ಬೆಂಗಳೂರಿನಲ್ಲಿ 'ಕುಚ್ ದಿಲ್ ನೇ ಕಹಾ' ರೆಟ್ರೋ ರಾಗ
ಬೆಂಗಳೂರು, ಜ.15: ಮಾತೃ ಫೌಂಡೇಷನ್ ನೆರವಿಗಾಗಿ 'ಕುಚ್ ದಿಲ್ ನೇ ಕಹಾ' ಹೆಸರಿನಲ್ಲಿ ಸಂಗೀತ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದೆ. ಹಿಂದಿ ಚಿತ್ರರಂಗದ ಖ್ಯಾತ ಗಾಯಕಿಯರಾದ ಲತಾ ಮಂಗೇಶ್ಕರ್, ಆಶಾ ಭೋಂಸ್ಲೆ ಹಾಗೂ ಗೀತಾ ದತ್ ಅವರ ಕಂಠಸಿರಿಯಲ್ಲಿ ಬಂದ ಹಾಡುಗಳನ್ನು ರೆಟ್ರೋ ಮ್ಯೂಸಿಕಲ್ ಇವೆಂಟ್ ನಲ್ಲಿ ಕೇಳಬಹುದು.
ಗಾಯಕಿ ಸಮನ್ವಿತಾ ಶರ್ಮ ಹಾಗೂ ತಂಡ ನಡೆಸಿಕೊಡುವ ಈ ಕಾರ್ಯಕ್ರಮ ಆರ್ಕೆಸ್ಟ್ರಾ ಸಂಯೋಜನೆಯನ್ನು ವಿಶೇಷವಾಗಿ ಮುಂಬೈನ ಪ್ರದೀಪ್ ಪಟ್ಕರ್ ಅವರು ವಹಿಸಿಕೊಂಡಿದ್ದಾರೆ. ಈ ಕಾರ್ಯಕ್ರಮದ ಟಿಕೆಟ್ ನಿಂದ ಬರುವ ಮೊತ್ತವನ್ನು ವಿಕಲಾಂಗರಿಗೆ ಆಸರೆ ನೀಡಿ ಪೋಷಣೆ ಮಾಡುತ್ತಿರುವ ಮಾತೃ ಫೌಂಡೇಷನ್ ಗೆ ನೀಡಲಾಗುತ್ತದೆ.
ರೆಟ್ರೋ ರಾಗದಲ್ಲಿ ಖ್ಯಾತ ಗಾಯಕಿ ಸಮನ್ವಿತಾ ಶರ್ಮ ಅವರ ಜೊತೆಗೆ ವಾಯ್ಸ್ ಬೆಂಗಳೂರು ಖ್ಯಾತಿಯ ಅನಿಕೇತ್ ಪ್ರಭು, ಸ್ಟಾರ್ ಸಿಂಗರ್ ಖ್ಯಾತಿಯ ಸುಬ್ರತ್ ಸಾಹೂ, ಸರೆಗಾಮಾಪ ಹಾಗೂ ವಾಯ್ಸ್ ಆಫ್ ಬೆಂಗಳೂರು ಖ್ಯಾತಿ ಗೋವಿಂದ್ ಹಾಗೂ ರೋಹಿಣಿ ಪ್ರಭುನಂದನ್ ಅವರು ಸಾಥ್ ನೀಡಲಿದ್ದಾರೆ.

ಸಮನ್ವಿತಾ ಶರ್ಮ ಬಗ್ಗೆ
SAAMA ಎಂಬ ಕಲೆ, ಮನರಂಜನಾ ತಂಡದ ನಿರ್ದೇಶಕಿ, ಗಾಯಕಿ, ನಿರೂಪಕಿ, ಸುವರ್ಣ ಟಿವಿಯ ಸ್ಟಾರ್ ಸಿಂಗರ್ 2ನಿಂದ ಜನಪ್ರಿಯತೆ ಗಳಿಸಿದವರು.ಇಂಜಿನಿಯರಿಂಗ್ ವ್ಯಾಸಂಗ ಮಾಡಿರುವ ಸಮನ್ವಿತಾ ಅವರು ಕಥಕ್ ನೃತ್ಯಗಾರ್ತಿ ಕೂಡಾ ಹೌದು, ಈಗ 'ಸಾಮ' ಎಂಬ ತಂಡ ಕಟ್ಟಿಕೊಂಡು ಅರ್ಥಪೂರ್ಣ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ.
ಕಾರ್ಯಕ್ರಮ: ಕುಚ್ ದಿಲ್ ನೇ ಕಹಾ
ತಂಡ: ಸಾಮಾ, ಸಮನ್ವಿತಾ ಶರ್ಮ ಹಾಗೂ ತಂಡ.
ನಿರೂಪಣೆ: ವಾಸಂತಿ ಹರಿಪ್ರಕಾಶ್
ಸ್ಥಳ: ಎಡಿಎ ರಂಗಮಂದಿರ, ಜೆ.ಸಿ ರಸ್ತೆ, ಬೆಂಗಳೂರು
ದಿನಾಂಕ/ಸಮಯ: 17ನೇ ಜನವರಿ, 2015, 6.30 PM
ಟಿಕೆಟ್ ಬೆಲೆ: 500 ರು, 300 ರು, 200 ರು
ಹೆಚ್ಚಿನ ಮಾಹಿತಿ ಹಾಗೂ ಟಿಕೆಟ್ ಗಾಗಿ: 99166 88166 ಅಥವಾ ಬುಕ್ ಯುವರ್ ಇವೆಂಟ್.ಕಾಂ ಗೆ ಭೇಟಿ ಕೊಡಿ
ಸಮನ್ವಿತಾ ಅವರ ಹಾಡಿನ ಸ್ಯಾಂಪಲ್ ಇಲ್ಲಿದೆ.. ಅವರ ಯೂಟ್ಯೂಬ್ ಚಾನೆಲ್ ಲಿಂಕ್ ಇಲ್ಲಿದೆ
-
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್ -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Aditya Dhar: ರಣವೀರ್ ಸಿಂಗ್ ಹಿಂದಿಕ್ಕಿ IMDb ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ 'ಧುರಂಧರ್ 2' ನಿರ್ದೇಶಕ ಆದಿತ್ಯ ಧರ್ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ









Click it and Unblock the Notifications