KSRTC Ashwamedha Bus: ರಾಜಧಾನಿಯಿಂದ ಅರಮನೆ ನಗರಿಗೆ 15 ಬಸ್ ಸೇವೆ: ದರ-ವೇಳಾಪಟ್ಟಿ? ಮಾಹಿತಿ
ಮೈಸೂರು, ಫೆಬ್ರವರಿ 11: ಸಾರಿಗೆ ಸೇವೆಯಲ್ಲಿ ಹೊಸ ಬಸ್ಗಳನ್ನು ರಸ್ತೆ ಇಳಿಸುವ ಮೂಲಕ ಪ್ರಯಾಣಿಕರಿಗೆ ಅತ್ಯುತ್ತಮ ಅನುಭವ ನೀಡುತ್ತಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ರಾಜಧಾನಿಯಿಂದ ಇತರ ನಗರಗಳಿಗೆ 'ಅಶ್ವಮೇಧ' (KSRTC Ashwamedha Bus) ಬಸ್ ಬಿಡುತ್ತಿದೆ.
ರಾಜ್ಯದ ಜನರಿಗೆ ಸುವ್ಯವಸ್ಥಿತ ಸಾರಿಗೆ ಸೇವೆ ನೀಡಲು ನಿಗಮವು ಕಳೆದ ವಾರ 100 ಅಶ್ವಮೇಧ ಬಸ್ಗಳನ್ನು ಲೋಕಾರ್ಪಣೆ ಮಾಡಿತ್ತು. ಅದಾದ ಮರು ದಿನವೇ ಬೆಂಗಳೂರಿನಿಂದ ಹಾಸನಕ್ಕೆ ಎರಡು ಜಿಲ್ಲೆಗಳ ಮಧ್ಯೆ 10 ಬಸ್ ಕಾರ್ಯಾಚರಣೆಗೆ ನಿಯೋಜಿಸಿತ್ತು.

ಇದರ ಬೆನ್ನಲ್ಲೆ ಅರಮನೆ ನಗರಿ ಮೈಸೂರು ಮತ್ತು ಬೆಂಗಳೂರು (Mysuru-Bengaluru ashwamedha) ಮಧ್ಯೆ ಈ ನೂತನ ಅಶ್ವಮೇಧ ಬಸ್ ಓಡಿಸುತ್ತಿದೆ. ಈ ಬಸ್ಗಳು ಪಾಯಿಂಟ್ ಟು ಪಾಯಿಂಟ್ ಎಕ್ಸ್ಪ್ರೆಸ್ ಸೇವೆ ನೀಡಲಿವೆ. ಇದರ ಸಮಯ, ಪ್ರಯಾಣದ ಮಾಹಿತಿ ಇಲ್ಲಿದೆ.
20 'ಅಶ್ವಮೇಧಕ್ಕೆ ಬೇಡಿಕೆ
ಮೈಸೂರು KSRTC ವಿಭಾಗವು ಆರಂಭದಲ್ಲಿ 20 'ಅಶ್ವಮೇಧ' ಬಸ್ಗಳಿಗೆ ಬೇಡಿಕೆ ಇಟ್ಟಿತ್ತು. ಮನವಿಗೆ ಸ್ಪಂದಿಸಿರುವ KSRTC ಸದ್ಯ 15 'ಅಶ್ವಮೇಧ' ಬಸ್ಗಳನ್ನು ಮೈಸೂರು ಜಿಲ್ಲೆಗೆ ನಿಗದಿ ಮಾಡಿದೆ. ಇವುಗಳ ಪ್ರತಿನಿತ್ಯ ಸಂಚರಿಸಲಿವೆ ಎಂದು ಮೈಸೂರು ಕೆಎಸ್ಆರ್ಟಿಸಿ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ ಮಾಹಿತಿ ನೀಡಿದರು.
15 'ಅಶ್ವಮೇಧ' ಬಸ್ಗಳು ಮೈಸೂರಿನಿಂದ ಬೆಂಗಳೂರು, ಹುಣಸೂರಿನಿಂದ ಬೆಂಗಳೂರಿಗೆ ಹಾಗೂ ಕೆ.ಆರ್. ನಗರದಿಂದ ಬೆಂಗಳೂರಿಗೆ ಪ್ರತಿನಿತ್ಯ ಕಾರ್ಯಾಚರಣೆ ನಡೆಸುತ್ತಿವೆ. ಪ್ರಸ್ತುತ ಮೈಸೂರು ವಿಭಾಗದಲ್ಲಿ 14 ಎಲೆಕ್ಟ್ರಿಕ್ ಬಸ್ಗಳು ಸೇವೆ ನೀಡುತ್ತಿವೆ. ಹೆಚ್ಚುವರಿಯಾಗಿ 30 ಹೊಸ ಬಸ್ಗಳನ್ನು ನೀಡುವಂತೆ ಮೈಸೂರು ವಿಭಾಗವು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಇವಿ ಬಸ್ಗಳ ಸಂಚಾರಕ್ಕೆ ಶೀಘ್ರ ನಿರ್ಧಾರ
ಮೈಸೂರಿನಿಂದ ಹುಣಸೂರಿಗೆ ಮತ್ತು ಮೈಸೂರಿನಿಂದ ಎಚ್ಡಿ ಸೇರಿದಂತೆ ಹೊಸ ಎಲೆಕ್ಟ್ರಿಕ್ ಬಸ್ಗಳ ಮಾರ್ಗಗಳು. ಕೋಟೆ, ಶೀಘ್ರದಲ್ಲೇ ನಿರ್ಧರಿಸಲಾಗುವುದು ಎಂದು ಶ್ರೀನಿವಾಸ್ ತಿಳಿಸಿದರು.

ವಿಶೇಷವೆಂದರೆ, 'ಅಶ್ವಮೇಧ' ಬಸ್ನ ದರವು ಬದಲಾಗಿಲ್ಲ, ಮೊದಲಿನ ಟಿಕೆಟ್ ದರವೇ ಇದೆ. ಜನರಿಗೆ ಕೈಗೆಟುಕುವ ದರವನ್ನು ಕಾಯ್ದುಕೊಳ್ಳಲಾಗುತ್ತಿದೆ ಎಂದು ಶ್ರೀನಿವಾಸ್ ಸ್ಪಷ್ಟಪಡಿಸಿದರು. ಒಟ್ಟು 3.42 ಮೀಟರ್ ಎತ್ತರದ ಈ 'ಅಶ್ವಮೇಧ' ಬಸ್, 'ಮರುಪರಿವರ್ತನೆ ಪ್ರಯಾಣ' ಎಂಬ ಥೀಮ್ ನಡಿ ರಸ್ತೆಗೆ ಇಳಿದಿವೆ.
ಹೊಸ ಅಶ್ವಮೇಧ ಬಸ್ ವಿಶೇಷತೆಗಳ ವಿವರ
ಲೋಕಾರ್ಪಣೆಗೊಂಡ ಮರುದಿನವೇ ಒಟ್ಟು ಹತ್ತು ಬಸ್ಗಳು ಬೆಂಗಳೂರಿನಿಂದ ಹಾಸನಕ್ಕೆ ಕಾರ್ಯಾಚರಣೆ ಆರಂಭಿಸಿವೆ. ಈ ಅಶ್ವಮೇಧ ಬಸ್ನಲ್ಲಿ ಒಟ್ಟು 52 'ಬಕೆಟ್ ಮಾದರಿಯ' ವಿನ್ಯಾಸದ ಸೀಟುಗಳು ಇವೆ. ವಿಶಾಲ ಒಳಾಂಗಣ ಇದ್ದು, ಟಿಂಟೆಡ್ ಗ್ಲಾಸ್ ಇವೆ. ಮುಂದೆ ಎಲ್ಇಡಿ ವಿದ್ಯುತ್ ಹಾಗೂ ಎಲ್ಇಡಿ ಮಾರ್ಗದ ನೇಮ್ ಬೋರ್ಡ್ ಹಾಕಲಾಗಿದೆ. ಸ್ವಯಂ ಚಾಲಿತ ಭಾಗಿಲುಗಳು ಈ ಬಸ್ನ ಮತ್ತೊಂದು ಹೈಲೈಟ್ ಅನ್ನಬಹುದು. ಎಲ್ಲ ಬಸ್ಗಳಂತೆ ಇದಕ್ಕೂ ತುರ್ತು ಬಾಗಿಲು ವ್ಯವಸ್ಥೆ ಇದೆ. ಇವು ಸೇರಿ ಹಲವು ವ್ಯವಸ್ಥೆಗಳನ್ನು ಈ ಬಸ್ ಒಳಗೊಂಡಿವೆ.
ಇದೇ ತಿಂಗಳ ಫೆಬ್ರವರಿ 5ರಂದು ಬೆಂಗಳೂರಿನ ವಿಧಾನಸೌಧ ಮುಂಭಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಒಟ್ಟು 100 'ಅಶ್ವಮೇಧ' ಬಸ್ಗಳನ್ನು ಉದ್ಘಾಟಿಸಿದ್ದರು. ಈ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.
ಈಗಾಗಲೇ ಪಲ್ಲಕ್ಕಿ, ಪವರ್ ಪ್ಲಸ್, ಎಲೆಕ್ಟ್ರಿಕ್ ಬಸ್ಗಳನ್ನು ಜನರ ಸೇವೆ ನೀಡಿರುವ ಸಾರಿಗೆ ನಿಗಮ, ಅಶ್ವಮೇಧ ಸಹ ನೀಡಿದೆ. ಪ್ರಯಾಣಿಕರ ಹಿತ ದೃಷ್ಟಿಯಿಂದ ಹೊಸ ಹೊಸ ಬಸ್ಗಳನ್ನು ಈರೀತಿ ಬಿಡುಗಡೆ ಮಾಡುತ್ತಲೇ ಇದೆ ಎಂಬುದು ವಿಶೇಷ.












Click it and Unblock the Notifications