ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಡಿಯೂರಪ್ಪ, ನಿರಾಣಿ ಕೊರಳಿಗೆ ಉರುಳಾದ ಡಿನೋಟಿಫಿಕೇಷನ್ ಕೇಸ್

|
Google Oneindia Kannada News

ಬೆಂಗಳೂರು, ಸೆ. 30: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಮಾಜಿ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಕ್ಕೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳ ಎಂಬುವರು ಸೋಮವಾರ(ಸೆ.30)ದಂದು ದೂರು ನೀಡಿದ್ದಾರೆ.

"2009ರಲ್ಲಿ ಬೆಂಗಳೂರಿನ ಹೊರ ವಲಯದ ಆನೇಕಲ್ ನಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ(ಕೆಐಎಡಿಬಿ)ಗೆ ಸೇರಿದ 9.20 ಎಕರೆ ಭೂಮಿಯನ್ನು ಅಕ್ರಮವಾಗಿ ಡಿನೋಟಿಫಿಕೇಷನ್ ಮಾಡಿದ ಆರೋಪವನ್ನು ಅಂದಿನ ಕೈಗಾರಿಕಾ ಸಚಿವ ನಿರಾಣಿ, ಯಡಿಯೂರಪ್ಪ ಮೇಲೆ ಹೊರೆಸಲಾಗಿದ್ದು, ಇದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರುಪಾಯಿ ನಷ್ಟವಾಗಿದೆ" ಎಂದು ದಿನೇಶ್ ಅವರು ತಮ್ಮ ದೂರಿನಲ್ಲಿ ಹೇಳಿದ್ದಾರೆ.

ಯಡಿಯೂರಪ್ಪಗೆ ತಾತ್ಕಾಲಿಕ ನೆಮ್ಮದಿ ನೀಡಿದ 5 ಪ್ರಕರಣಗಳುಯಡಿಯೂರಪ್ಪಗೆ ತಾತ್ಕಾಲಿಕ ನೆಮ್ಮದಿ ನೀಡಿದ 5 ಪ್ರಕರಣಗಳು

ಶ್ರೀರಾಂಪುರ, ಆರ್ ಎಂ ವಿ ಬಡಾವಣೆ ಹಾಗೂ ಕೆಂಪಾಪುರದಲ್ಲಿ ಕ್ರಮವಾಗಿ 11 ಎಕರೆ 25 ಗುಂಟೆ, ನಾಗರಬಾವಿಯಲ್ಲಿ 5 ಎಕರೆ 13 ಗುಂಟೆ ಜಾಗವನ್ನು ಯಡಿಯೂರಪ್ಪ ಡಿನೋಟಿಫಿಕೇಷನ್ ಮಾಡಿದ್ದಾರೆ ಎಂದು ಬಿಎಸ್ವೈ ವಿರುದ್ಧ ಪ್ರಕರಣಗಳು ದಾಖಲಾಗಿತ್ತು. ಬೆಂಗಳೂರಿನ ದೇವನಹಳ್ಳಿಯಲ್ಲಿ ಕೆಐಎಡಿಬಿ ಮೂಲಕ ನಕಲಿ ದಾಖಲೆ ಸೃಷ್ಟಿಸಿ 26 ಎಕರೆ ಭೂಮಿಯನ್ನು ತಮ್ಮ ಕಂಪನಿಗೆ ನಿರಾಣಿ ಪಡೆದಿದ್ದಾರೆ. ಇದಕ್ಕೂ ಮೊದಲು 26 ಎಕರೆ ಭೂಮಿಯನ್ನು ಹಾರ್ಡ್‌ವೇರ್ ಪಾರ್ಕ್‌ಗಾಗಿ ಮೀಸಲಿಡಲಾಗಿತ್ತು ಎಂಬ ಕೂಡಾ ಈ ಹಿಂದೆ ದೂರುಗಳು ಕೇಳಿ ಬಂದಿದ್ದವು.

KIADB denotification: Complaint filed against CM Yediyurappa and Murugesh nirani

ಎಚ್ ಆರ್ ನಿರಾಣಿ, ಶರಣ ಬಸಯ್ಯ, ಕರಿಯಣ್ನನವರ್, ಬೇಗೂರು ರುದ್ರಮೂರ್ತಿ,ಪೂರ್ಣಚಂದ್ರ, ಆರ್ ವಿ ವಡ್ನಾಳ್, ಶಾಂತ ಸುಬೀರ ಬೇಲೂರು, ಮೋಹನ್ ಎಂ, ಹೀರೇಮಠ ಮತ್ತು ಎಂ ರೋಷಯ್ಯ ಎಂಬುವರ ಮೇಲೆ ಆರೋಪವನ್ನು ಹೊರೆಸಲಾಗಿತ್ತು. ಕೈಗಾರಿಕಾ ಉದ್ದೇಶಕ್ಕಾಗಿ ಕೆಐಎಡಿಬಿ ಮೂಲಕ ರಾಜ್ಯದ ವಿವಿಧ ಪ್ರದೇಶದಲ್ಲಿ ವಶಪಡಿಸಿಕೊಂಡಿದ್ದ 1, 690ಕ್ಕೂ ಹೆಚ್ಚು ಎಕರೆ ಭೂಮಿಯನ್ನು ತಮ್ಮ ಕುಟಂಬ ಸದಸ್ಯರ ಮತ್ತು ಆಪ್ತರ ಒಡೆತನದ ಕಂಪೆನಿಗಳಿಗೆ ನಿಯಮ ಬಾಹಿರವಾಗಿ ಮಂಜೂರು ಮಾಡಿದ್ದಾರೆ ಎಂದು ನಿರಾಣಿ ಅವರ ಮೇಲೆ ಆರೋಪವಿತ್ತು.

ಯಡಿಯೂರಪ್ಪಗೆ ರಿಲೀಫ್, 5 ಕೇಸು ವಜಾಗೊಳಿಸಿದ ಸುಪ್ರೀಂಕೋರ್ಟ್‌ಯಡಿಯೂರಪ್ಪಗೆ ರಿಲೀಫ್, 5 ಕೇಸು ವಜಾಗೊಳಿಸಿದ ಸುಪ್ರೀಂಕೋರ್ಟ್‌

ಆದರೆ ಕೆಐಎಡಿಬಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ಆರೋಪ ಹೊತ್ತಿದ್ದ ಅಂದಿನ ಬೃಹತ್ ಕೈಗಾರಿಕಾ ಸಚಿವ ಮರುಗೇಶ್ ನಿರಾಣಿ ಅವರಿಗೆ ಲೋಕಾಯುಕ್ತ ಕೋರ್ಟ್ ಕ್ಲೀನ್ ಚಿಟ್ ನೀಡಿತ್ತು. ನ್ಯಾಯಮೂರ್ತಿ ಎನ್.ಕೆ.ಸುಧೀಂದ್ರ ರಾವ್ ಅವರು ನಿರಾಣಿ ಮೇಲಿದ್ದ ಪ್ರಕರಣಗಳನ್ನು ವಜಾಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
KIADB denotification: Social activist Dinesh Kallahalla has files complaint with ACB against CM Yediyurappa and former Industry minister Murugesh nirani.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X