ಜಜೀರಾ ಏರ್ವೇಸ್ನಿಂದ ಕುವೈತ್-ಬೆಂಗಳೂರು ನೇರ ವಿಮಾನ ಸೇವೆ
ಬೆಂಗಳೂರು, ನವೆಂಬರ್ 2: ಕುವೈತ್ ಮೂಲದ ಕಡಿಮೆ ಪ್ರಯಾಣ ದರದ ಏರ್ಲೈನ್ ಸಂಸ್ಥೆ ಜಜೀರಾ ಏರ್ವೇಸ್ ನವೆಂಬರ್ 3ರಿಂದ ಬೆಂಗಳೂರಿಗೆ ನೇರ ವಿಮಾನ ಸೇವೆಯನ್ನು ಪ್ರಾರಂಭಿಸಿಲಿದೆ. ಇದು ವಾರಕ್ಕೆ ಎರಡು ಬಾರಿ ಅಂದರೆ ಗುರುವಾರ ಮತ್ತು ಶನಿವಾರದಂದು ಕುವೈತ್ ನಗರಕ್ಕೆ ಹಾರಾಟ ನಡೆಸುತ್ತದೆ.
ಈ ಸೇವೆಯು ಭಾರತದಲ್ಲಿ ಜಜೀರಾ ವಿಮಾನ ಸಂಸ್ಥೆ ವಿಸ್ತರಣೆಯ ಭಾಗವಾಗಿದೆ. ಹೊಸ ಸೇವೆಗಳೊಂದಿಗೆ ಜಜೀರಾ ಏರ್ಲೈನ್ ಈಗ ಎರಡು ದೇಶಗಳ ನಡುವಿನ ದ್ವಿಪಕ್ಷೀಯ ವ್ಯವಸ್ಥೆಯಲ್ಲಿ ಲಭ್ಯವಿರುವ ಎಲ್ಲಾ ಸ್ಥಳಗಳಿಗೆ ಹಾರಾಟ ನಡೆಸುತ್ತದೆ ಎಂದು ಸಂಸ್ಥೆಯ ಹೇಳಿಕೆಯು ಮಂಗಳವಾರ ತಿಳಿಸಿದೆ.
ದಕ್ಷಿಣ ಏಷ್ಯಾ ಪ್ರಾದೇಶಿಕ ವ್ಯವಸ್ಥಾಪಕರಾದ ರೊಮಾನಾ ಪರ್ವಿ, ಬೆಂಗಳೂರು ಕುವೈತ್ ಈ ವಿಮಾನ ಸೇವೆಯು ಕುವೈತ್ನಲ್ಲಿರುವ ಭಾರತೀಯ ವಲಸಿಗ ಜನಸಂಖ್ಯೆಯನ್ನು ಭಾರತದೊಂದಿಗೆ ಸಂಪರ್ಕಿಸುತ್ತದೆ. ಭಾರತದಿಂದ ಪ್ರಯಾಣಿಕರನ್ನು ರಜೆ ಮತ್ತು ತೀರ್ಥಯಾತ್ರೆಯ ಸ್ಥಳಗಳಿಗೆ ಸಂಪರ್ಕಿಸುತ್ತದೆ ಎಂದು ಹೇಳಿದರು.

ಕುವೈತ್ನಿಂದ ಬೆಂಗಳೂರಿಗೆ (ಜೆ9 431) ಜಜೀರಾ ಏರ್ವೇಸ್ನ ವಿಮಾನಗಳು ಗುರುವಾರ ಮತ್ತು ಶನಿವಾರದಂದು ಸ್ಥಳೀಯ ಕಾಲಮಾನ ರಾತ್ರಿ 5.55 ಕ್ಕೆ ಕುವೈತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡುತ್ತವೆ ಮತ್ತು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ (ಜೆ9 432) ಹಿಂದಿರುಗುವ ವಿಮಾನಗಳು ಶುಕ್ರವಾರ ಮತ್ತು ಭಾನುವಾರದಂದು ಸ್ಥಳೀಯ ಕಾಲಮಾನ 2 ಗಂಟೆಗೆ ಟೇಕ್ ಆಫ್ ಆಗಲಿವೆ ಹೇಳಿಕೆ ತಿಳಿಸಿದೆ.

ಜಜೀರಾ ಏರ್ವೇಸ್ ವಿಮಾನಯಾನ ಸಂಸ್ಥೆಯು ಭಾರತದ ತನ್ನ ಕಾರ್ಯಾಚರಣೆಯನ್ನು ಹೈದರಾಬಾದ್ನೊಂದಿಗೆ ಅಕ್ಟೋಬರ್ 2017ರಲ್ಲಿ ಪ್ರಾರಂಭಿಸಿತ್ತು. ಇದು ಈಗ ಭಾರತದಲ್ಲಿ ಎಂಟು ಸ್ಥಳಗಳಿಗೆ ವಿಮಾನಯಾನ ಸೇವೆ ಸಲ್ಲಿಸುತ್ತದೆ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು












Click it and Unblock the Notifications