ಮತ್ತೆ ಸಿಎಂ ಆಗುವ ಹಗಲು ಕನಸು ಕಾಣುವುದನ್ನು ಬಿಡಿ ಸಿದ್ದರಾಮಯ್ಯ: ಕಾರಜೋಳ
ಬೆಂಗಳೂರು, ನವೆಂಬರ್ 4: ಮತ್ತೆ ಸಿಎಂ ಆಗುವ ಹಗಲು ಕನಸು ಕಾಣುವುದನ್ನು ಬಿಡಿ ಎಂದು ಸಿದ್ದರಾಮಯ್ಯ ವಿರುದ್ಧ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಕಿಡಿ ಕಾರಿದ್ದಾರೆ.
ಬಿಜೆಪಿ ಮೇಲೆ, ಅಮಿತ್ ಶಾ ಹಾಗೂ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುತ್ತಿರುವುದರಿಂದ ಮತ್ತೆ ಸಿಎಂ ಆಗುವ ಹಗಲು ಕನಸು ಕಾಣುತ್ತಿದ್ದಾರೆ.
ನಳಿನ್ ಕುಮಾರ್ ಮಾಡಿದ ಜೋಕ್ ಹೇಳಿದ ಸಿದ್ದರಾಮಯ್ಯ!
ಇದನ್ನು ಮೊದಲು ಸಿದ್ದರಾಮಯ್ಯ ಬಿಡಬೇಕು ಎಂದು ಹೇಳಿದ್ದಾರೆ.ಆಡಿಯೋ ಮೂಲಕ ಬಿಜೆಪಿ ಮೇಲೆ ಆರೋಪ ಮಾಡಿರುವ ಕುರಿತು ಮಾತನಾಡಿರುವ ಅವರು, ವಸ್ತು ಸ್ಥಿತಿಯನ್ನು ಅರಿತು ಸಿದ್ದರಾಮಯ್ಯ ಮಾತಣಾಡಬೇಕು, ಪ್ರವಾಹ ಸಂತ್ರಸ್ತರಿಗೆ ನೆರವಿಗೆ ಬರಬೇಕು. ಸುಳ್ಳು ಆರೋಪಗಳನ್ನು ಮಾಡಿ , ಜನರ ಭಾವನೆಯನ್ನು ಕೆರಳಿಸಬಾರದು ಎಂದರು.
ಅನರ್ಹರ ಕುರಿತು ಸುಪ್ರೀಂಕೋರ್ಟ್ನಿಂದ ತೀರ್ಪು ಹಿನ್ನೆಲೆ , ಕೋರ್ಟ್ ತೀರ್ಪನ್ನು ನಾವು ಗೌರವಿಸಬೇಕಾಗುತ್ತದೆ. ಕೋರ್ಟ್ ಯಾವಾಗಲೂ ಸತ್ಯ, ವಸ್ತು ಸ್ಥಿತಿ ಆಧಾರದ ಮೇಲೆ ತೀರ್ಪು ನೀಡುತ್ತದೆ. ಪಾಪ ಅನರ್ಹರಿಗೆ ಅನ್ಯಾಯ ಆಗಿದ್ದಕ್ಕೆ ಅವರು ಕೋರ್ಟ್ ಮೊರೆ ಹೋಗಿದ್ದಾರೆ.
ಹೀಗಾಗಿ ಅವರಿಗೆ ಕೋರ್ಟ್ ನ್ಯಾಯ ಒದಗಿಸಿಕೊಡುವ ಭರವಸೆ ನಮಗಿದೆ ಎಂದು ಹೇಳಿದರು. ನಿನ್ನೆಯಷ್ಟೇ ಮುಖ್ಯಮಂತ್ರಿ ಬಿ.ಎಸ್, ಯಡಿಯೂರಪ್ಪ ಮಾತನಾಡಿ, ನಮ್ಮ ನಾಯಕ ಶಾ ರಾಜೀನಾಮೆಗೆ ಕಾಂಗ್ರೆಸ್ಸಿಗರು ಒತ್ತಾಯಿಸಿರುವುದು ಮೂರ್ಖತನದ ಪರಮಾವಧಿ. ಅನರ್ಹ ಶಾಸಕರ ರಾಜೀನಾಮೆ ಶಾ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಯಡಿಯೂರಪ್ಪ ಹೇಳಿದ್ದರು.
ನನ್ನ ಹೇಳಿಕೆಯನ್ನು ತಿರುಚಲಾಗಿದೆ. ಅಮಿತ್ ಶಾ ಸೂಚನೆ ಮೇರೆಗೆ ಶಾಸಕರು ರಾಜೀನಾಮೆ ನೀಡಿದ್ದು, ಈ ವಿಚಾರವನ್ನು ಕೇಂದ್ರ ನಾಯಕರು ನೋಡಿಕೊಂಡಿದ್ದು ಎಂದು ನಾನು ಎಲ್ಲಿಯೂ ಹೇಳಿಲ್ಲ ಎಂದು ಅವರು ಹೇಳಿದ್ದರು.