ಮತ್ತೆ ನೆನಪಾಯಿತು ಮಲ್ಯರ ಕುಣಿಗಲ್ ಕುದುರೆ ಫಾರ್ಮ್, ಷೇರು ಖರೀದಿಸಿದರೆ ಜೋಕೆ
ಬೆಂಗಳೂರು, ಅಕ್ಟೋಬರ್ 25: ಉದ್ದೇಶಿತ ಸುಸ್ತಿದಾರ- ದೇಶ ಬಿಟ್ಟು ಹೋಗಿರುವ ಉದ್ಯಮಿ ವಿಜಯ್ ಮಲ್ಯಗೆ ಸೇರಿದ 41 ಲಕ್ಷಕ್ಕೂ ಹೆಚ್ಚು ಷೇರುಗಳನ್ನು ಸಾಲ ವಸೂಲಾತಿ ಟ್ರಿಬ್ಯುನಲ್ ಅಕ್ಟೋಬರ್ 30ರಂದು ಇ ಹರಾಜು ಮೂಲಕ ಮಾರಾಟಕ್ಕೆ ಇಟ್ಟಿದೆ. ಆದರೆ ಇದನ್ನು ಸಾರ್ವಜನಿಕರು ಖರೀದಿಸದಂತೆ ಆದಾಯ ತೆರಿಗೆ ಇಲಾಖೆ ಗುರುವಾರ ಎಚ್ಚರಿಕೆ ನೀಡಿದೆ.
"ಮಲ್ಯರ ಷೇರು ಹೊಂದಿರುವ ಅವರ ಸಹವರ್ತಿ ಕಂಪನಿ ಯುನೈಟೆಡ್ ರೇಸಿಂಗ್ ಅಂಡ್ ಬ್ಲಡ್ ಸ್ಟಾಕ್ ಬ್ರೀಡರ್ಸ್ ಲಿಮಿಟೆಡ್ (URBBL)ನಿಂದ ಇ ಹರಾಜಿನಲ್ಲಿ ಷೇರು ಖರೀದಿಸಿದರೆ ಅದಕ್ಕೆ ಆಯಾ ವ್ಯಕ್ತಿಗಳೇ ಜವಾಬ್ದಾರರು. ತೆರಿಗೆ ತಪ್ಪಿಸಿದ ಅಥವಾ ತೆರಿಗೆ ವಂಚನೆ ಪ್ರಕರಣದಲ್ಲಿ ಆ ಷೇರುಗಳು ನಮ್ಮ ಸುಪರ್ದಿಯಲ್ಲೇ ಇವೆ" ಎಂದು ಆದಾಯ ತೆರಿಗೆ ಅಧಿಕಾರಿ ಎನ್.ರಾಟಿ ತಿಳಿಸಿದ್ದಾರೆ.
ಇನ್ನು ಸಾಲ ವಸೂಲಾತಿ ಟ್ರಿಬ್ಯುನಲ್ ನಿಂದ ಅಕ್ಟೋಬರ್ 30ಕ್ಕೆ URBBL ಷೇರುಗಳನ್ನು ಇ ಆಕ್ಷನ್ ಮೂಲಕ ಮಾರಾಟಕ್ಕೆ ಇಡಲಾಗಿದೆ. ಹದಿನೇಳು ಬ್ಯಾಂಕ್ ಗಳ ಒಕ್ಕೂಟದಿಂದ 2008ರಿಂದ 2012ರ ಮಧ್ಯೆ, ಸದ್ಯಕ್ಕೆ ಕಾರ್ಯ ನಿರ್ವಹಿಸದ ಕಿಂಗ್ ಫಿಷರ್ ಏರ್ ಲೈನ್ಸ್ ಗಾಗಿ ಮಲ್ಯ ಸಾಲ ಪಡೆದಿದ್ದರು. ಅದನ್ನು ವಸೂಲಿ ಮಾಡುವ ಸಲುವಾಗಿ ಈ ಹರಾಜು ಆಯೋಜಿಸಲಾಗಿದೆ.

ಈ ಷೇರುಗಳ ಮಾರಾಟ ಅಥವಾ ವರ್ಗಾವಣೆ ಸೆಕ್ಷನ್ 281 ಆದಾಯ ತೆರಿಗೆ ಕಾಯ್ದೆ 1961ರ ಪ್ರಕಾರ ನ್ಯಾಯಸಮ್ಮತವಲ್ಲ. ಯಾವುದೇ ವ್ಯಕ್ತಿ ಇಂಥ ಷೇರುಗಳನ್ನು ಖರೀದಿ ಮಾಡಿದರೆ ಅದಕ್ಕೆ ಸ್ವತಃ ಜವಾಬ್ದಾರರು ಎಂದು ರಾಟಿ ಹೇಳಿದ್ದಾರೆ.
ವಿಜಯ್ ಮಲ್ಯ 1988ರಲ್ಲಿ URBBL ಹೆಸರಿನಲ್ಲಿ ಲಿಸ್ಟ್ ಆಗದ ಕಂಪನಿಯೊಂದನ್ನು ಆರಂಭಿಸಿದ್ದರು. ಕುದುರೆ ರೇಸಿನ ಬಗ್ಗೆ ಅವರಿಗಿರುವ ಆಸಕ್ತಿ ಹಾಗೂ ಕುದುರೆ ತಳಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಅವರಿಗಿರುವ ಆಸಕ್ತಿಯನ್ನು ಒಂದು ಕಡೆ ಕ್ರೋಡೀಕರಿಸಲು ಈ ಕಂಪನಿ ಮಾಡಿಕೊಂಡಿದ್ದರು.
1992ರಲ್ಲಿ ಐತಿಹಾಸಿಕವಾದ ಕುಣಿಗಲ್ ಕುದುರೆ ಫಾರ್ಮ್ ಅನ್ನು ವಿಜಯ್ ಮಲ್ಯ ಖರೀದಿಸಿದ್ದರು. ಉತ್ತಮ ದರ್ಜೆಯ ಕುದುರೆ ತಳಿಗಳನ್ನು ಬೆಳೆಸಲು ತುಮಕೂರು ಜಿಲ್ಲೆಯ ಕುಣಿಗಲ್ ನಲ್ಲಿ ಜಾಗ ಖರೀದಿಸಿದ್ದರು. ಈ ಸ್ಥಳ ಬೆಂಗಳೂರಿನಿಂದ 70 ಕಿ.ಮೀ. ದೂರದಲ್ಲಿದೆ.
-
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
IPL 2026: ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ












Click it and Unblock the Notifications