Get Updates
Get notified of breaking news, exclusive insights, and must-see stories!

ಕೋಲಾರದ ಯುವತಿ ಅಂಗಾಂಗ ದಾನ: ಏಳು ಜನರ ಬದುಕಿನ ನವ'ಚೈತ್ರ'

ಬೆಂಗಳೂರು, ಫೆಬ್ರವರಿ 12: ವೈವಾಹಿಕ ಜೀವನದ ಹೊಸ್ತಿಲಿನಲ್ಲಿದ್ದ ಯುವತಿಯು ಆರತಕ್ಷತೆ ದಿನವೇ ಅಸ್ವಸ್ಥಗೊಂಡ ಮದುಮಗಳ ಮೆದುಳು ನಿಷ್ಕ್ರಿಯ (ಬ್ರೈನ್ ಡೆಡ್) ಆಗಿರುವಂತಹ ಮನ ಕಲಕುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ನಡೆದಿದೆ. ಬ್ರೈನ್ ಸ್ಟ್ರೋಕ್ ನಿಂದಾಗಿ ಮೃತಪಟ್ಟ ಯುವತಿ ಅಂಗಾಂಗ ದಾನದ ಮೂಲಕ ಏಳು ಜನರ ಬದುಕಿನಲ್ಲಿ ಚೈತ್ರದ ಬೆಳಕು ಮೂಡಿದೆ.
ಕಳೆದ ಫೆಬ್ರವರಿ 6ರಂದು ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಕೋಡಿಚರವು ಗ್ರಾಮದ ಕೆ ವಿ ರಾಮಪ್ಪ ದಂಪತಿಯ ಪುತ್ರಿ 26 ವರ್ಷದ ಚೈತ್ರಾ ವೈವಾಹಿಕ ಬದುಕಿನ ಹೊಸ್ತಿಲಿನಲ್ಲಿದ್ದರು. ಮದುವೆ ಆರತಕ್ಷತೆಯ ದಿನ ಸಂಬಂಧಿಕರೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದ ವಧು ಚೈತ್ರ ದಿಢೀರನೇ ಕುಸಿದು ಬಿದ್ದರು.

ಮದುವೆ ಮನೆಯಲ್ಲೇ ಕುಸಿದು ಬಿದ್ದ ಚೈತ್ರಾರನ್ನು ತಕ್ಷಣವೇ ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿನ ವೈದ್ಯರು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸಲಹೆ ನೀಡಿದ್ದರು. ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಿದ ನಂತರ ವೈದ್ಯರು ಪರೀಕ್ಷೆ ನಡೆಸಿದ್ದು, ಬ್ರೈನ್ ಡೆಡ್ ಆಗಿರುವ ಬಗ್ಗೆ ಗೊತ್ತಾಗಿದೆ.

ಮಗಳ ಸಾವಿನಿಂದ ಪೋಷಕರ ಆಕ್ರಂದನ:
ನವದಾಂಪತ್ಯದ ಹೊಸ್ತಿಲಿನಲ್ಲಿದ್ದ ಮಗಳನ್ನು ಉಳಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ವೈದ್ಯರ ಈ ಮಾತನ್ನು ಕೇಳಿದ ಸಂಬಂಧಿಕರಿಗೆ ಮುಗಿಲು ಕಳಚಿ ಬಿದ್ದಂತಾಯಿತು, ಮಗಳನ್ನು ಕಳೆದುಕೊಂಡ ಆಪ್ತರ ಆಕ್ರಂದನ ಮುಗಿಲು ಮುಟ್ಟಿತ್ತು.

Kolar: Bride Dies Due to Brain Dead, Parents Donated Her Body Organs to Nimhans Bengaluru

ಮಗಳ ಅಂಗಾಂಗ ದಾನಕ್ಕೆ ಪೋಷಕರ ಸಮ್ಮತಿ:
ಚೈತ್ರಾ ಸಂಬಂಧಿಕರಲ್ಲಿ ಧೈರ್ಯ ತುಂಬಿದ ನಿಮ್ಹಾನ್ಸ್ ಆಸ್ಪತ್ರೆ ವೈದ್ಯರು, ಆಕೆ ಅಂಗಾಂಗ ದಾನ ಮಾಡುವುದರ ಮೂಲಕ ಹಲವರ ಬದುಕಿಗೆ ಬೆಳಕಾಗಬಹುದು ಎಂಬ ಸಲಹೆ ನೀಡಿದರು. ವೈದ್ಯರ ಸಲಹೆಗೆ ಒಪ್ಪಿಕೊಂಡ ಸಂಬಂಧಿಕರು ಅಂಗಾಂಗ ದಾನಕ್ಕೆ ಸಮ್ಮತಿ ಸೂಚಿಸಿದರು. ತದನಂತರ ಮೂತ್ರಪಿಂಡ, ಕಣ್ಣು, ಹೃದಯವನ್ನು ದಾನ ಮಾಡಲಾಯಿತು. ಅಂಗಾಂಗಾ ದಾನದ ಮೂಲಕ ಸಾವಿನ ನಂತರವೂ ಹಲವರ ಬದುಕಿಗೆ ಬೆಳಕು ನೀಡುವ ಮೂಲಕ ಚೈತ್ರಾ ಜೀವಂತವಾಗಿದ್ದಾರೆ. ಮಗಳ ಅಗಲಿಕೆ ನೋವಿನ ನಡುವೆಯೂ ಅಂಗಾಂಗ ದಾನಕ್ಕೆ ಸಮ್ಮತಿಸಿದ ಪೋಷಕರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಚೈತ್ರಾ ಅಂಗಾಂಗ ದಾನದ ಬಗ್ಗೆ ಟ್ವೀಟ್:


"26 ವರ್ಷಗಳ ಚೈತ್ರಾ ಪಾಲಿಗೆ ಇದು ಒಂದು ಮಹತ್ವದ ದಿನವಾಗಿತ್ತು, ಆದರೆ ವಿಧಿಯಾಟವೇ ಬೇರೆ ಆಗಿತ್ತು. ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಮದುವೆಯ ಆರತಕ್ಷತೆ ವೇಳೆ ಕುಸಿದು ಬಿದ್ದರು. ನಂತರ ನಿಮ್ಹಾನ್ಸ್ ನಲ್ಲಿ ಆಕೆಯ ಬ್ರೈನ್ ಡೆಡ್ ಆಗಿರುವ ಬಗ್ಗೆ ಘೋಷಿಸಲಾಯಿತು. ಹೃದಯವಿದ್ರಾವಕ ದುರಂತದ ನಡುವೆಯೂ ಆಕೆಯ ಪೋಷಕರು ಆಕೆಯ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದ್ದಾರೆ," ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಟ್ವೀಟ್ ಮಾಡಿದ್ದಾರೆ.

Recommended Video

      Karnatakaದ ಈ ಆಟಗಾರರು ನಾಳೆ ಯಾವ ತಂಡಗಳಿಗೆ ಮಾರಾಟವಾಗ್ತಾರೆ | Oneindia Kannada

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+