಟ್ಟಿಕೊಂಡಿದ್ದಾರೆ. ದೇಶದಲ್ಲಿ ಯಾವುದೇ ಸರಕಾರ ಬರಲಿ, ಯಾವುದೇ ವ್ಯಕ್ತಿ ಪ್ರಧಾನಿಯಾಗಲಿ ಚಿಂತೆಯಿಲ್ಲ, ಆದರೆ ಸದೃಢ ಸರಕಾರ ಸ್ಥಾಪನೆಯಾಗಲಿ ಎಂದು ಆಶಯ ವ್ಯಕ್ತಪಡಿಸುತ್ತಾರೆ.
-
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು












Click it and Unblock the Notifications